AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಯಿಸಿದ ಎದೆ ಹಾಲು ಕೊರೊನಾ ವೈರಸ್‌ ತಡೆಯುತ್ತಾ? ಈ ಲೇಖನ ಓದಿ..

ಕೊರೊನಾ ಹೆಮ್ಮಾರಿ ಮಗುವಿಗೆ ಹರಡದಂತೆ ತಡೆಯಲು ಕಾಯಿಸಿದ ಎದೆ ಹಾಲು ಮದ್ದು ಅಂತಾ ಕೆನಡಾದ ವಿಜ್ಞಾನಿಗಳು ಹೇಳಿದ್ದಾರೆ. ಈ ಬಗ್ಗೆ ಸಮಗ್ರ ಸಂಶೋಧನೆ ನಡೆಸಿರುವ ಕೆನಡಾದ ಟೊರಂಟೋ ವಿಶ್ವವಿದ್ಯಾಲಯದ ಪ್ರೊಫೆಸರ್ ಒಬ್ಬರು, ಎದೆ ಹಾಲನ್ನು ಕಾಯಿಸಿ ಮಗುವಿಗೆ ನೀಡುವುದರಿಂದ ಕೊರೊನಾ ಸೋಂಕು ಹರಡುವುದಿಲ್ಲ ಎಂದಿದ್ದಾರೆ. ಅಂದ ಹಾಗೆ ಇದು ಕೇವಲ ಕೊರೊನಾ ಸೋಂಕಿತ ತಾಯಿಯ ಎದೆ ಹಾಲಿಗೆ ಮಾತ್ರ. ಸೋಂಕಿತ ತಾಯಿಂದಿರ ಎದೆ ಹಾಲನ್ನು 62.5 ಡಿಗ್ರಿ ಸೆಲ್ಸಿಯಸ್ನಲ್ಲಿ ಕಾಯಿಸಿದಾಗ ಅದರಲ್ಲಿನ ಸೋಂಕು ಸಾಯುತ್ತದೆ. ಆಗ ಆ […]

ಕಾಯಿಸಿದ ಎದೆ ಹಾಲು ಕೊರೊನಾ ವೈರಸ್‌ ತಡೆಯುತ್ತಾ? ಈ ಲೇಖನ ಓದಿ..
Guru
| Edited By: |

Updated on:Jul 11, 2020 | 4:27 PM

Share

ಕೊರೊನಾ ಹೆಮ್ಮಾರಿ ಮಗುವಿಗೆ ಹರಡದಂತೆ ತಡೆಯಲು ಕಾಯಿಸಿದ ಎದೆ ಹಾಲು ಮದ್ದು ಅಂತಾ ಕೆನಡಾದ ವಿಜ್ಞಾನಿಗಳು ಹೇಳಿದ್ದಾರೆ. ಈ ಬಗ್ಗೆ ಸಮಗ್ರ ಸಂಶೋಧನೆ ನಡೆಸಿರುವ ಕೆನಡಾದ ಟೊರಂಟೋ ವಿಶ್ವವಿದ್ಯಾಲಯದ ಪ್ರೊಫೆಸರ್ ಒಬ್ಬರು, ಎದೆ ಹಾಲನ್ನು ಕಾಯಿಸಿ ಮಗುವಿಗೆ ನೀಡುವುದರಿಂದ ಕೊರೊನಾ ಸೋಂಕು ಹರಡುವುದಿಲ್ಲ ಎಂದಿದ್ದಾರೆ.

ಅಂದ ಹಾಗೆ ಇದು ಕೇವಲ ಕೊರೊನಾ ಸೋಂಕಿತ ತಾಯಿಯ ಎದೆ ಹಾಲಿಗೆ ಮಾತ್ರ. ಸೋಂಕಿತ ತಾಯಿಂದಿರ ಎದೆ ಹಾಲನ್ನು 62.5 ಡಿಗ್ರಿ ಸೆಲ್ಸಿಯಸ್ನಲ್ಲಿ ಕಾಯಿಸಿದಾಗ ಅದರಲ್ಲಿನ ಸೋಂಕು ಸಾಯುತ್ತದೆ. ಆಗ ಆ ಹಾಲನ್ನು ಮಗುವಿಗೆ ಅಥವಾ ಬೇರಾವುದೇ ಮಗುವಿಗೆ ಕುಡಿಸಿದಾಗ ಯಾವುದೇ ಕೊರೊನಾ ಸೋಂಕು ತಗುಲುವುದಿಲ್ಲ ಎಂದು ಟೊರಂಟೋ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹೇಳಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ಇದುವರೆಗೆ ಕೋರೊನಾ ಸೋಂಕಿತ ತಾಯಿಯಿಂದ ಮಗುವಿಗೆ ಹಾಲುಣಿಸಿದಾಗ ಯಾವುದೇ ಸೋಂಕು ಪ್ರಸಾರವಾದ ಪ್ರಕರಣಗಳು ವರದಿಯಾಗಿಲ್ಲ ಎಂದಿದೆ. ಆದ್ರೆ ಕೆನಡಾದ ಟೊರಂಟೋ ವಿಶ್ವವಿದ್ಯಾಲಯದ ಸಂಶೋಧಕರು ಮಾತ್ರ, ಕೊರೊನಾ ಸೋಂಕಿತ ತಾಯಿಯಿಂದ ಹಾಲಿನ ಮುಖಾಂತರ ಅಥವಾ ಹಾಲುಣಿಸುವಾಗ ಅಥವಾ ಹಾಲಿನಲ್ಲಿ ಉಸಿರಾಡಿದಾಗ ಬೀಳುವ ಕಣಗಳಿಂದ ಸೋಂಕು ಹರಡುತ್ತೆ.

ಆದ್ರೆ ಎದೆ ಹಾಲನ್ನು ಸುಮಾರು 30 ನಿಮಿಷಗಳ ಕಾಲ 62.5 ಡಿಗ್ರಿ ಸೆಲ್ಸಿಯಸ್ನಲ್ಲಿ ಕಾಯಿಸಿದಾಗ ಯಾವುದೇ ವೈರಸ್​ಗಳು ಬದುಕುವುದಿಲ್ಲ. ಆಗ ಆ ಹಾಲನ್ನು ಮಗುವಿಗೆ ಕುಡಿಸಬಹುದು, ಈ ಮೂಲಕ ಸೋಂಕು ಹರಡದಂತೆ ತಡೆಯಬಹುದು ಎಂದಿದ್ದಾರೆ. ಈ ಸಂಬಂಧ ಕೆನೆಡಿಯನ್ ಮೆಡಿಕಲ್ ಅಸೋಶಿಯೇಶನ್ ಜರ್ನಲ್ನಲ್ಲಿ ಲೇಖನ ಕೂಡಾ ಪ್ರಕಟವಾಗಿದೆ.

ತಾಯಿ ಮಗುವಿಗೆ ಉಣಿಸುವ ಎದೆ ಹಾಲು ಅಮೃತ, ಹೀಗಾಗಿಯೇ ಹುಟ್ಟುವ ಮಗುವಿಗೆ ಕನಿಷ್ಟ ಆರು ತಿಂಗಳು ಕಡ್ಡಾಯವಾಗಿ ಎದೆ ಹಾಲುಣಿಸಿ ಎಂದು ವೈದ್ಯರು ತಾಯಿಂದಿರಿಗೆ ಸಲಹೆ ನೀಡುತ್ತಾರೆ. ಆದ್ರೆ ಕೊರೊನಾ ಸಂಕಷ್ಟದ ಸಮಯದಲ್ಲಿ  ಸಾಕಷ್ಟು ಸೋಂಕಿತ ತಾಯಿಂದಿರು ಮಗುವಿಗೆ ಹಾಲುಣಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಕೆನಡಾದ ವಿಜ್ಞಾನಿಗಳ ಆ ಸಂಶೋಧನೆ ತಾಯಿಂದಿನ ಆತಂಕವನ್ನ ದೂರ ಮಾಡಬಹುದು.

Published On - 3:33 pm, Sat, 11 July 20

Follow Us
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ
ನಾಲಿಗೆ ಹರಿಬಿಟ್ಟ ಪ್ರತಾಪ್ ಸಿಂಹ: ಸಿಎಂ ವಿರುದ್ಧ ವಿವಾದಾತ್ಮಕ ಹೇಳಿಕೆ
ನಾಲಿಗೆ ಹರಿಬಿಟ್ಟ ಪ್ರತಾಪ್ ಸಿಂಹ: ಸಿಎಂ ವಿರುದ್ಧ ವಿವಾದಾತ್ಮಕ ಹೇಳಿಕೆ
11 ಎಸೆತಗಳಲ್ಲಿ ಸಿಎಸ್​ಕೆಗೆ ಭಯ ಹುಟ್ಟಿಸಿದ ಪ್ರಿಯಾಂಶ್
11 ಎಸೆತಗಳಲ್ಲಿ ಸಿಎಸ್​ಕೆಗೆ ಭಯ ಹುಟ್ಟಿಸಿದ ಪ್ರಿಯಾಂಶ್
ಗ್ಯಾಸ್​ ಇಲ್ಲದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಗ್ಯಾಸ್​ ಇಲ್ಲದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌