AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ತಪ್ಪು ಮಾಡ್ಬಿಟ್ಟೆ: ಹ್ಯಾರಿ ಬ್ರೂಕ್ ಪಶ್ಚಾತ್ತಾಪ

India vs England Semi Final: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್​ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 253 ರನ್​ ಕಲೆಹಾಕಿದರೆ, ಇಂಗ್ಲೆಂಡ್ ತಂಡವು 246 ರನ್​ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಭಾರತ ತಂಡ 7 ರನ್​ಗಳ ಗೆಲುವು ದಾಖಲಿಸಿದೆ.

ನಾನು ತಪ್ಪು ಮಾಡ್ಬಿಟ್ಟೆ: ಹ್ಯಾರಿ ಬ್ರೂಕ್ ಪಶ್ಚಾತ್ತಾಪ
Harry Brook
ಝಾಹಿರ್ ಯೂಸುಫ್
|

Updated on: Mar 06, 2026 | 10:21 AM

Share

T20 World Cup 2026: ಟಿ20 ವಿಶ್ವಕಪ್​ನ ಸೆಮಿಫೈನಲ್ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಈ ಹೋರಾಟಕ್ಕೆ ಆಂಗ್ಲರಿಗೆ ಸೋಲುಣಿಸಿ ಟೀಮ್ ಇಂಡಿಯಾ ರೋಚಕ ಜಯ ಸಾಧಿಸಿತು. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಬ್ರೂಕ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 253 ರನ್​ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡವು 20 ಓವರ್​ಗಳಲ್ಲಿ 246 ರನ್​ಗಳಿಸಿ ವಿರೋಚಿತವಾಗಿ ಸೋಲೊಪ್ಪಿಕೊಂಡಿತು.

ಈ ಸೋಲಿನ ಬಳಿಕ ಮಾತನಾಡಿದ ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಬ್ರೂಕ್, ನಮ್ಮ ಸೋಲಿಗೆ ನಾನೇ ಕಾರಣ ಎಂದರು. ಏಕೆಂದರೆ ಈ ಪಂದ್ಯದಲ್ಲಿ ನಾನು ಕೈ ಬಿಟ್ಟ ಕ್ಯಾಚ್ ಇಡೀ ಪಂದ್ಯದ ಚಿತ್ರಣ ಬದಲಿಸಿತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಪಂದ್ಯದ ಮೊದಲ ಇನಿಂಗ್ಸ್​ನ 3ನೇ ಓವರ್​ನಲ್ಲಿ ಸಂಜು ಸ್ಯಾಮ್ಸನ್ ಸುಲಭ ಕ್ಯಾಚ್ ನೀಡಿದ್ದರು. ಆದರೆ ಮಿಡ್ ವಿಕೆಟ್​ನಲ್ಲಿ ಫೀಲ್ಡಿಂಗ್​ನಲ್ಲಿದ್ದ ಹ್ಯಾರಿ ಬ್ರೂಕ್ ಈ ಸುಲಭ ಕ್ಯಾಚ್ ಅನ್ನು ಕೈ ಚೆಲ್ಲಿದ್ದರು.

ಹೀಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡ ಸಂಜು ಸ್ಯಾಮ್ಸನ್ 42 ಎಸೆತಗಳಲ್ಲಿ 7 ಭರ್ಜರಿ ಸಿಕ್ಸ್ ಹಾಗೂ 8 ಫೋರ್​ಗಳೊಂದಿಗೆ 89 ರನ್ ಚಚ್ಚಿದ್ದರು. ಈ ವಿಸ್ಫೋಟಕ ಬ್ಯಾಟಿಂಗ್ ನೆರವಿನೊಂದಿಗೆ ಟೀಮ್ ಇಂಡಿಯಾ 253 ರನ್​ ಕಲೆಹಾಕಲು ಸಾಧ್ಯವಾಯಿತು.

ಈ ಒಂದು ಕ್ಯಾಚ್ ಕೈ ಬಿಟ್ಟಿರುವ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಿರುವ ಹ್ಯಾರಿ ಬ್ರೂಕ್, ನಾನು ಸಂಜು ಸ್ಯಾಮ್ಸನ್ ಅವರ ಕ್ಯಾಚ್ ಬಿಟ್ಟು ದೊಡ್ಡ ತಪ್ಪು ಮಾಡಿದೆ. ಎಂದಿನಂತೆ ಕ್ಯಾಚ್‌ಗಳು ಪಂದ್ಯಗಳನ್ನು ಗೆಲ್ಲಿಸುತ್ತದೆ. ದುರದೃಷ್ಟವಶಾತ್ ನನ್ನಿಂದಾಗಿ ತಂಡ ನಷ್ಟ ಅನುಭವಿಸಿತು.

ಒಂದು ವೇಳೆ ನಾನು ಆ ಕ್ಯಾಚ್ ಹಿಡಿದಿದ್ದರೆ ಪಂದ್ಯದ ಮೇಲೆ ಆರಂಭದಲ್ಲೇ ನಾವು ಹಿಡಿತ ಸಾಧಿಸಬಹುದಿತ್ತು. ಆದರೆ ನಾನು ಕೈ ಮೇಲೆಕ್ಕೆತ್ತಿ ಮಾಡಿದ ತಪ್ಪು ಭಾರೀ ನಷ್ಟವನ್ನುಂಟು ಮಾಡಿತು ಎಂದು ಹ್ಯಾರಿ ಬ್ರೂಕ್ ಹೇಳಿದ್ದಾರೆ.

ಇನ್ನು ಈ ಪಂದ್ಯದ ಮೊದಲ ಇನಿಂಗ್ಸ್​ ವೇಳೆ ಪಿಚ್​ನಲ್ಲಿ ಸ್ವಲ್ಪ ಹೆಚ್ಚು ಸ್ಪಿನ್ ನಿರೀಕ್ಷಿಸಿದ್ದೆವು. ಆದರೆ ನಾವಂದುಕೊಂಡಂತೆ ಆಗಲಿಲ್ಲ. ಅತ್ತ ಭಾರತೀಯ ಬ್ಯಾಟರ್​ಗಳು ಅದ್ಭುತವಾಗಿ ಬ್ಯಾಟಿಂಗ್​ ಮಾಡಿದರು. ಇದಾಗ್ಯೂ ನಮ್ಮ ಪ್ರಯತ್ನದ ಬಗ್ಗೆ ನಿಜಕ್ಕೂ ನನಗೆ ಹೆಮ್ಮೆಯಿದೆ.

ನಾವು ಭಾರತೀಯ ಬ್ಯಾಟರ್​ಗಳ ವಿರುದ್ಧ ಆಡುವಾಗ ನೆನಪಲ್ಲಿಟುಕೊಳ್ಳಬೇಕಾದ ಮುಖ್ಯ ಅಂಶವೆಂದರೆ,  ಅವರು ವಿಶ್ವದ ಅತ್ಯುತ್ತಮರು ಎಂಬುದು. ನೀವು ಅವರ ವಿರುದ್ಧ ತಪ್ಪು ಮಾಡಿದರೆ, ಚೆಂಡು ಪಾರ್ಕ್‌ನಿಂದ ಹೊರಗೆ ಹೋಗುತ್ತದೆ. ಬೌಲಿಂಗ್​ನಲ್ಲಿ ನಾವು ಉತ್ತಮ ಪ್ರದರ್ಶನ ನೀಡಿಲ್ಲ ನಿಜ.

ಇದನ್ನೂ ಓದಿ: VIDEO: ಅದು ಔಟ್ ಅಲ್ಲಮ್ಮ… ಹೆಂಡ್ತಿ ಕುಣಿಯುವುದನ್ನು ತಡೆದ ಧೋನಿ

ಇದಾಗ್ಯೂ ಚೇಸಿಂಗ್​ನಲ್ಲಿ ಜೇಕಬ್ ಬೆಥೆಲ್ ಪ್ರದರ್ಶಿಸಿದ ದಿಟ್ಟ ಆಟ ನಂಬಲಾಸಾಧ್ಯ. ಈ ಸೋಲಿನ ಹೊರತಾಗಿಯೂ ನಾವು ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇವೆ. ನಾನು ಮೊದಲೇ ಹೇಳಿದಂತೆ, ನಾವು ಆಡಿದ ರೀತಿಗೆ ನಾವು ತುಂಬಾ ಹೆಮ್ಮೆಪಡಬೇಕು. ನಾವು ಎಂದಿಗೂ ಪಂದ್ಯಗಳಿಂದ ಹೊರಗುಳಿದಿರಲಿಲ್ಲ. 250 ರನ್‌ಗಳನ್ನು ಬೆನ್ನಟ್ಟುವಾಗ, ಇತರ ತಂಡಗಳು ಮುಗ್ಗರಿಸಿರಬಹುದು ಅಥವಾ ಕುಸಿದಿರಬಹುದು. ಆದರೆ ನಾವು ಇಡೀ ಪಂದ್ಯವನ್ನು ಅಂತಿಮ ಘಟ್ಟದತ್ತ ಕೊಂಡೊಯ್ದಿದ್ದೇವೆ ಎಂದು ಹ್ಯಾರಿ ಬ್ರೂಕ್ ತಂಡದ ಪ್ರದರ್ಶನದ ಬಗ್ಗೆ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ.

Follow Us
ಭಾರತದೊಂದಿಗಿನ ಸಂಬಂಧ ಹಾಳಾಗಲು ಬಿಡುವುದಿಲ್ಲ: ಅಬ್ದುಲ್ ಮಜೀದ್ ಹಕಿಮೆಲಾಹಿ
ಭಾರತದೊಂದಿಗಿನ ಸಂಬಂಧ ಹಾಳಾಗಲು ಬಿಡುವುದಿಲ್ಲ: ಅಬ್ದುಲ್ ಮಜೀದ್ ಹಕಿಮೆಲಾಹಿ
ಅತಿವೇಗವಾಗಿ ಬಂದು ಪಲ್ಟಿಯಾದ ಕ್ಯಾಂಟರ್ ಲಾರಿ, ಬೆಚ್ಚಿಬೀಳಿಸುವ ವಿಡಿಯೋ ವೈರಲ
ಅತಿವೇಗವಾಗಿ ಬಂದು ಪಲ್ಟಿಯಾದ ಕ್ಯಾಂಟರ್ ಲಾರಿ, ಬೆಚ್ಚಿಬೀಳಿಸುವ ವಿಡಿಯೋ ವೈರಲ
ಅಯ್ಯಯ್ಯೋ.. ಕುರ್ಚಿಯಿಂದ ಜಾರಿ ಬಿದ್ದ ನಾಗ ಚೈತನ್ಯ; ಪೆಟ್ಟಾಯ್ತಾ?
ಅಯ್ಯಯ್ಯೋ.. ಕುರ್ಚಿಯಿಂದ ಜಾರಿ ಬಿದ್ದ ನಾಗ ಚೈತನ್ಯ; ಪೆಟ್ಟಾಯ್ತಾ?
ಮಹಿಳೆಯರು ಶನಿವಾರದಂದು ತವರು ಮನೆಗೆ ಬರಬಹುದಾ?
ಮಹಿಳೆಯರು ಶನಿವಾರದಂದು ತವರು ಮನೆಗೆ ಬರಬಹುದಾ?
ಇಂದು ಈ ರಾಶಿಯವರ ಆಕಸ್ಮಿಕ ಪ್ರಯಾಣ ಯೋಗ
ಇಂದು ಈ ರಾಶಿಯವರ ಆಕಸ್ಮಿಕ ಪ್ರಯಾಣ ಯೋಗ
ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಭಾರೀ ಚರ್ಚೆ: ಫೈನಲಿ ಏನಾಯ್ತು?
ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಭಾರೀ ಚರ್ಚೆ: ಫೈನಲಿ ಏನಾಯ್ತು?
ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು
ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್