AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೋ ಪೂಜೆಯಿಂದ ಗ್ರಹದೋಷಗಳು ನಶಿಸುತ್ತವೆಯೆ?

ಹಿಂದೂ ಧರ್ಮದಲ್ಲಿ ಗೋವಿಗೆ ಅನಾದಿಕಾಲದಿಂದಲೂ ಪವಿತ್ರ ಸ್ಥಾನವನ್ನು ನೀಡಲಾಗಿದೆ. ರೈತ ದೇಶದ ಬೆನ್ನೆಲುಬಾದರೆ, ಗೋವುಗಳು ರೈತನಿಗೆ ಬೆನ್ನೆಲುಬು. ಇಂತಹ ಗೋವುಗಳನ್ನು ಕೃಷಿ ಚಟುವಟಿಕೆ, ಹೈನುಗಾರಿಕೆಗೆ ಮಾತ್ರ ಸೀಮಿತವಾಗಿರಿಸದೇ ದೈವೀ ಸ್ಥಾನವನ್ನು ನೀಡಲಾಗಿದೆ. ಪರಿಣಾಮ ಭಾರತೀಯರು ಗೋವುಗಳನ್ನು ದೇವರೆಂದು ಪೂಜಿಸ್ತಾರೆ. ಯಾರ ಮನೆಯಲ್ಲಿ ಗೋವುಗಳ ಪೂಜೆಯನ್ನು ಭಯ ಭಕ್ತಿಯಿಂದ ಮಾಡ್ತಾರೋ ಆ ಮನೆಯಲ್ಲಿ ಸುಖ-ಸಮೃದ್ಧಿ, ಶಾಂತಿ, ಐಶ್ವರ್ಯ ನೆಲೆಸಿರುತ್ತೆ. ಅಲ್ಲದೇ ಆ ಮನೆಗೆ ಯಾವುದೇ ರೀತಿಯ ಕಷ್ಟಗಳು ಬರೋದಿಲ್ಲ ಎಂಬ ನಂಬಿಕೆ ಇದೆ. ಗೋ ಮಾತೆಯಲ್ಲಿ 33 ಕೋಟಿ […]

ಗೋ ಪೂಜೆಯಿಂದ ಗ್ರಹದೋಷಗಳು ನಶಿಸುತ್ತವೆಯೆ?
ಸಾಧು ಶ್ರೀನಾಥ್​
|

Updated on: Nov 10, 2019 | 7:39 AM

Share

ಹಿಂದೂ ಧರ್ಮದಲ್ಲಿ ಗೋವಿಗೆ ಅನಾದಿಕಾಲದಿಂದಲೂ ಪವಿತ್ರ ಸ್ಥಾನವನ್ನು ನೀಡಲಾಗಿದೆ. ರೈತ ದೇಶದ ಬೆನ್ನೆಲುಬಾದರೆ, ಗೋವುಗಳು ರೈತನಿಗೆ ಬೆನ್ನೆಲುಬು. ಇಂತಹ ಗೋವುಗಳನ್ನು ಕೃಷಿ ಚಟುವಟಿಕೆ, ಹೈನುಗಾರಿಕೆಗೆ ಮಾತ್ರ ಸೀಮಿತವಾಗಿರಿಸದೇ ದೈವೀ ಸ್ಥಾನವನ್ನು ನೀಡಲಾಗಿದೆ. ಪರಿಣಾಮ ಭಾರತೀಯರು ಗೋವುಗಳನ್ನು ದೇವರೆಂದು ಪೂಜಿಸ್ತಾರೆ. ಯಾರ ಮನೆಯಲ್ಲಿ ಗೋವುಗಳ ಪೂಜೆಯನ್ನು ಭಯ ಭಕ್ತಿಯಿಂದ ಮಾಡ್ತಾರೋ ಆ ಮನೆಯಲ್ಲಿ ಸುಖ-ಸಮೃದ್ಧಿ, ಶಾಂತಿ, ಐಶ್ವರ್ಯ ನೆಲೆಸಿರುತ್ತೆ. ಅಲ್ಲದೇ ಆ ಮನೆಗೆ ಯಾವುದೇ ರೀತಿಯ ಕಷ್ಟಗಳು ಬರೋದಿಲ್ಲ ಎಂಬ ನಂಬಿಕೆ ಇದೆ.

ಗೋ ಮಾತೆಯಲ್ಲಿ 33 ಕೋಟಿ ದೇವಾನುದೇವತೆಗಳು ನೆಲೆಸಿರುತ್ತಾರೆ ಎಂಬ ನಂಬಿಕೆ ಇದೆ. ಎಲ್ಲಿ ಗೋವುಗಳು ಸುಖವಾಗಿರುತ್ತವೆಯೋ ಅಲ್ಲಿ ದೇವಾನುದೇವತೆಗಳು ಸಂತೃಪ್ತರಾಗಿರ್ತಾರೆ. ಆ ಸ್ಥಳ ಸಮೃದ್ಧವಾಗಿರುತ್ತೆ ಎನ್ನಲಾಗುತ್ತೆ. ಇನ್ನು ಗೋವುಗಳ ಕೊರಳಿಗೆ ಕಟ್ಟುವ ಘಂಟೆಯಿಂದ ಹೊರಹೊಮ್ಮುವ ಘಂಟಾನಾದಕ್ಕೆ ದುಷ್ಟಶಕ್ತಿಗಳನ್ನು ಓಡಿಸುವ ಶಕ್ತಿ ಇದೆ ಎನ್ನಲಾಗುತ್ತೆ. ಹಿಂದೂ ಪುರಾಣಗಳ ಪ್ರಕಾರ, ಗೋಮಾತೆಯ ಸಗಣಿಯಲ್ಲಿ ಸಾಕ್ಷಾತ್ ಲಕ್ಷ್ಮೀಯೇ ವಾಸವಾಗಿರ್ತಾಳೆ.

ಗೋ ಮೂತ್ರದಲ್ಲಿ ಗಂಗೆ ನೆಲೆಸಿರುತ್ತಾಳೆ. ಗೋವಿನ ಸಗಣಿಯಿಂದ ಮಾಡಿದ ಧೂಪವನ್ನು ಪ್ರತಿದಿನ ಮನೆ, ಕಚೇರಿ, ದೇವಸ್ಥಾನದಲ್ಲಿ ಹಚ್ಚಿದ್ರೆ ಪರಿಸರ ಶುದ್ಧಗೊಳ್ಳುವುದರ ಜೊತೆಗೆ ಉಸಿರಾಟಕ್ಕೆ ಸಂಬಂಧಿಸಿದ ತೊಂದರೆಗಳು ನಿವಾರಣೆಯಾಗುತ್ತವೆ. ಎನ್ನಲಾಗುತ್ತೆ. ಜೊತೆಗೆ ನಕಾರಾತ್ಮಕ ಶಕ್ತಿಗಳು ಪ್ರವೇಶ ಮಾಡುವುದಿಲ್ಲ. ಗೋ ಪೂಜೆ ಎಲ್ಲಾ ದೇವರುಗಳ ಪೂಜೆಗಿಂತ ಮಿಗಿಲು. ಯಾಕಂದ್ರೆ ಎಲ್ಲಾ ದೇವರುಗಳು ಒಂದೇ ಕಡೆ ಸಿಗುವುದಿಲ್ಲ. ಒಂದೊಂದು ದೇವರಿಗೂ ಒಂದೊಂದು ದೇವಸ್ಥಾನಗಳಿರುತ್ತೆ.

ಇನ್ನು ಶ್ರೀ ಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ ಗೋವನ್ನು ಸಂಸ್ಕೃತಿಯ ಸಂರಕ್ಷಕ ಎಂದು ಹೇಳ್ತಾನೆ. ಆದ್ದರಿಂದ ಹಿಂದೂಗಳು ಅತ್ಯಂತ ಶ್ರದ್ಧಾ ಭಕ್ತಿಯಿಂದ ಗೋ ಪೂಜೆ ಮಾಡ್ತಾರೆ. 33 ಕೋಟಿ‌ ದೇವತೆಗಳ ಆವಾಸ‌ ಸ್ಥಾನವಾಗಿರುವ ಗೋವನ್ನು ಪೂಜಿಸುವುದರಿಂದ ಸಕಲ ಪಾಪ ನಿವಾರಣೆಯಾಗುತ್ತೆ ಎಂಬ ನಂಬಿಕೆ ಇದೆ. ಪ್ರಾಚೀನ ಭಾರತೀಯ ಕಲ್ಪನೆಯಂತೆ ನಮ್ಮ ಸುತ್ತಲೂ ಗೋವುಗಳಿರುವುದು ಸಮೃದ್ಧಿಯ ಸಂಕೇತ. ಹೀಗಾಗೇ ರೈತರು ಬೆಳೆಯ ಕೊಯ್ಲಿನ ಜೊತೆಗೆ‌ ಸಂಕ್ರಾಂತಿಯ ವೇಳೆ ಗೋಪೂಜೆಯನ್ನು ಮಾಡ್ತಾರೆ.

ಇನ್ನು ಗ್ರಹದೋಷ ಉಳ್ಳವರು ಆಲಯದಲ್ಲಿ ನವಗ್ರಹ ಪ್ರದಕ್ಷಿಣೆ ಮಾಡುವ ಜೊತೆಗೆ ಆಯಾ ಗ್ರಹದೋಷ ಸಂಬಂಧಿತ ವಾರಗಳಂದು ಆಯಾ ಗ್ರಹಕ್ಕೆ ಪ್ರಿಯವಾದ ಧಾನ್ಯವನ್ನು ನೆನೆಸಿ ಅದರೊಂದಿಗೆ ಬೆಲ್ಲವನ್ನು ಸೇರಿಸಿ ಗೋಮಾತೆಗೆ ನೀಡಿದ್ರೆ ಶುಭಪ್ರದ. ನಂತರ ಗೋವಿಗೆ 3 ಪ್ರದಕ್ಷಿಣೆ ಹಾಕಿ, ಗೋವಿನ ಬಾಲಕ್ಕೆ ನಮಸ್ಕರಿಸಿದರೆ ಗ್ರಹಬಾಧೆಗಳು ದೂರಾಗುತ್ತವೆ ಅಂತಾ ಶಾಸ್ತ್ರಗಳಲ್ಲಿ ಉಲ್ಲೇಖವಿದೆ.

Follow Us
ವಿಜಯ್ ಹಾಡಿಗೆ ಡ್ಯಾನ್ಸ್ ಮಾಡಿದ ತಮಿಳುನಾಡು ಸರ್ಕಾರಿ ಶಾಲೆ ಶಿಕ್ಷಕಿ ಅಮಾನತು
ವಿಜಯ್ ಹಾಡಿಗೆ ಡ್ಯಾನ್ಸ್ ಮಾಡಿದ ತಮಿಳುನಾಡು ಸರ್ಕಾರಿ ಶಾಲೆ ಶಿಕ್ಷಕಿ ಅಮಾನತು
ಹಲ್ಲಿನ ಆರೋಗ್ಯಕ್ಕಾಗಿ ವಿಶೇಷ ಅಭಿಯಾನ
ಹಲ್ಲಿನ ಆರೋಗ್ಯಕ್ಕಾಗಿ ವಿಶೇಷ ಅಭಿಯಾನ
ರೈಲ್ವೆ ಹಳಿಯ ಮೇಲೆ ತಂಬಾಕು ಉಗುಳುವಾಗ ವಂದೇ ಭಾರತ್ ರೈಲು ಡಿಕ್ಕಿ
ರೈಲ್ವೆ ಹಳಿಯ ಮೇಲೆ ತಂಬಾಕು ಉಗುಳುವಾಗ ವಂದೇ ಭಾರತ್ ರೈಲು ಡಿಕ್ಕಿ
ತುಟಿಯಲ್ಲಿ ಬೀಡಿ, ಬೆನ್ನಲ್ಲಿ ಬ್ಯಾಗ್ 2 ಗಂಟೆ ನಿಂತಲ್ಲೇ ನಿಂತ ವ್ಯಕ್ತಿ
ತುಟಿಯಲ್ಲಿ ಬೀಡಿ, ಬೆನ್ನಲ್ಲಿ ಬ್ಯಾಗ್ 2 ಗಂಟೆ ನಿಂತಲ್ಲೇ ನಿಂತ ವ್ಯಕ್ತಿ
ಮುಡಾ ಕೇಸ್: ಸಿದ್ದರಾಮಯ್ಯ, ಪತ್ನಿ ಪಾರ್ವತಿಗೆ ಹೈಕೋರ್ಟ್​ ತುರ್ತು ನೋಟಿಸ್!
ಮುಡಾ ಕೇಸ್: ಸಿದ್ದರಾಮಯ್ಯ, ಪತ್ನಿ ಪಾರ್ವತಿಗೆ ಹೈಕೋರ್ಟ್​ ತುರ್ತು ನೋಟಿಸ್!
ಎ ಖಾತಾದಿಂದ ಬಿ ಖಾತಾಗೆ ಕನ್ವರ್ಷನ್: ಬಿಗ್ ಅಪ್ಡೇಟ್ ನೀಡಿದ ಡಿಕೆ ಶಿವಕುಮಾರ್
ಎ ಖಾತಾದಿಂದ ಬಿ ಖಾತಾಗೆ ಕನ್ವರ್ಷನ್: ಬಿಗ್ ಅಪ್ಡೇಟ್ ನೀಡಿದ ಡಿಕೆ ಶಿವಕುಮಾರ್
ಸದನದಲ್ಲಿ ಡಿಕೆಶಿ-ಮುನಿರತ್ನ ನಡುವೆ ಮಾತಿನ ಕದನ
ಸದನದಲ್ಲಿ ಡಿಕೆಶಿ-ಮುನಿರತ್ನ ನಡುವೆ ಮಾತಿನ ಕದನ
ಚಾಕಲೇಟ್ ನೀಡಿ ವಿದ್ಯಾರ್ಥಿನಿಗೆ ಪ್ರಪೋಸ್ ಮಾಡಿದ ಪ್ರಾಧ್ಯಾಪಕ
ಚಾಕಲೇಟ್ ನೀಡಿ ವಿದ್ಯಾರ್ಥಿನಿಗೆ ಪ್ರಪೋಸ್ ಮಾಡಿದ ಪ್ರಾಧ್ಯಾಪಕ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾಕ್ ಡ್ರಿಲ್: ಏನೆಲ್ಲ ಪರಿಶೀಲನೆ ನಡೀತು?
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾಕ್ ಡ್ರಿಲ್: ಏನೆಲ್ಲ ಪರಿಶೀಲನೆ ನಡೀತು?
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಸಿಸಲು ಬರುವವರಿಗೆ ಹೊಸ ರೂಲ್ಸ್!
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಸಿಸಲು ಬರುವವರಿಗೆ ಹೊಸ ರೂಲ್ಸ್!