Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಯಿಸಿದ ಎದೆ ಹಾಲು ಕೊರೊನಾ ವೈರಸ್‌ ತಡೆಯುತ್ತಾ? ಈ ಲೇಖನ ಓದಿ..

ಕೊರೊನಾ ಹೆಮ್ಮಾರಿ ಮಗುವಿಗೆ ಹರಡದಂತೆ ತಡೆಯಲು ಕಾಯಿಸಿದ ಎದೆ ಹಾಲು ಮದ್ದು ಅಂತಾ ಕೆನಡಾದ ವಿಜ್ಞಾನಿಗಳು ಹೇಳಿದ್ದಾರೆ. ಈ ಬಗ್ಗೆ ಸಮಗ್ರ ಸಂಶೋಧನೆ ನಡೆಸಿರುವ ಕೆನಡಾದ ಟೊರಂಟೋ ವಿಶ್ವವಿದ್ಯಾಲಯದ ಪ್ರೊಫೆಸರ್ ಒಬ್ಬರು, ಎದೆ ಹಾಲನ್ನು ಕಾಯಿಸಿ ಮಗುವಿಗೆ ನೀಡುವುದರಿಂದ ಕೊರೊನಾ ಸೋಂಕು ಹರಡುವುದಿಲ್ಲ ಎಂದಿದ್ದಾರೆ. ಅಂದ ಹಾಗೆ ಇದು ಕೇವಲ ಕೊರೊನಾ ಸೋಂಕಿತ ತಾಯಿಯ ಎದೆ ಹಾಲಿಗೆ ಮಾತ್ರ. ಸೋಂಕಿತ ತಾಯಿಂದಿರ ಎದೆ ಹಾಲನ್ನು 62.5 ಡಿಗ್ರಿ ಸೆಲ್ಸಿಯಸ್ನಲ್ಲಿ ಕಾಯಿಸಿದಾಗ ಅದರಲ್ಲಿನ ಸೋಂಕು ಸಾಯುತ್ತದೆ. ಆಗ ಆ […]

ಕಾಯಿಸಿದ ಎದೆ ಹಾಲು ಕೊರೊನಾ ವೈರಸ್‌ ತಡೆಯುತ್ತಾ? ಈ ಲೇಖನ ಓದಿ..
Follow us
Guru
| Updated By:

Updated on:Jul 11, 2020 | 4:27 PM

ಕೊರೊನಾ ಹೆಮ್ಮಾರಿ ಮಗುವಿಗೆ ಹರಡದಂತೆ ತಡೆಯಲು ಕಾಯಿಸಿದ ಎದೆ ಹಾಲು ಮದ್ದು ಅಂತಾ ಕೆನಡಾದ ವಿಜ್ಞಾನಿಗಳು ಹೇಳಿದ್ದಾರೆ. ಈ ಬಗ್ಗೆ ಸಮಗ್ರ ಸಂಶೋಧನೆ ನಡೆಸಿರುವ ಕೆನಡಾದ ಟೊರಂಟೋ ವಿಶ್ವವಿದ್ಯಾಲಯದ ಪ್ರೊಫೆಸರ್ ಒಬ್ಬರು, ಎದೆ ಹಾಲನ್ನು ಕಾಯಿಸಿ ಮಗುವಿಗೆ ನೀಡುವುದರಿಂದ ಕೊರೊನಾ ಸೋಂಕು ಹರಡುವುದಿಲ್ಲ ಎಂದಿದ್ದಾರೆ.

ಅಂದ ಹಾಗೆ ಇದು ಕೇವಲ ಕೊರೊನಾ ಸೋಂಕಿತ ತಾಯಿಯ ಎದೆ ಹಾಲಿಗೆ ಮಾತ್ರ. ಸೋಂಕಿತ ತಾಯಿಂದಿರ ಎದೆ ಹಾಲನ್ನು 62.5 ಡಿಗ್ರಿ ಸೆಲ್ಸಿಯಸ್ನಲ್ಲಿ ಕಾಯಿಸಿದಾಗ ಅದರಲ್ಲಿನ ಸೋಂಕು ಸಾಯುತ್ತದೆ. ಆಗ ಆ ಹಾಲನ್ನು ಮಗುವಿಗೆ ಅಥವಾ ಬೇರಾವುದೇ ಮಗುವಿಗೆ ಕುಡಿಸಿದಾಗ ಯಾವುದೇ ಕೊರೊನಾ ಸೋಂಕು ತಗುಲುವುದಿಲ್ಲ ಎಂದು ಟೊರಂಟೋ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹೇಳಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ಇದುವರೆಗೆ ಕೋರೊನಾ ಸೋಂಕಿತ ತಾಯಿಯಿಂದ ಮಗುವಿಗೆ ಹಾಲುಣಿಸಿದಾಗ ಯಾವುದೇ ಸೋಂಕು ಪ್ರಸಾರವಾದ ಪ್ರಕರಣಗಳು ವರದಿಯಾಗಿಲ್ಲ ಎಂದಿದೆ. ಆದ್ರೆ ಕೆನಡಾದ ಟೊರಂಟೋ ವಿಶ್ವವಿದ್ಯಾಲಯದ ಸಂಶೋಧಕರು ಮಾತ್ರ, ಕೊರೊನಾ ಸೋಂಕಿತ ತಾಯಿಯಿಂದ ಹಾಲಿನ ಮುಖಾಂತರ ಅಥವಾ ಹಾಲುಣಿಸುವಾಗ ಅಥವಾ ಹಾಲಿನಲ್ಲಿ ಉಸಿರಾಡಿದಾಗ ಬೀಳುವ ಕಣಗಳಿಂದ ಸೋಂಕು ಹರಡುತ್ತೆ.

ಆದ್ರೆ ಎದೆ ಹಾಲನ್ನು ಸುಮಾರು 30 ನಿಮಿಷಗಳ ಕಾಲ 62.5 ಡಿಗ್ರಿ ಸೆಲ್ಸಿಯಸ್ನಲ್ಲಿ ಕಾಯಿಸಿದಾಗ ಯಾವುದೇ ವೈರಸ್​ಗಳು ಬದುಕುವುದಿಲ್ಲ. ಆಗ ಆ ಹಾಲನ್ನು ಮಗುವಿಗೆ ಕುಡಿಸಬಹುದು, ಈ ಮೂಲಕ ಸೋಂಕು ಹರಡದಂತೆ ತಡೆಯಬಹುದು ಎಂದಿದ್ದಾರೆ. ಈ ಸಂಬಂಧ ಕೆನೆಡಿಯನ್ ಮೆಡಿಕಲ್ ಅಸೋಶಿಯೇಶನ್ ಜರ್ನಲ್ನಲ್ಲಿ ಲೇಖನ ಕೂಡಾ ಪ್ರಕಟವಾಗಿದೆ.

ತಾಯಿ ಮಗುವಿಗೆ ಉಣಿಸುವ ಎದೆ ಹಾಲು ಅಮೃತ, ಹೀಗಾಗಿಯೇ ಹುಟ್ಟುವ ಮಗುವಿಗೆ ಕನಿಷ್ಟ ಆರು ತಿಂಗಳು ಕಡ್ಡಾಯವಾಗಿ ಎದೆ ಹಾಲುಣಿಸಿ ಎಂದು ವೈದ್ಯರು ತಾಯಿಂದಿರಿಗೆ ಸಲಹೆ ನೀಡುತ್ತಾರೆ. ಆದ್ರೆ ಕೊರೊನಾ ಸಂಕಷ್ಟದ ಸಮಯದಲ್ಲಿ  ಸಾಕಷ್ಟು ಸೋಂಕಿತ ತಾಯಿಂದಿರು ಮಗುವಿಗೆ ಹಾಲುಣಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಕೆನಡಾದ ವಿಜ್ಞಾನಿಗಳ ಆ ಸಂಶೋಧನೆ ತಾಯಿಂದಿನ ಆತಂಕವನ್ನ ದೂರ ಮಾಡಬಹುದು.

Published On - 3:33 pm, Sat, 11 July 20

ಯತ್ನಾಳ್ ಖುದ್ದು ಮಾತಾಡುತ್ತಿಲ್ಲ, ಅವರ ಬಗ್ಗೆ ಏನು ಮಾತಾಡೋದು: ಸಚಿವ
ಯತ್ನಾಳ್ ಖುದ್ದು ಮಾತಾಡುತ್ತಿಲ್ಲ, ಅವರ ಬಗ್ಗೆ ಏನು ಮಾತಾಡೋದು: ಸಚಿವ
VIDEO: ಇಡೀ ಪಂದ್ಯದ ಚಿತ್ರಣ ಬದಲಿಸಿದ ಆ ಒಂದು ಕ್ಯಾಚ್
VIDEO: ಇಡೀ ಪಂದ್ಯದ ಚಿತ್ರಣ ಬದಲಿಸಿದ ಆ ಒಂದು ಕ್ಯಾಚ್
ಲಾರಿ ಮುಷ್ಕರ ನಿಲ್ಲದಿದ್ದರೆ ಎಪಿಎಂಸಿಗಳು ಬಂದ್ ಆಗುವ ಸಾಧ್ಯತೆ?
ಲಾರಿ ಮುಷ್ಕರ ನಿಲ್ಲದಿದ್ದರೆ ಎಪಿಎಂಸಿಗಳು ಬಂದ್ ಆಗುವ ಸಾಧ್ಯತೆ?
ಜಾತಿ ಗಣತಿ ಅವಶ್ಯಕತೆ ಇಲ್ಲ ಎಂದ ಸಾರ್ವಜನಿಕರು: ಮೈಸೂರಿನಲ್ಲಿ ಜನಾಕ್ರೋಶ
ಜಾತಿ ಗಣತಿ ಅವಶ್ಯಕತೆ ಇಲ್ಲ ಎಂದ ಸಾರ್ವಜನಿಕರು: ಮೈಸೂರಿನಲ್ಲಿ ಜನಾಕ್ರೋಶ
ಮೂಡಿಗೆರೆ: ಮಾಕೋನಹಳ್ಳಿ ಗ್ರಾಮದಲ್ಲಿ ಮನೆಗೆ ನುಗ್ಗಿ ಕಾಡಾನೆ ದಾಂಧಲೆ
ಮೂಡಿಗೆರೆ: ಮಾಕೋನಹಳ್ಳಿ ಗ್ರಾಮದಲ್ಲಿ ಮನೆಗೆ ನುಗ್ಗಿ ಕಾಡಾನೆ ದಾಂಧಲೆ
ತಮ್ಮ ನಿರ್ದೇಶನದ ಮೊದಲ ಚಿತ್ರದ ಪ್ರಚಾರಕ್ಕೆ ಹೊಸ ತಂತ್ರ ಬಳಸಿದ ರಂಜನಿ
ತಮ್ಮ ನಿರ್ದೇಶನದ ಮೊದಲ ಚಿತ್ರದ ಪ್ರಚಾರಕ್ಕೆ ಹೊಸ ತಂತ್ರ ಬಳಸಿದ ರಂಜನಿ
ಮುಷ್ಕರ ಕಾರಣ ಮಹಾರಾಷ್ಟ್ರದ ಟ್ರಕ್ಕನ್ನು ಟೋಲ್ ಗೇಟ್ ಬಳಿ ತಡೆಯಲಾಗಿತ್ತು
ಮುಷ್ಕರ ಕಾರಣ ಮಹಾರಾಷ್ಟ್ರದ ಟ್ರಕ್ಕನ್ನು ಟೋಲ್ ಗೇಟ್ ಬಳಿ ತಡೆಯಲಾಗಿತ್ತು
ಗರೀಬ್​ ರಥ್​ ಎಕ್ಸ್​ಪ್ರೆಸ್​ ರೈಲನ್ನು ಹಳಿ ತಪ್ಪಿಸುವ ಯತ್ನ ವಿಫಲ
ಗರೀಬ್​ ರಥ್​ ಎಕ್ಸ್​ಪ್ರೆಸ್​ ರೈಲನ್ನು ಹಳಿ ತಪ್ಪಿಸುವ ಯತ್ನ ವಿಫಲ
ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಏಣಿಕೆ: ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಏಣಿಕೆ: ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ನೋ ಬಾಲ್, ಫ್ರೀ ಹಿಟ್, ರನೌಟ್​: ಸೂಪರ್​ ಓವರ್​ನಲ್ಲಿ ಡೆಲ್ಲಿಗೆ ರೋಚಕ ಜಯ
ನೋ ಬಾಲ್, ಫ್ರೀ ಹಿಟ್, ರನೌಟ್​: ಸೂಪರ್​ ಓವರ್​ನಲ್ಲಿ ಡೆಲ್ಲಿಗೆ ರೋಚಕ ಜಯ