ಶ್ರೀ ಕ್ಷೇತ್ರ ಧರ್ಮಸ್ಥಳ, ಸದಾಚಾರ ಮತ್ತು ಧಾರ್ಮಿಕತೆಯ ನಾಡು. 800 ವರ್ಷಗಳಷ್ಟು ಹಳೆಯದಾದ ಇತಿಹಾಸವನ್ನು ಹೊಂದಿರುವ ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ಧಾರ್ಮಿಕ ಹೆಗ್ಗುರುತುಗಳಲ್ಲಿ ಒಂದಾಗಿದೆ. ನ್ಯಾಯ, ನೀತಿ, ಧರ್ಮಕ್ಕೆ ಹೆಸರು ಶ್ರೀ ಕ್ಷೇತ್ರ ಧರ್ಮಸ್ಥಳ. ”ಎದ್ದೇಳು ಮಂಜುನಾಥ, ಏಳು ಬೆಳಗಾಯಿತು.. ಧರ್ಮದೇವತೆಗಳು ನಿನ್ನ ದರುಶನಕೆ ಕಾದಿಹರು, ಅಣ್ಣಪ್ಪಸ್ವಾಮಿಯೂ ನಿನ್ನ ಆಜ್ಞೆಗೆ ನಿಂತಿಹನು” ಎಂಬ ಸುಪ್ರಭಾತದೊಂದಿಗೆ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಮಂಜುನಾಥಸ್ವಾಮಿಯ ನಿತ್ಯಸೇವೆ ಆರಂಭವಾಗುತ್ತದೆ. ನೇತ್ರಾವತಿಯಲ್ಲಿ ಮಿಂದ ಜನರು ಸ್ವಾಮಿ ಶ್ರೀ ಮಂಜುನಾಥನ ದರುಶನಕ್ಕಾಗಿ ಸರತಿಯಲ್ಲಿ ಸಾಲುಗಟ್ಟಿ ನಿಲ್ಲುತ್ತಾರೆ. ಧರ್ಮಸ್ಥಳ ಶ್ರೀ ಮಂಜುನಾಥನ ದರ್ಶನಕ್ಕೆ ವರ್ಷಕ್ಕೆ ಕೋಟ್ಯಾಂತರ ಭಕ್ತಾದಿಗಳು ಆಗಮನಿಸುತ್ತಾರೆ. ಇಷ್ಟೊಂದು ಜನರು ಇಲ್ಲಿದೆ ಬರಲು ಏನು ಕಾರಣ?. ಇಲ್ಲಿನ ವಿಶೇಷ ಹೊಯ್ಲು ಪದ್ದತೆ ಏನು?. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ. ಬಂದರು ನಗರಿ ಮಂಗಳೂರಿನಿಂದ 60 ಕಿ.ಮೀಟರ್ ದೂರದಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಭೂಕೈಲಾಸ ಎಂದೇ ಪ್ರಖ್ಯಾತವಾಗದೆ. ನೇತ್ರಾವತಿಯ ಮಡಿಲ ಘಟ್ಟಪ್ರದೇಶದ ಸುಂದರ ಮಡಲಲ್ಲಿ ಶಿವನೇ ನೆಲೆಸಿಹ ಪುಣ್ಯಕ್ಷೇತ್ರ. ಧರ್ಮಸ್ಥಳ, ಧರ್ಮದ ನೆಲೆವೀಡು. ಈ ದೇವಾಲಯದಲ್ಲಿ ಈಶ್ವರನ ಪೂಜಿಸುವ ಅರ್ಚಕರು ವೈಷ್ಣವರು, ದೇಗುಲದ ಧರ್ಮಾಕಾರಿಗಳು ಜೈನ ಧರ್ಮೀಯರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು. ಧರ್ಮಸ್ಥಳ ಕೇವಲ ಧಾರ್ಮಿಕ ಕ್ಷೇತ್ರವಷ್ಟೇ ಅಲ್ಲ. ಇದೊಂದು ನ್ಯಾಯಪೀಠ, ಸಾಹಿತ್ಯ ಸರಸ್ವತಿಯ ನೆಲೆವೀಡು, ಅನ್ನಪೂಣೆಯ (ನಿತ್ಯ ದಾಸೋಹದ) ಸಿರಿನಾಡು, ಒಟ್ಟಿನಲ್ಲಿದು ಧರ್ಮಕರ್ಮಗಳ ಸಂಗಮ ಸ್ಥಳ. ಈ ಕ್ಷೇತ್ರಕ್ಕೆ ಒಂದು ಇತಿಹಾಸವಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಇತಿಹಾಸವೇನು? ಈ ಕ್ಷೇತ್ರಕ್ಕೆ ಸುಮಾರು 800 ವರ್ಷಗಳ ಸುದೀರ್ಘ ಇತಿಹಾಸವಿದೆ. ಧರ್ಮಸ್ಥಳದ ಹಿಂದಿನ ಹೆಸರು ಕುಡುಮ. ಈ...