AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಯಿಸಿದ ಎದೆ ಹಾಲು ಕೊರೊನಾ ವೈರಸ್‌ ತಡೆಯುತ್ತಾ? ಈ ಲೇಖನ ಓದಿ..

ಕೊರೊನಾ ಹೆಮ್ಮಾರಿ ಮಗುವಿಗೆ ಹರಡದಂತೆ ತಡೆಯಲು ಕಾಯಿಸಿದ ಎದೆ ಹಾಲು ಮದ್ದು ಅಂತಾ ಕೆನಡಾದ ವಿಜ್ಞಾನಿಗಳು ಹೇಳಿದ್ದಾರೆ. ಈ ಬಗ್ಗೆ ಸಮಗ್ರ ಸಂಶೋಧನೆ ನಡೆಸಿರುವ ಕೆನಡಾದ ಟೊರಂಟೋ ವಿಶ್ವವಿದ್ಯಾಲಯದ ಪ್ರೊಫೆಸರ್ ಒಬ್ಬರು, ಎದೆ ಹಾಲನ್ನು ಕಾಯಿಸಿ ಮಗುವಿಗೆ ನೀಡುವುದರಿಂದ ಕೊರೊನಾ ಸೋಂಕು ಹರಡುವುದಿಲ್ಲ ಎಂದಿದ್ದಾರೆ. ಅಂದ ಹಾಗೆ ಇದು ಕೇವಲ ಕೊರೊನಾ ಸೋಂಕಿತ ತಾಯಿಯ ಎದೆ ಹಾಲಿಗೆ ಮಾತ್ರ. ಸೋಂಕಿತ ತಾಯಿಂದಿರ ಎದೆ ಹಾಲನ್ನು 62.5 ಡಿಗ್ರಿ ಸೆಲ್ಸಿಯಸ್ನಲ್ಲಿ ಕಾಯಿಸಿದಾಗ ಅದರಲ್ಲಿನ ಸೋಂಕು ಸಾಯುತ್ತದೆ. ಆಗ ಆ […]

ಕಾಯಿಸಿದ ಎದೆ ಹಾಲು ಕೊರೊನಾ ವೈರಸ್‌ ತಡೆಯುತ್ತಾ? ಈ ಲೇಖನ ಓದಿ..
Guru
Guru| Edited By: |

Updated on:Jul 11, 2020 | 4:27 PM

Share

ಕೊರೊನಾ ಹೆಮ್ಮಾರಿ ಮಗುವಿಗೆ ಹರಡದಂತೆ ತಡೆಯಲು ಕಾಯಿಸಿದ ಎದೆ ಹಾಲು ಮದ್ದು ಅಂತಾ ಕೆನಡಾದ ವಿಜ್ಞಾನಿಗಳು ಹೇಳಿದ್ದಾರೆ. ಈ ಬಗ್ಗೆ ಸಮಗ್ರ ಸಂಶೋಧನೆ ನಡೆಸಿರುವ ಕೆನಡಾದ ಟೊರಂಟೋ ವಿಶ್ವವಿದ್ಯಾಲಯದ ಪ್ರೊಫೆಸರ್ ಒಬ್ಬರು, ಎದೆ ಹಾಲನ್ನು ಕಾಯಿಸಿ ಮಗುವಿಗೆ ನೀಡುವುದರಿಂದ ಕೊರೊನಾ ಸೋಂಕು ಹರಡುವುದಿಲ್ಲ ಎಂದಿದ್ದಾರೆ.

ಅಂದ ಹಾಗೆ ಇದು ಕೇವಲ ಕೊರೊನಾ ಸೋಂಕಿತ ತಾಯಿಯ ಎದೆ ಹಾಲಿಗೆ ಮಾತ್ರ. ಸೋಂಕಿತ ತಾಯಿಂದಿರ ಎದೆ ಹಾಲನ್ನು 62.5 ಡಿಗ್ರಿ ಸೆಲ್ಸಿಯಸ್ನಲ್ಲಿ ಕಾಯಿಸಿದಾಗ ಅದರಲ್ಲಿನ ಸೋಂಕು ಸಾಯುತ್ತದೆ. ಆಗ ಆ ಹಾಲನ್ನು ಮಗುವಿಗೆ ಅಥವಾ ಬೇರಾವುದೇ ಮಗುವಿಗೆ ಕುಡಿಸಿದಾಗ ಯಾವುದೇ ಕೊರೊನಾ ಸೋಂಕು ತಗುಲುವುದಿಲ್ಲ ಎಂದು ಟೊರಂಟೋ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹೇಳಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ಇದುವರೆಗೆ ಕೋರೊನಾ ಸೋಂಕಿತ ತಾಯಿಯಿಂದ ಮಗುವಿಗೆ ಹಾಲುಣಿಸಿದಾಗ ಯಾವುದೇ ಸೋಂಕು ಪ್ರಸಾರವಾದ ಪ್ರಕರಣಗಳು ವರದಿಯಾಗಿಲ್ಲ ಎಂದಿದೆ. ಆದ್ರೆ ಕೆನಡಾದ ಟೊರಂಟೋ ವಿಶ್ವವಿದ್ಯಾಲಯದ ಸಂಶೋಧಕರು ಮಾತ್ರ, ಕೊರೊನಾ ಸೋಂಕಿತ ತಾಯಿಯಿಂದ ಹಾಲಿನ ಮುಖಾಂತರ ಅಥವಾ ಹಾಲುಣಿಸುವಾಗ ಅಥವಾ ಹಾಲಿನಲ್ಲಿ ಉಸಿರಾಡಿದಾಗ ಬೀಳುವ ಕಣಗಳಿಂದ ಸೋಂಕು ಹರಡುತ್ತೆ.

ಆದ್ರೆ ಎದೆ ಹಾಲನ್ನು ಸುಮಾರು 30 ನಿಮಿಷಗಳ ಕಾಲ 62.5 ಡಿಗ್ರಿ ಸೆಲ್ಸಿಯಸ್ನಲ್ಲಿ ಕಾಯಿಸಿದಾಗ ಯಾವುದೇ ವೈರಸ್​ಗಳು ಬದುಕುವುದಿಲ್ಲ. ಆಗ ಆ ಹಾಲನ್ನು ಮಗುವಿಗೆ ಕುಡಿಸಬಹುದು, ಈ ಮೂಲಕ ಸೋಂಕು ಹರಡದಂತೆ ತಡೆಯಬಹುದು ಎಂದಿದ್ದಾರೆ. ಈ ಸಂಬಂಧ ಕೆನೆಡಿಯನ್ ಮೆಡಿಕಲ್ ಅಸೋಶಿಯೇಶನ್ ಜರ್ನಲ್ನಲ್ಲಿ ಲೇಖನ ಕೂಡಾ ಪ್ರಕಟವಾಗಿದೆ.

ತಾಯಿ ಮಗುವಿಗೆ ಉಣಿಸುವ ಎದೆ ಹಾಲು ಅಮೃತ, ಹೀಗಾಗಿಯೇ ಹುಟ್ಟುವ ಮಗುವಿಗೆ ಕನಿಷ್ಟ ಆರು ತಿಂಗಳು ಕಡ್ಡಾಯವಾಗಿ ಎದೆ ಹಾಲುಣಿಸಿ ಎಂದು ವೈದ್ಯರು ತಾಯಿಂದಿರಿಗೆ ಸಲಹೆ ನೀಡುತ್ತಾರೆ. ಆದ್ರೆ ಕೊರೊನಾ ಸಂಕಷ್ಟದ ಸಮಯದಲ್ಲಿ  ಸಾಕಷ್ಟು ಸೋಂಕಿತ ತಾಯಿಂದಿರು ಮಗುವಿಗೆ ಹಾಲುಣಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಕೆನಡಾದ ವಿಜ್ಞಾನಿಗಳ ಆ ಸಂಶೋಧನೆ ತಾಯಿಂದಿನ ಆತಂಕವನ್ನ ದೂರ ಮಾಡಬಹುದು.

Published On - 3:33 pm, Sat, 11 July 20

Follow Us
Guru
Guru
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ