ರಾಜಕೀಯ ಕೆಲಸಕ್ಕೆ ಕೊಂಚ ಬಿಡುವು: ಪಗಡೆ ಆಟವಾಡಿದ ಪ್ರಲ್ಹಾದ್​ ಜೋಶಿ

Edited By: ವಿವೇಕ ಬಿರಾದಾರ

Updated on: Nov 21, 2024 | 11:27 AM

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಧಾರವಾಡದ ಹೆಬ್ಬಳ್ಳಿ ಗ್ರಾಮದ ಮೂಗ ಬಸವೇಶ್ವರ ದೇವಸ್ಥಾನದಲ್ಲಿ ಹಿರಿಯರೊಂದಿಗೆ ಪಗಡೆಯಾಟ ಆಡಿದ್ದಾರೆ. ರಾಜಕೀಯದಿಂದ ವಿರಾಮ ಪಡೆದು ತಮ್ಮ ಬಾಲ್ಯವನ್ನು ನೆನಪಿಸಿಕೊಂಡರು. ಈ ಘಟನೆಯನ್ನು ಟ್ವೀಟ್ ಮಾಡಿ, ಜೀವನದಲ್ಲಿ ನಾವು ಕೇವಲ ಕಾಯಿಗಳು ಎಂದು ಅವರು ಬರೆದಿದ್ದಾರೆ. ದೇವರ ಆಶೀರ್ವಾದದಿಂದ ಈ ಅವಕಾಶ ಸಿಕ್ಕಿದೆ ಎಂದಿದ್ದಾರೆ.

1 / 5
ರಾಜಕೀಯ ಕೆಲಸದಿಂದ ಕೊಂಚ ಬಿಡುವು ಮಾಡಿಕೊಂಡ ಕೇಂದ್ರ ಸಚಿವ ಪ್ರಲ್ದಾದ್ ಜೋಶಿ ಇಂದು ಹಿರಿಯರೊಂದಿಗೆ ಪಗಡೆಯಾಟ ಆಡಿ ತಮ್ಮ ಬಾಲ್ಯವನ್ನು ಮೆಲಕು ಹಾಕಿದರು.

ರಾಜಕೀಯ ಕೆಲಸದಿಂದ ಕೊಂಚ ಬಿಡುವು ಮಾಡಿಕೊಂಡ ಕೇಂದ್ರ ಸಚಿವ ಪ್ರಲ್ದಾದ್ ಜೋಶಿ ಇಂದು ಹಿರಿಯರೊಂದಿಗೆ ಪಗಡೆಯಾಟ ಆಡಿ ತಮ್ಮ ಬಾಲ್ಯವನ್ನು ಮೆಲಕು ಹಾಕಿದರು.

2 / 5
ಹೌದು. ಪ್ರಲ್ಹಾದ್​ ಜೋಶಿ ಇಂದು ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮಕ್ಕೆ ಕಾರ್ಯಕ್ರಮ ನಿಮಿತ್ತ ಭೇಟಿ ನೀಡಿದ  ಸಂದರ್ಭದಲ್ಲಿ ಮೂಗ ಬಸವೇಶ್ವರ ದೇವಸ್ಥಾನಕ್ಕೆ ಈ ಘಟನೆ ನಡೆದಿದೆ.

ಹೌದು. ಪ್ರಲ್ಹಾದ್​ ಜೋಶಿ ಇಂದು ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮಕ್ಕೆ ಕಾರ್ಯಕ್ರಮ ನಿಮಿತ್ತ ಭೇಟಿ ನೀಡಿದ ಸಂದರ್ಭದಲ್ಲಿ ಮೂಗ ಬಸವೇಶ್ವರ ದೇವಸ್ಥಾನಕ್ಕೆ ಈ ಘಟನೆ ನಡೆದಿದೆ.

3 / 5
ದೇವಸ್ಥಾನದ ಭೇಟಿ ವೇಳೆ ಪ್ರಾಂಗಣದಲ್ಲಿ ಗ್ರಾಮದ ಹಿರಿಯರು ಪಗಡೆಯಾಡುತ್ತಿದ್ದರು. ಇದನ್ನು ನೋಡಿ ಅವರು ಆಟಕ್ಕೆ ಕುಳಿತುಕೊಂಡರು. ದೇವರಿಗೆ ನಮಸ್ಕರಿಸಿ ದಾಳ ಉರುಳಿಸಿ ಖುಷಿ ಪಟ್ಟರು.

ದೇವಸ್ಥಾನದ ಭೇಟಿ ವೇಳೆ ಪ್ರಾಂಗಣದಲ್ಲಿ ಗ್ರಾಮದ ಹಿರಿಯರು ಪಗಡೆಯಾಡುತ್ತಿದ್ದರು. ಇದನ್ನು ನೋಡಿ ಅವರು ಆಟಕ್ಕೆ ಕುಳಿತುಕೊಂಡರು. ದೇವರಿಗೆ ನಮಸ್ಕರಿಸಿ ದಾಳ ಉರುಳಿಸಿ ಖುಷಿ ಪಟ್ಟರು.

4 / 5
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಬಾಳ ಪಗಡೆ ಆಟದಲ್ಲಿ ಬರಿಯ ಕಾಯಿ ಎಲ್ಲರೂ. ನಡೆಸುವಾತ ಬೇರೆ. ಅವನ ಇಚ್ಛೆ ಯಾರು ಬಲ್ಲರು? ಎಂದು ಬರೆದುಕೊಂಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಬಾಳ ಪಗಡೆ ಆಟದಲ್ಲಿ ಬರಿಯ ಕಾಯಿ ಎಲ್ಲರೂ. ನಡೆಸುವಾತ ಬೇರೆ. ಅವನ ಇಚ್ಛೆ ಯಾರು ಬಲ್ಲರು? ಎಂದು ಬರೆದುಕೊಂಡಿದ್ದಾರೆ.

5 / 5
ದೇವಸ್ಥಾನದ ಆವರಣದಲ್ಲಿ ಪರಂಪರಾಗತವಾಗಿ ಮಹಾನವಮಿಯಿಂದ ಪಗಡೆ ಆಟ ಆಡುತ್ತಿದ್ದ ಹಿರಿಯರೊಂದಿಗೆ ದಾಳ ಉರುಳಿಸುವ ಅವಕಾಶ ಸಿಕ್ಕಿದ್ದು, ಆ ಮೂಗಬಸವೇಶ್ವರ ದೈವನ ಇಚ್ಛೆ ಎಂದಿದ್ದಾರೆ.

ದೇವಸ್ಥಾನದ ಆವರಣದಲ್ಲಿ ಪರಂಪರಾಗತವಾಗಿ ಮಹಾನವಮಿಯಿಂದ ಪಗಡೆ ಆಟ ಆಡುತ್ತಿದ್ದ ಹಿರಿಯರೊಂದಿಗೆ ದಾಳ ಉರುಳಿಸುವ ಅವಕಾಶ ಸಿಕ್ಕಿದ್ದು, ಆ ಮೂಗಬಸವೇಶ್ವರ ದೈವನ ಇಚ್ಛೆ ಎಂದಿದ್ದಾರೆ.

Published On - 7:42 pm, Sun, 17 November 24

Narasimha Murti Pyati

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 17 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.

Read More
Follow Us