
ಹಂಪಿಯ ಇತಿಹಾಸದಲ್ಲೇ ಇದೇ ಮೊದಲೆಂಬಂತೆ ವಿಜಯನಗರದ ಈ ಪುರಾತನ ರಾಜಧಾನಿ ವಿಶಿಷ್ಟ, ಅದ್ವಿತೀಯ, ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಸಾಕ್ಷಿಯಾಯಿತು.

ಹಂಪಿಯ ಬಸವಣ್ಣ ಮಂಟಪದ ಎದುರು ನಡೆದ ಈ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಮಡಿಕೆಗೆ ಸಿರಿಧಾನ್ಯ ಸುರಿದು ಚಾಲನೆ ನೀಡಿದರು.

ಯೋಗ ದಿನಾಚರಣೆ ಪ್ರಯುಕ್ತ ಯೋಗಗುರು ಶ್ರೀ ವಚನಾನಾಂದ ಸ್ವಾಮೀಜಿ ನೇತೃದಲ್ಲಿ ಕಾರ್ಯಕ್ರಮ ನೆರವೇರಿತು.

ದೇಹ ಮತ್ತು ಮನಸ್ಥಿತಿಯನ್ನ ಸಮಚಿತ್ತದಲ್ಲಿ ಇಟ್ಟುಕೊಳ್ಳಲು ಯೋಗ ಪ್ರಾಣಾಯಾಮ ಸಹಕಾರಿಯಾಗಿದೆ. ಅಂತರಾಷ್ಟ್ರೀಯ ಯೋಗ ದಿನಾಚರಣೆ ಮಾಡಲು ಅನೇಕ ರಾಷ್ಟ್ರಗಳು ಒಪ್ಪಿಕೊಂಡಿವೆ. ಕತ್ತಲೆಯಿಂದ ಬೆಳಕಿನೆಡೆಗೆ ಯೋಗ ಕರೆದೊಯ್ಯುತ್ತದೆ. ಯೋಗ ಕೇವಲ ಒಂದು ದಿನದ ಪ್ರಕ್ರಿಯೆ ಆಗಬಾರದು, ಯೋಗ ಜೀವನದ ಒಂದು ಭಾಗ ಆಗಬೇಕು. -ಪ್ರಲ್ಹಾದ ಜೋಶಿ

ಭಾರತದ ಒಟ್ಟು ಪದ್ದತಿಗಳಲ್ಲಿ ನಮ್ಮ ಭಾಷೆ ಸಂಸ್ಕೃತಿ ಈಡೀ ವಿಶ್ವಕ್ಕೆ ಮಾದರಿಯಾಗಿದೆ. ಸಾವಿರ ಸಾವಿರ ವರ್ಷಗಳ ಅತಿಕ್ರಮಣ ನಂತರವೂ ಭಾರತದ ಸಂಸ್ಕೃತಿ ಇಂದಿಗೂ ಉಳಿದಿದೆ. -ಪ್ರಲ್ಹಾದ ಜೋಶಿ

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಕಳೆದೊಂದು ತಿಂಗಳಿಂದ ಹಂಪಿಯಲ್ಲಿ ಯೋಗಾಭ್ಯಾಸ ನಡೆದಿದ್ದು ಗರಿಷ್ಠ ಸಂಖ್ಯೆಯಲ್ಲಿ ಜನರು ಭಾಗಿಯಾಗಿದ್ದರು.

ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಐದು ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು.