Unlucky Zodiac Signs: ಈ 5 ರಾಶಿಯವರು ದುರದೃಷ್ಟವಂತರು ಏಕೆ? ಇಲ್ಲಿದೆ ಕಾರಣ ಸಹಿತ ವಿವರಣೆ
ಜ್ಯೋತಿಷ್ಯದ ಪ್ರಕಾರ ಈ 5 ರಾಶಿಗಳವರನ್ನು ದುರದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ. ಅದಕ್ಕೆ ಕಾರಣ ಏನು ಮತ್ತು ಸರಿ ಮಾಡಿಕೊಳ್ಳುವುದು ಹೇಗೆ ಎಂಬ ವಿವರಣೆ ಇಲ್ಲಿದೆ.
Updated on: Aug 19, 2021 | 7:10 AM

ಅಯ್ಯೋ, ನಮಗೆಲ್ಲಿದೆ ಅದೃಷ್ಟ ಎಂದು ಕೊರಗುವವರಿದ್ದಲ್ಲಿ ಕಡ್ಡಾಯವಾಗಿ ಓದಬೇಕಾದ ಜ್ಯೋತಿಷ ಲೇಖನ ಇದು. ಏಕೆಂದರೆ, ಅದೃಷ್ಟ ಏಕೆ ಇಲ್ಲ ಎಂಬುದನ್ನು ತಿಳಿಸಿಕೊಡುತ್ತದೆ. ಆದರೆ ಈ ಲೇಖನದಲ್ಲಿ 5 ರಾಶಿಗಳವರನ್ನು ಪಟ್ಟಿ ಮಾಡಿ, ದುರದೃಷ್ಟವಂತರು ಎನ್ನಲಾಗಿದೆ. ಹಾಗೆ ಸುಮ್ಮನೆ ಹೇಳಿಲ್ಲ. ಅದಕ್ಕೆ ಕಾರಣವನ್ನೂ ಮತ್ತು ಅದರಿಂದ ಹೊರಬರುವವರನ್ನೂ ಹೊರಬರುವ ಬಗೆಯನ್ನೂ ತಿಳಿಸಲಾಗಿದೆ.

ಕನ್ಯಾ ರಾಶಿ ಈ ರಾಶಿಯವರಿಗೆ ಎಲ್ಲವೂ ಲೆಕ್ಕಾಚಾರದಂತೆಯೇ ಆಗಬೇಕು. ತಮ್ಮ ಹತೋಟಿಯಲ್ಲಿ ಇಟ್ಟುಕೊಂಡು, ಅಂದುಕೊಂಡ ರೀತಿಯಲ್ಲೇ ಪ್ರತಿ ಹೆಜ್ಜೆಯನ್ನು ಇಡಬುಸುವಂತಹ ಜನರಿವರು. ಆ ಕಾರಣಕ್ಕೆ ಸಣ್ಣ ಬದಲಾವಣೆ ಅಂದರೂ ಹೆದರುತ್ತಾರೆ. ಆ ಕಾರಣಕ್ಕೆ ಅಭಿವೃದ್ಧಿಯ ಅವಕಾಶ ಬಂದು ಬಾಗಿಲು ತಟ್ಟುವಾಗ ಹಾಗೇ ಕೈ ಚೆಲ್ಲುವುದುಂಟು. ಈ ರಾಶಿಯವರು ಒಂದಿಷ್ಟು ಸಕಾರಾತ್ಮಕವಾಗಿ ಆಲೋಚನೆ ಮಾಡುವ ಮೂಲಕ ಬದಲಾವಣೆ ತಂದುಕೊಳ್ಳಬಹುದು. ಆದರೆ ಆ ಆಲೋಚನೆ ಮಾಡುವಂತೆ ಬೇರೆ ಯಾರೂ ಇವರನ್ನೂ ಪ್ರೇರೇಪಿಸಲು ಸಾಧ್ಯವಿಲ್ಲ.

ಒಂದು ರಾಶಿಯವರು ಎಷ್ಟು ಬಾರಿ ದುರದೃಷ್ಟಕ್ಕೆ ಎದುರಾಗಬಹುದು ಎಂದು ಆಶ್ಚರ್ಯ ಉಂಟಾಗುವಂತೆ ಇವರ ಬದುಕು ಇರುತ್ತದೆ. ಈ ವೃಶ್ಚಿಕ ರಾಶಿಯವರ ಜೀವನವು ಅಸ್ತವ್ಯಸ್ತವಾಗಿರುತ್ತದೆ. ಆದರೂ ಅದು ಅವರಿಗೆ ಸರಿಹೊಂದುತ್ತದೆ. ಏಕೆಂದರೆ ಇದು ಅವರಿಗೆ ಸ್ಥಾನವೊಂದನ್ನು ದೊರಕಿಸಿಕೊಡುತ್ತದೆ. ತಮ್ಮನ್ನು ತಾವು ಮೇಲಕ್ಕೆ ಏರುವಂತೆ ಮಾಡಿಕೊಳ್ಳಲು ಮತ್ತು ಮುಂದಿನ ಭವಿಷ್ಯಕ್ಕೆ ಸಂಸಿದ್ಧರಾಗಲು, ಮಾನಸಿಕವಾಗಿ ಬಲಶಾಲಿಯಾಗಲು ಅನುಕೂಲ ಮಾಡಿಕೊಡುತ್ತದೆ. ಈ ರಾಶಿಯವರೇನೂ ನಿರ್ದಿಷ್ಟವಾಗಿ ಅದೃಷ್ಟವಂತರು ಅಂತೇನಲ್ಲ. ಆದರೆ ಎಂದಿಗೂ ಕೈ ಚೆಲ್ಲುವುದಿಲ್ಲ.

ಮಕರ ರಾಶಿಯವರು ತಮ್ಮ ಶ್ರಮವನ್ನು ಅವಲಂಬಿಸಲು ಬಯಸುತ್ತಾರೆ. ಅಷ್ಟೇ ಅಲ್ಲ, ಮಕರ ರಾಶಿಯವರು ಅದೃಷ್ಟವನ್ನು ನಂಬುವುದಿಲ್ಲ, ಬದಲಾಗಿ ಅವರು ಕೆಲಸವನ್ನು ನಂಬುತ್ತಾರೆ. ಆದ್ದರಿಂದ ಕೆಲವೊಮ್ಮೆ ಅವರು ತಮ್ಮ ಅದೃಷ್ಟವನ್ನು ಸೃಷ್ಟಿ ಮಾಡಿಕೊಳ್ಳುತ್ತಾರೆ, ಆದರೆ ಜೀವನವು ಅವರಿಗೆ ಅವಕಾಶಗಳನ್ನು ನೀಡುವುದು ಅಪರೂಪ. ಯಾವುದೇ ಸಂದರ್ಭದಲ್ಲಿ ತಮ್ಮಷ್ಟಕ್ಕೆ ಮನೆಯಲ್ಲಿ ಇರಬಯಸುವಂಥ ಜನರಿವರು. ಮತ್ತು ಹೆಚ್ಚು ಹೊರಬರುವುದಿಲ್ಲ, ಆದ್ದರಿಂದ ಅವರು ತಮ್ಮ ಅವಕಾಶಗಳನ್ನು ಹೇಗೆ ಬಳಸಿಕೊಳ್ಳಬಹುದು ಅನ್ನೋದನ್ನು ತಿಳಿಯುವುದು ಕಷ್ಟವಲ್ಲ.

ಈ ರಾಶಿಯವರು ಎಲ್ಲೆಡೆಯೂ ಕೆಟ್ಟದನ್ನೇ ಗುರುತಿಸುತ್ತಾರೆ. ಮತ್ತು ಇವರಿಗೆ ತಮ್ಮ ಕಂಫರ್ಟ್ ಝೋನ್ನಿಂದ ಹೊರಬರುವುದು ಬಹಳ ಕಷ್ಟದ ಸಂಗತಿ. ಈ ಎರಡು ವಿಚಾರಗಳಿವೆಯಲ್ಲಾ, ಇದೇ ಸಾಕು. ಕರ್ಕಾಟಕ ರಾಶಿಯವರನ್ನು ದುರದೃಷ್ಟವಂತರನ್ನಾಗಿ ಮಾಡಿಬಿಡುತ್ತದೆ. ತಮಗೆ ನಿರಾಸೆ ಆಗಬಾರದು ಎಂಬ ಕಾರಣಕ್ಕೆ ಹೊಸ ವಿಚಾರಗಳನ್ನು ಅಳವಡಿಸಿಕೊಳ್ಳುವ ಗೋಜಿಗೇ ಈ ರಾಶಿಯವರು ಹೋಗಲ್ಲ. ಇವರಲ್ಲಿ ನಿರಾಶೆಯ ಭಾವ ಯಾವಾಗಲೂ ಕಾಡುತ್ತಲೇ ಇರುತ್ತದೆ. ತಮಗೊಂದು ಅವಕಾಶ ಇದೆ ಎಂದು ಕಣ್ಣೆದುರೇ ಇದ್ದರೂ ಒಪ್ಪಿಕೊಳ್ಳದಷ್ಟು ನಿರಾಶವಾದಿಗಳು ಇವರು. ಆದರೆ ಒಂದು ಸಲ ಸಿಕ್ಕರೆ ಗಟ್ಟಿಯಾಗಿ ಹಿಡಿಯುತ್ತಾರೆ.

ಯಾವುದೇ ಭರವಸೆಯಿಲ್ಲದೆ ಅವಕಾಶಗಳನ್ನು ಹುಡುಕುತ್ತಾ ಇರುವಂಥವರನ್ನು ನೋಡಬೇಕು ಅಂತಿದ್ದರೆ ಕುಂಭ ರಾಶಿಯವರನ್ನು ನೋಡಬಹುದು. ಇತರ ರಾಶಿಗಳಿಗಿಂತ ಭಿನ್ನವಾಗಿ, ಕುಂಭ ರಾಶಿಯವರು ಬದಲಾವಣೆಯನ್ನು ಹೇಗೆ ಎದುರಿಸಬೇಕೆಂದು ತಿಳಿದಿರುತ್ತಾರೆರೆ. ಸವಾಲಿನ ಸನ್ನಿವೇಶಗಳು ಅವರನ್ನು ಹೆಚ್ಚು ಉತ್ತೇಜಿಸುತ್ತವೆ/ ಸವಾಲುಗಳನ್ನು ಅವರು ಹುಡುಕುವ ಮಟ್ಟಿಗೆ ಅವುಗಳು ಕಿಕ್ ಕೊಡುತ್ತವೆ. ತಮ್ಮನ್ನು ತಾವೇ ಅಪ್ಡೇಟ್ ಆಗಿ ಇಟ್ಟುಕೊಳ್ಳಬೇಕೆಂದು ಬಯಸುವವರು. ಹಾಗಾದರೆ, ಸಮಸ್ಯೆ ಏನು? ಆದರೆ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ಎಲ್ಲಿಯೂ ದೀರ್ಘಕಾಲ ಉಳಿಯುವುದಿಲ್ಲ. ಒಂದು ವೇಳೆ ಅದೃಷ್ಟಶಾಲಿಗಳಾಗಬೇಕು ಎಂತಾದಲ್ಲಿ ಹೆಚ್ಚು ಕಾಲ ಒಂದಕ್ಕೆ ಅಂಟಿಕೊಳ್ಳಬೇಕು.




