AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಯಿಸಿದ ಎದೆ ಹಾಲು ಕೊರೊನಾ ವೈರಸ್‌ ತಡೆಯುತ್ತಾ? ಈ ಲೇಖನ ಓದಿ..

ಕೊರೊನಾ ಹೆಮ್ಮಾರಿ ಮಗುವಿಗೆ ಹರಡದಂತೆ ತಡೆಯಲು ಕಾಯಿಸಿದ ಎದೆ ಹಾಲು ಮದ್ದು ಅಂತಾ ಕೆನಡಾದ ವಿಜ್ಞಾನಿಗಳು ಹೇಳಿದ್ದಾರೆ. ಈ ಬಗ್ಗೆ ಸಮಗ್ರ ಸಂಶೋಧನೆ ನಡೆಸಿರುವ ಕೆನಡಾದ ಟೊರಂಟೋ ವಿಶ್ವವಿದ್ಯಾಲಯದ ಪ್ರೊಫೆಸರ್ ಒಬ್ಬರು, ಎದೆ ಹಾಲನ್ನು ಕಾಯಿಸಿ ಮಗುವಿಗೆ ನೀಡುವುದರಿಂದ ಕೊರೊನಾ ಸೋಂಕು ಹರಡುವುದಿಲ್ಲ ಎಂದಿದ್ದಾರೆ. ಅಂದ ಹಾಗೆ ಇದು ಕೇವಲ ಕೊರೊನಾ ಸೋಂಕಿತ ತಾಯಿಯ ಎದೆ ಹಾಲಿಗೆ ಮಾತ್ರ. ಸೋಂಕಿತ ತಾಯಿಂದಿರ ಎದೆ ಹಾಲನ್ನು 62.5 ಡಿಗ್ರಿ ಸೆಲ್ಸಿಯಸ್ನಲ್ಲಿ ಕಾಯಿಸಿದಾಗ ಅದರಲ್ಲಿನ ಸೋಂಕು ಸಾಯುತ್ತದೆ. ಆಗ ಆ […]

ಕಾಯಿಸಿದ ಎದೆ ಹಾಲು ಕೊರೊನಾ ವೈರಸ್‌ ತಡೆಯುತ್ತಾ? ಈ ಲೇಖನ ಓದಿ..
Guru
| Edited By: |

Updated on:Jul 11, 2020 | 4:27 PM

Share

ಕೊರೊನಾ ಹೆಮ್ಮಾರಿ ಮಗುವಿಗೆ ಹರಡದಂತೆ ತಡೆಯಲು ಕಾಯಿಸಿದ ಎದೆ ಹಾಲು ಮದ್ದು ಅಂತಾ ಕೆನಡಾದ ವಿಜ್ಞಾನಿಗಳು ಹೇಳಿದ್ದಾರೆ. ಈ ಬಗ್ಗೆ ಸಮಗ್ರ ಸಂಶೋಧನೆ ನಡೆಸಿರುವ ಕೆನಡಾದ ಟೊರಂಟೋ ವಿಶ್ವವಿದ್ಯಾಲಯದ ಪ್ರೊಫೆಸರ್ ಒಬ್ಬರು, ಎದೆ ಹಾಲನ್ನು ಕಾಯಿಸಿ ಮಗುವಿಗೆ ನೀಡುವುದರಿಂದ ಕೊರೊನಾ ಸೋಂಕು ಹರಡುವುದಿಲ್ಲ ಎಂದಿದ್ದಾರೆ.

ಅಂದ ಹಾಗೆ ಇದು ಕೇವಲ ಕೊರೊನಾ ಸೋಂಕಿತ ತಾಯಿಯ ಎದೆ ಹಾಲಿಗೆ ಮಾತ್ರ. ಸೋಂಕಿತ ತಾಯಿಂದಿರ ಎದೆ ಹಾಲನ್ನು 62.5 ಡಿಗ್ರಿ ಸೆಲ್ಸಿಯಸ್ನಲ್ಲಿ ಕಾಯಿಸಿದಾಗ ಅದರಲ್ಲಿನ ಸೋಂಕು ಸಾಯುತ್ತದೆ. ಆಗ ಆ ಹಾಲನ್ನು ಮಗುವಿಗೆ ಅಥವಾ ಬೇರಾವುದೇ ಮಗುವಿಗೆ ಕುಡಿಸಿದಾಗ ಯಾವುದೇ ಕೊರೊನಾ ಸೋಂಕು ತಗುಲುವುದಿಲ್ಲ ಎಂದು ಟೊರಂಟೋ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹೇಳಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ಇದುವರೆಗೆ ಕೋರೊನಾ ಸೋಂಕಿತ ತಾಯಿಯಿಂದ ಮಗುವಿಗೆ ಹಾಲುಣಿಸಿದಾಗ ಯಾವುದೇ ಸೋಂಕು ಪ್ರಸಾರವಾದ ಪ್ರಕರಣಗಳು ವರದಿಯಾಗಿಲ್ಲ ಎಂದಿದೆ. ಆದ್ರೆ ಕೆನಡಾದ ಟೊರಂಟೋ ವಿಶ್ವವಿದ್ಯಾಲಯದ ಸಂಶೋಧಕರು ಮಾತ್ರ, ಕೊರೊನಾ ಸೋಂಕಿತ ತಾಯಿಯಿಂದ ಹಾಲಿನ ಮುಖಾಂತರ ಅಥವಾ ಹಾಲುಣಿಸುವಾಗ ಅಥವಾ ಹಾಲಿನಲ್ಲಿ ಉಸಿರಾಡಿದಾಗ ಬೀಳುವ ಕಣಗಳಿಂದ ಸೋಂಕು ಹರಡುತ್ತೆ.

ಆದ್ರೆ ಎದೆ ಹಾಲನ್ನು ಸುಮಾರು 30 ನಿಮಿಷಗಳ ಕಾಲ 62.5 ಡಿಗ್ರಿ ಸೆಲ್ಸಿಯಸ್ನಲ್ಲಿ ಕಾಯಿಸಿದಾಗ ಯಾವುದೇ ವೈರಸ್​ಗಳು ಬದುಕುವುದಿಲ್ಲ. ಆಗ ಆ ಹಾಲನ್ನು ಮಗುವಿಗೆ ಕುಡಿಸಬಹುದು, ಈ ಮೂಲಕ ಸೋಂಕು ಹರಡದಂತೆ ತಡೆಯಬಹುದು ಎಂದಿದ್ದಾರೆ. ಈ ಸಂಬಂಧ ಕೆನೆಡಿಯನ್ ಮೆಡಿಕಲ್ ಅಸೋಶಿಯೇಶನ್ ಜರ್ನಲ್ನಲ್ಲಿ ಲೇಖನ ಕೂಡಾ ಪ್ರಕಟವಾಗಿದೆ.

ತಾಯಿ ಮಗುವಿಗೆ ಉಣಿಸುವ ಎದೆ ಹಾಲು ಅಮೃತ, ಹೀಗಾಗಿಯೇ ಹುಟ್ಟುವ ಮಗುವಿಗೆ ಕನಿಷ್ಟ ಆರು ತಿಂಗಳು ಕಡ್ಡಾಯವಾಗಿ ಎದೆ ಹಾಲುಣಿಸಿ ಎಂದು ವೈದ್ಯರು ತಾಯಿಂದಿರಿಗೆ ಸಲಹೆ ನೀಡುತ್ತಾರೆ. ಆದ್ರೆ ಕೊರೊನಾ ಸಂಕಷ್ಟದ ಸಮಯದಲ್ಲಿ  ಸಾಕಷ್ಟು ಸೋಂಕಿತ ತಾಯಿಂದಿರು ಮಗುವಿಗೆ ಹಾಲುಣಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಕೆನಡಾದ ವಿಜ್ಞಾನಿಗಳ ಆ ಸಂಶೋಧನೆ ತಾಯಿಂದಿನ ಆತಂಕವನ್ನ ದೂರ ಮಾಡಬಹುದು.

Published On - 3:33 pm, Sat, 11 July 20

ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ