
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಯರಕಿಹಾಳ ಗ್ರಾಮದ ತೋಟವೊಂದರಲ್ಲಿ ಎರಡು ಶ್ವಾನಗಳು ಮತ್ತು ನಾಗರ ಹಾವಿನ ನಡುವೆ ಸೆಣಸಾಟ ನಡೆದಿದೆ.

ಮನೆಯೊಳಗೆ ಹೋಗುತ್ತಿದ್ದ ನಾಗರ ಹಾವನ್ನು ತಡೆದು ಎರಡು ಸಾಕು ನಾಯಿಗಳು ಹಾವಿನ ಜೊತೆ ಕಾದಾಡಿವೆ.

ಕೃಷಿ ಕಾರ್ಯದಲ್ಲಿ ನಿರತರಾಗಿದ್ದ ನಗಾರೆಪ್ಪ ಭಜಂತ್ರಿ ಮನೆಯೊಳಕ್ಕೆ ನುಗ್ಗಲೆತ್ನಿಸಿದ್ದ ನಾಗರಹಾವನ್ನು ಕಂಡ ಸಾಕು ನಾಯಿಗಳು ತನ್ನ ಮಾಲೀಕನ ಮನೆಗೆ ಹೋಗದಂತೆ ಹಾವನ್ನು ತಡೆದಿವೆ.

ಎರಡು ನಾಯಿಗಳು ಹಾವಿನ ಸುತ್ತ ಸುತ್ತುತ್ತ, ಬೊಗಳುತ್ತ ಸಾವಿಗೆ ಭಯ ಹುಟ್ಟಿಸಿವೆ. ತನ್ನ ಮಾಲೀಕನ ಮನೆಗೆ ಬಂದಿದ್ದೇಕೆ ಎಂದು ನರಳಾಡಿಸಿವೆ.

ತನ್ನ ಸುತ್ತ ಸುತ್ತಿದ್ದ ನಾಯಿಗಳನ್ನು ಕಂಡು ನಾಗರ ಹಾವು ಆತ್ಮ ರಕ್ಷಣೆಗಾಗಿ ಅವುಗಳ ವಿರುದ್ಧ ಹೋರಾಡಿದ ದೃಶ್ಯ ಭಯ ಹುಟ್ಟಿಸುವಂತಿತ್ತು.

ವಿಚಿತ್ರ ಧ್ವನಿಯಲ್ಲಿ ಕೂಗುತ್ತಿದ್ದ ನಾಯಿಗಳನ್ನು ನೋಡಲು ಬಂದ ನಗಾರೆಪ್ಪ ಕುಟುಂಬಸ್ಥರು ದೃಶ್ಯ ನೋಡಿ ಶಾಕ್ ಆಗಿದ್ದಾರೆ. ಸುಮಾರು ಅರ್ಧ ಗಂಟೆಗಳ ಕಾಲ ಹಾವು-ಶ್ವಾನದ ಕಾಳಗ ನಡೆದಿದ್ದು ನಂತರ ಸ್ಥಳದಿಂದ ಬೇರೆ ಕಡೆ ನಾಗರಹಾವು ಕಾಲ್ಕಿತ್ತಿದೆ.