
ಅಫ್ಘಾನಿಸ್ತಾನದ ಆಡಳಿತವು ತಾಲಿಬಾನ್ ಕೈಗೆ ಸಿಕ್ಕಿರುವುದು ಈಗಾಗಲೇ ಭಯೋತ್ಪಾದನೆಯಿಂದ ನಲುಗುತ್ತಿರುವ ರಾಷ್ಟ್ರಗಳಿಗೆ ಇನ್ನಷ್ಟು ಆತಂಕ ಹೆಚ್ಚಾಗುವುದಕ್ಕೆ ಕಾರಣ ಆಗಿದೆ. ಬೋಕೋ ಹರಾಮ್, ಅಲ್ ಕೈದಾ, ಲಷ್ಕರ್-ಇ-ತೈಬಾ, ಇಂಡಿಯನ್ ಮುಜಾಹಿದೀನ್, ಐಎಸ್ಐಎಸ್ ಸೇರಿದಂತೆ ಈಗಾಗಲೇ ಫ್ಯಾಕ್ಟರಿ ರೀತಿಯಲ್ಲಿ ಭಯೋತ್ಪಾದನೆ ನಡೆಸುತ್ತಿರುವ ಉಗ್ರ ಸಂಘಟನೆಗಳಿಗೆ ಸುವಿಶಾಲವಾದ, ಸುರಕ್ಷಿತವಾದ ಟ್ರೇನಿಂಗ್ ಸೆಂಟರ್ನಂತಾಗುತ್ತದೆ ಅಫ್ಘಾನಿಸ್ತಾನ. ನಿಮಗೆ ನೆನಪಿದೆ ಅನ್ನೋದಾದರೆ, ಮುಂಬೈ ದಾಳಿ ಆರೋಪಿಗಳು ಎಂದು ಭಾರತವು ಯಾವ ಉಗ್ರರ ಮೇಲೆ ಆರೋಪ ಮಾಡಿತೋ ಅಂಥವರ ವಿರುದ್ಧ ಪಾಕಿಸ್ತಾನದಲ್ಲಿ ಪ್ರಕರಣ ನಡೆಯುವಂತಾಗಿದೆ. ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಪಾಕ್ಗೆ ಮುಜುಗುರ ಆಗುವಂತಾಗಿದೆ. ಆದರೆ ಅಫ್ಘಾನಿಸ್ತಾನದಲ್ಲಿ ಹೀಗಾಗುವುದಕ್ಕೂ ಸಾಧ್ಯವಿಲ್ಲ. ಏಕೆಂದರೆ, ಆಡಳಿತ ನಡೆಸುವಂಥವರು ಕಟ್ಟರ್ ಇಸ್ಲಾಂ ಮೂಲಭೂತವಾದಿಗಳು. ಅದೊಮ್ಮೆ ಅಮೆರಿಕದಿಂದ ಹೊರದಬ್ಬಿಸಿಕೊಂಡ ಕಹಿ ಅನುಭವವೂ ಜತೆಗಿದೆ. ಒಂದೊಮ್ಮೆ ಮತ್ತೆ ಹಾಗೇ ಆದಲ್ಲಿ ಸಮಾನ ಮನಸ್ಕ, ಸಮಾನ ಬಲರ ಸ್ನೇಹ ಅದಕ್ಕೆ ಬೇಕು. ಆ ಕಾರಣಕ್ಕೆ ಈ ಮೇಲೆ ತಿಳಿಸಿದ ಸಂಘಟನೆಗಳು ತಾಲಿಬಾನ್ ಪಾಲಿಗೆ ಬೇಕೇಬೇಕಾಗುತ್ತದೆ.

ಇನ್ನು ಉಗ್ರ ಸಂಘಟನೆಗಳು ಅಂದ ಮೇಲೆ ಯಾವುದಾದರೂ ದೇಶದಲ್ಲಿ ದಾಳಿ ಮಾಡುವುದು, ಅಮಾಯಕರ ಪ್ರಾಣ ತೆಗೆಯುವುದು, ಆಸ್ತಿಗಳು ಹಾನಿ ಆಗುವುದು ಇಂಥವೆಲ್ಲ ಆಗಾಗ ನಡೆಸುತ್ತಲೇ ಇರುತ್ತಾರೆ. ಒಂದು ದೇಶಕ್ಕೆ ಬೇಕಾದ ಉಗ್ರರು ಬಂದು ಅಫ್ಘಾನಿಸ್ತಾನವನ್ನು ಹೊಕ್ಕಿ ಕುಳಿತು ಬಿಟ್ಟರೆ ಅಲ್ಲಿಂದ ಅವರನ್ನು ಹೆಕ್ಕಿ ತೆಗೆಯುವುದು ಅಸಾಧ್ಯ. ಒಂದು ಸರ್ಕಾರವೇ ಬೆಂಬಲವಾಗಿ ಇರುವಾಗ ಹಾಗೂ ಆ ದೇಶದ ಜತೆಗೆ ರಾಜತಾಂತ್ರಿಕ ಸಂಬಂಧವೇ ಇಲ್ಲದಿರುವಾಗ ಏನು ಮಾಡುವುದಕ್ಕೆ ಸಾಧ್ಯ? ಉದಾಹರಣೆಗೆ ನೋಡಿ, ದಾವೂದ್ ಇಬ್ರಾಹಿಂ ಭಾರತದ ಮೋಸ್ಟ್ ವಾಂಟೆಡ್. ಆತ ಪಾಕಿಸ್ತಾನದ ಇಂಥ ವಿಳಾಸದಲ್ಲಿಯೇ ಇದ್ದಾನೆ. ಆತನಿಗೆ ಐಎಸ್ಐ ಬೆಂಬಲ ಹಾಗೂ ಕಾವಲು ಒದಗಿಸಲಾಗಿದೆ ಎಂದು ಭಾರತ ಹೇಳುತ್ತಾ ಬಂದಿದ್ದರೂ ಈ ತನಕ ಏನೂ ಮಾಡಲು ಸಾಧ್ಯವಾಗಿಲ್ಲ. ಏಕೆಂದರೆ, ಭಾರತ ಮತ್ತು ಪಾಕಿಸ್ತಾನದ ಮಧ್ಯದ ಸಂಬಂಧ ಅಂಥದ್ದು.

ವಿಜ್ಞಾನ, ತಂತ್ರಜ್ಞಾನ, ಕ್ರೀಡೆ, ಸಂಗೀತ, ಕಲೆಗೆ ಪ್ರೋತ್ಸಾಹ ಸಿಗಲ್ಲ

ಸಾಂದರ್ಭಿಕ ಚಿತ್ರ

ನೆರೆಹೊರೆಯ ದೇಶಗಳಿಗೆ ಒತ್ತಡ

ಭಾರತಕ್ಕೆ ಎಚ್ಚರಿಕೆ
Published On - 5:00 pm, Wed, 18 August 21