AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಳಿ-ನವಿಲುಗಳ ಭಯಂಕರ ಕಾಳಗ ನೋಡಿದ ಜನರಿಗೆ ಶಾಕ್ ಮೇಲೆ ಶಾಕ್‌‌!

ಉಡುಪಿ: ಟಗರು ಪೈಟ್ ನೋಡಿರ್ತಿರಾ.. ಬುಲ್ ಪೈಟ್ ಕೂಡಾ ನೋಡಿರ್ತೀರಿ…ಕೋಳಿ ಕಾಳಗವನ್ನೂ ನೋಡೇ ಇರ್ತಿರಾ…. ಆದರೆ ವಯ್ಯಾರಕ್ಕೆ ಹೆಸರಾದ ನವಿಲಿನ ಕಾಳಗ ನೋಡಿದೀರಾ? ಕೇಳಿದೀರಾ? ಉಡುಪಿಯಲ್ಲಿ ಇಂಥ ಒಂದು ವಿಚಿತ್ರ ಕುಕ್ಕುಟ ಫೈಟ್ ಅಚ್ಚರಿ ಆದ್ರೂ ನಿಜವಾಗಿಯೂ ನಡೆದಿದೆ. ಹೌದು ಸ್ವತಃ ನವಿಲೇ ಫೈಟ್‌ಗೆ ಇಳಿದಿದೆ. ಅದೂ ತನ್ನ ಸರಿಸಮಾನರ ಜೊತೆಗಲ್ಲ, ಬದಲು ಕೋಳಿ‌ ಜೊತೆ ಕಾಳಗ ಮಾಡಿದೆ. ಈ ನವಿಲು ಮತ್ತು ಕೋಳಿಗಳ ಪೈಟ್‌ ದೃಶ್ಯ ನೋಡಿದ್ರೆ ತಲೆ ಗಟ್ಟಿ ಇದೆ ಅಂತ ಬಂಡೆ ಜೊತೆಗೆ […]

ಕೋಳಿ-ನವಿಲುಗಳ ಭಯಂಕರ ಕಾಳಗ ನೋಡಿದ ಜನರಿಗೆ ಶಾಕ್ ಮೇಲೆ ಶಾಕ್‌‌!
Guru
| Edited By: |

Updated on:Jul 24, 2020 | 3:37 PM

Share

ಉಡುಪಿ: ಟಗರು ಪೈಟ್ ನೋಡಿರ್ತಿರಾ.. ಬುಲ್ ಪೈಟ್ ಕೂಡಾ ನೋಡಿರ್ತೀರಿ…ಕೋಳಿ ಕಾಳಗವನ್ನೂ ನೋಡೇ ಇರ್ತಿರಾ…. ಆದರೆ ವಯ್ಯಾರಕ್ಕೆ ಹೆಸರಾದ ನವಿಲಿನ ಕಾಳಗ ನೋಡಿದೀರಾ? ಕೇಳಿದೀರಾ? ಉಡುಪಿಯಲ್ಲಿ ಇಂಥ ಒಂದು ವಿಚಿತ್ರ ಕುಕ್ಕುಟ ಫೈಟ್ ಅಚ್ಚರಿ ಆದ್ರೂ ನಿಜವಾಗಿಯೂ ನಡೆದಿದೆ.

ಹೌದು ಸ್ವತಃ ನವಿಲೇ ಫೈಟ್‌ಗೆ ಇಳಿದಿದೆ. ಅದೂ ತನ್ನ ಸರಿಸಮಾನರ ಜೊತೆಗಲ್ಲ, ಬದಲು ಕೋಳಿ‌ ಜೊತೆ ಕಾಳಗ ಮಾಡಿದೆ. ಈ ನವಿಲು ಮತ್ತು ಕೋಳಿಗಳ ಪೈಟ್‌ ದೃಶ್ಯ ನೋಡಿದ್ರೆ ತಲೆ ಗಟ್ಟಿ ಇದೆ ಅಂತ ಬಂಡೆ ಜೊತೆಗೆ ಗುದ್ದಾಟ ಮಾಡಬಾರದು ಅಂತಾರಲ್ಲಾ ಹಾಗಾಗಿದೆ ಕೋಳಿ ಕಥೆ. ಇನ್ನೊಂದು ‌ಹುಂಜದ ಜೊತೆಗೆ ಕಾಲು ಕೆರೆದು‌ ಕಾದಾಡೊ ಬದಲು ನವಿಲಿನ ಜೊತೆಗೆ ಪೈಟ್ ಮಾಡುತ್ತಿದೆ.

ಕೋಳಿ-ನವಿಲುಗಳ ಶಕ್ತಿ ಪ್ರದರ್ಶನ ಗುಂಪು ಕಟ್ಟಿಕೊಂಡು‌ ಹೆಣ್ಣು ಕೋಳಿಗೆ‌ ಗಿರಕಿ ಹೊಡೆದುಕೊಂಡು ಸುತ್ತಾಡುತ್ತಿದ್ದ ಹುಂಜಕ್ಕೂ ಬೋರ್ ಆಗಿರಬೇಕು. ಡೀಫರೆಂಟಾಗಿರಲಿ ಅಂತಾ ಹುಂಜದ ಜೊತೆಗೆ ಪೈಟ್ ಮಾಡೊದು ಬಿಟ್ಟು ತನ್ನ ಶಕ್ತಿ ಪ್ರದರ್ಶನ ಮಾಡೋಕೆ ನವಿಲಿನ ಜೊತೆಗೆ ಪೈಟ್ ಶುರು ಮಾಡಿಕೊಂಡಿದೆ. ಮಳೆ ಬಂದ್ರೆ ಗರಿಬಿಚ್ಚಿ ಕುಣಿದು ಹೆಣ್ಣು ನವಿಲುನ್ನು ರಮೀಸುವುದ್ರಲ್ಲಿ ಎಕ್ಸಪರ್ಟ್‌ ಆಗಿರುವ ಮಯೂರ ಕೂಡಾ, ನರ್ತನ ಸೇವೆ ಬಿಟ್ಟು ಕುಕ್ಕುಟದ ಜೊತೆಗೆ ‌ಕಾದಾಟಕ್ಕಿಳಿದಿದೆ.

ಕಾಳಗ ನೋಡಿ ಉಡುಪಿ ಜನರೇ ನಿಬ್ಬೆರಗು ಕೋಳಿ ಜಗಳ ನೋಡಿದ್ದ, ಜನರಿಗೆ ಈ ನವಿಲು-ಕೋಳಿಯ ಜಗಳ ಅಚ್ಚರಿ ಮತ್ತು ಪುಕ್ಕಟೆ ಮನರಂಜನೆ ನೀಡಿದೆ. ಇದನ್ನ ಕೆಲವರು ತಮ್ಮ ಕ್ಯಾಮೆರಾದಲ್ಲಿ ಸೆರೆ ಕೂಡಾ ಹಿಡಿದಿದ್ದಾರೆ. ನವಿಲು-ಕೋಳಿ ಕಾಳಗ ನೋಡುತ್ತಿದ್ದ ಕೆಲವರು ತನಗಿಂತ ಬಲಿಷ್ಠ ಗಾತ್ರದ ನವಿಲಿನ ಜೊತೆಗೆ ಕಾದಾಡಿದ ಹುಂಜನಿಗೆ ಶಬಾಷ್‌ ಹೇಳಿದ್ರೆ, ಕೆಲವರು ಹುಂಜವನ್ನು ಮಣಿಸಲು ನವಿಲಿಗೆ ಪರಾಕ್‌ ಹೇಳಿದ್ದಾರೆ. ಕುತೂಹಲಕಾರಿಯಂದ್ರೆ ಹೆಣ್ಣುಕೋಳಿ ಅಂದ್ರೆ ಹೆಂಟೆ ಮಾತ್ರ ಹುಂಜನಿಗೆ ಪ್ರೊತ್ಸಾಹ ನೀಡುತ್ತಿದ್ದದ್ದು ನೋಡುವಂತಿತ್ತು.-ಹರೀಶ್ ಪಾಲೆಚ್ಚಾರ್

Published On - 8:20 pm, Wed, 22 July 20

Follow Us
Guru
Guru
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ