AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಲು ಒಡೆಯಿತೇ? ಚಿಂತೆ ಬಿಡಿ ಬಹಳಷ್ಟು ಪ್ರಯೋಜನ ಪಡೆಯಿರಿ

ಹಾಲು ಒಡೆಯಿತೇ? ಎಸೆಯಬೇಡಿ, ಇದರ ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ವಾತಾವರಣದಲ್ಲಿರುವ ಬ್ಯಾಕ್ಟೀರಿಯಾಗಳಲ್ಲಿ ಎಷ್ಟು ಒಳ್ಳೆಯ ಬ್ಯಾಕ್ಟೀರಿಯಾಗಳಿವೆಯೋ ಅಷ್ಟೇ ಕೆಟ್ಟ ಬ್ಯಾಕ್ಟೀರಿಯಾಗಳೂ ಇವೆ. ನಮ್ಮ ಹೊಲವನ್ನು ಕೊಳೆಸಿ ಫಲವತ್ತಾಗಿಸುವ ಬ್ಯಾಕ್ಟೀರಿಯಾಗಳಂತೆಯೇ ನಮ್ಮ ಆಹಾರವನ್ನು ಕೊಳೆಸಿ ಹಾಳು ಮಾಡುವ ಬ್ಯಾಕ್ಟೀರಿಯಾಗಳೂ ಇವೆ. ನಾವು ಸೇವಿಸುವ ಆಹಾರಗಳಲ್ಲಿ ಅತಿ ಸುಲಭವಾಗಿ ಹಾಳಾಗುವ ಆಹಾರವೆಂದರೆ ಹಾಲು. ವಾಸ್ತವವಾಗಿ ಹಾಲು ಒಡೆಯುವುದು ಅಂದರೆ ಹಾಲಿನಂಶ ಮತ್ತು ನೀರಿನಂಶವನ್ನು ಬೇರೆ ಮಾಡುವ ಪ್ರಕ್ರಿಯೆಯೇ ಆಗಿದೆಯೇ ಹೊರತು ಇದನ್ನು ಇತರ ಕಾರ್ಯಗಳಿಗೆ ಬಳಸಲಾಗದು ಎಂದೇನಿಲ್ಲ. ಹಣ್ಣು ತರಕಾರಿಗಳು […]

ಹಾಲು ಒಡೆಯಿತೇ? ಚಿಂತೆ ಬಿಡಿ ಬಹಳಷ್ಟು ಪ್ರಯೋಜನ ಪಡೆಯಿರಿ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Nov 11, 2019 | 1:14 PM

Share

ಹಾಲು ಒಡೆಯಿತೇ? ಎಸೆಯಬೇಡಿ, ಇದರ ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ವಾತಾವರಣದಲ್ಲಿರುವ ಬ್ಯಾಕ್ಟೀರಿಯಾಗಳಲ್ಲಿ ಎಷ್ಟು ಒಳ್ಳೆಯ ಬ್ಯಾಕ್ಟೀರಿಯಾಗಳಿವೆಯೋ ಅಷ್ಟೇ ಕೆಟ್ಟ ಬ್ಯಾಕ್ಟೀರಿಯಾಗಳೂ ಇವೆ. ನಮ್ಮ ಹೊಲವನ್ನು ಕೊಳೆಸಿ ಫಲವತ್ತಾಗಿಸುವ ಬ್ಯಾಕ್ಟೀರಿಯಾಗಳಂತೆಯೇ ನಮ್ಮ ಆಹಾರವನ್ನು ಕೊಳೆಸಿ ಹಾಳು ಮಾಡುವ ಬ್ಯಾಕ್ಟೀರಿಯಾಗಳೂ ಇವೆ. ನಾವು ಸೇವಿಸುವ ಆಹಾರಗಳಲ್ಲಿ ಅತಿ ಸುಲಭವಾಗಿ ಹಾಳಾಗುವ ಆಹಾರವೆಂದರೆ ಹಾಲು.

ವಾಸ್ತವವಾಗಿ ಹಾಲು ಒಡೆಯುವುದು ಅಂದರೆ ಹಾಲಿನಂಶ ಮತ್ತು ನೀರಿನಂಶವನ್ನು ಬೇರೆ ಮಾಡುವ ಪ್ರಕ್ರಿಯೆಯೇ ಆಗಿದೆಯೇ ಹೊರತು ಇದನ್ನು ಇತರ ಕಾರ್ಯಗಳಿಗೆ ಬಳಸಲಾಗದು ಎಂದೇನಿಲ್ಲ. ಹಣ್ಣು ತರಕಾರಿಗಳು ಹಾಳಾದರೆ ಇವನ್ನು ಅನಿವಾರ್ಯವಾಗಿ ಎಸೆಯಲೇಬೇಕಾಗುತ್ತದೆ. ಒಡೆದ ಹಾಲನ್ನೂ ಕೆಲವು ಬಗೆಗಳಲ್ಲಿ ಉಪಯೋಗಿಸುವ ಮೂಲಕ ವ್ಯರ್ಥವಾಗುವುದನ್ನು ತಪ್ಪಿಸಬಹುದು. ಈ ಮೂಲಕ ಒಡೆದ ಹಾಲಿಗೆ ಅತ್ತು ಪ್ರಯೋಜನವಿಲ್ಲ ಎಂಬ ನಾಣ್ಣುಡಿಯನ್ನು ಕೊಂಚ ಬದಲಿಸಬೇಕಾಗಿ ಬರಬಹುದು.

ಒಡೆದ ಹಾಲು ಸಲಾಡ್ ಗೆ ಬಳಸಿ ನೋಡಿ: ಮುಂದಿನ ಬಾರಿ ಹಾಲು ಒಡೆದಾಗ ಹುಳಿ ಕ್ರೀಂ ಬದಲು ಈ ಹಾಲನ್ನು ನಿಮ್ಮ ಸಲಾಡ್ ಮೇಲೆ ಸುರಿದು ಅಲಂಕರಿಸಬಹುದು. ಆದರೆ ಇದಕ್ಕಾಗಿ ಪ್ಯಾಶ್ಚರೀಕರಿಸಿದ ಹಾಲು ಹಾಳಾದರೆ ಬಳಸಬಾರದು, ಕೇವಲ ಪ್ಯಾಶ್ಚರೀಕರಿಸದ ಹಾಲು ಹಾಳಾದರೆ ಮಾತ್ರವೇ ಅನುಸರಿಸಬಹುದು.

ಗಿಡಕ್ಕೆ ಗೊಬ್ಬರ: ಗಿಡಕ್ಕೆ ಗೊಬ್ಬರವಾಗಿ ಹಾಲನ್ನು ಒಡೆದ ಬ್ಯಾಕ್ಟೀರಿಯಾಗಳೇ ಮಣ್ಣನ್ನೂ ಒಡೆದು ಫಲವತ್ತಾಗಿಸುವ ಕ್ಷಮತ್ ಹೊಂದಿವೆ. ಹಾಗಾಗಿ ಒಡೆದ ಹಾಲನ್ನು ಹೂಕುಂಡಕ್ಕೆ ಸುರಿಯುವ ಮೂಲಕ ಗಿಡಗಳಿಗೆ ಉತ್ತಮ ಗೊಬ್ಬರ ದೊರಕಿದಂತಾಗುತ್ತದೆ ಮಾತ್ರವಲ್ಲದೇ ಪ್ರಾಣಿಗಳ ಜೀವಕೋಶಗಳಿಗೆ ಅಗತ್ಯವಿರುವ ಕ್ಯಾಲ್ಸಿಯಂ ಅಂಶವನ್ನು ಹೆಚ್ಚಾಗಿಯೇ ಒದಗಿಸಲು ಸಾಧ್ಯವಾಗುತ್ತದೆ.

ಸಾಕು ಪ್ರಾಣಿಗಳಿಗೆ ನೀಡಿ: ಒಡೆದ ಹಾಲನ್ನು ನಾವು ಜೀರ್ಣಿಸಿಕೊಳ್ಳಲಾರೆವಾದರೂ ನಮ್ಮ ಸಾಕುಪ್ರಾಣಿಗಳು ಸುಲಭವಾಗಿ ಜೀರ್ಣಿಸಿಕೊಳ್ಳಬಲ್ಲವು. ಹಾಗಾಗಿ ಇವುಗಳನ್ನು ಸುರಕ್ಷಿತವಾಗಿ ನಮ್ಮ ಸಾಕುಪ್ರಾಣಿಗಳಿಗೆ ಒದಗಿಸಬಹುದು. ಅಥವಾ ಇತರ ಆಹಾರಗಳಾದ ಬಿಸ್ಕತ್ ಮೊದಲಾದವುಗಳ ಜೊತೆಗೆ ಬೆರೆಸಿ ನೀಡಬಹುದು. ಇದರಿಂದ ಪ್ರಾಣಿಗಳಿಗೆ ಹೆಚ್ಚಿನ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ದೊರಕುತ್ತದೆ.

ಮುಖಲೇಪದ ರೂಪದಲ್ಲಿ ಇದರಲ್ಲಿರುವ ಬ್ಯಾಕ್ಟೀರಿಯಾಗಳು ವಿಶೇಷವಾಗಿ ಚರ್ಮದಾಳದಲ್ಲಿರುವ ಕ್ರಿಮಿ ಮತ್ತು ಕೆಟ್ಟ ಬ್ಯಾಕ್ಟೀರಿಯಾಗಳನ್ನು ಕೊಂದು ನಿವಾರಿಸುವ ಕ್ಷಮತೆ ಪಡೆದಿವೆ. ಹಾಗಾಗಿ ಒಡೆದ ಹಾಲನ್ನು ಮುಖಲೇಪದ ರೂಪದಲ್ಲಿ ಬಳಸುವ ಮೂಲಕ ಮೊಡವೆಗಳಿರುವ ಚರ್ಮಕ್ಕೆ ಹೆಚ್ಚಿನ ಆರೈಕೆ ಒದಗಿಸಬಹುದು. ಒಡೆದ ಹಾಲನ್ನು ನೇರವಾಗಿ ಮುಖಕ್ಕೆ ಹಚ್ಚಿಕೊಳ್ಳುವ ಮೂಲಕ ಕೊಂಚ ಹೊತ್ತು ವಾಸನೆಯನ್ನು ಸಹಿಸಬೇಕಾಗಿ ಬಂದರೂ, ಬಳಿಕ ಇದು ನೀಡುವ ಪರಿಣಾಮ ಮಾತ್ರ ಸಿಹಿಯೇ ಆಗಿರುತ್ತದೆ.

ಚೀಸ್: ಹೆಚ್ಚಿನ ಜನರಿಗೆ ಈ ಮಾಹಿತಿಯ ಅರಿವಿಲ್ಲದಿರಬಹುದು, ಏನೆಂದರೆ ಚೀಸ್ ಅನ್ನು ಹುಳಿಬರಿಸಿದ ಮೊಸರಿನಿಂದ ತಯಾರಿಸಲಾಗುತ್ತದೆ. ಹಾಗಾಗಿ ಮುಂದಿನ ಬಾರಿ ಹಾಲು ಒಡೆದಾಗ ನಿಮ್ಮದೇ ಆದ ಚೀಸ್ ತಯಾರಿಗೆ ಇದನ್ನು ಬಳಸಬಹುದು. ನಿಮಗೆ ಸೂಕ್ತವೆನಿಸಿದ ಯಾವುದೇ ಪ್ರಕಾರವನ್ನು ಅನುಸರಿಸಿ ಚೀಸ್ ತಯಾರಿಸಿ. ಈ ಮೂಲಕ ಹಣದಲ್ಲಿಯೂ ಉಳಿತಾಯ ಸಾಧಿಸಬಹುದು.

ಬೇಕರಿ ಉತ್ಪನ್ನಗಳಿಗೆ: ನಿಮಗೆ ಮನೆಯಲ್ಲಿಯೇ ಬೇಕರಿ ಉತ್ಪನ್ನಗಳನ್ನು ಅಂದರೆ ಕೇಕ್, ಪಫ್ಸ್ ಮೊದಲಾದವುಗಳನ್ನು ಮಾಡುವ ಉತ್ಸಾಹವಿದ್ದರೆ , ಇಲ್ಲವೇ ಸರಳವಾಗಿ ದೋಸೆ ಮಾಡುವುದಾದರೆ ಇದರಲ್ಲಿ ಹುಳಿಬರಿಸುವ ಹುದುಗು ಪದಾರ್ಥವನ್ನಾಗಿ ಒಡೆದ ಹಾಲನ್ನು ಬಳಸಬಹುದು. ಅಚ್ಚರಿ ಎಂದರೆ, ಯಾವಾಗ ಒಡೆದ ಹಾಲನ್ನು ಈ ಖಾದ್ಯಗಳಲ್ಲಿ ಹುಳಿಕಾರಕವಾಗಿ ಬಳಸುತ್ತೇವೆಯೋ ಆಗ ಆ ಖಾದ್ಯ ಆಕರ್ಷಕವಾಗಿ ಉಬ್ಬುವ ಜೊತೆಗೇ ಹುಳಿಯೇ ಇರದೆ ಅತ್ಯುತ್ತಮ ರುಚಿಯನ್ನು ಹೊಂದುತ್ತದೆ.

Published On - 11:34 am, Sun, 10 November 19

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹೇಗೆ?
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹೇಗೆ?