AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿವಾಹದ ಸಂದರ್ಭದಲ್ಲಿ ಜೀರಿಗೆ ಬೆಲ್ಲದ ಮಹತ್ವ ಏನು?: ವೈಜ್ಞಾನಿಕ , ಆಧ್ಯಾತ್ಮಿಕ ಹಿನ್ನೆಲೆಯ ಮಾಹಿತಿ ಇಲ್ಲಿದೆ

ವಿವಾಹದ ಸಂದರ್ಭದಲ್ಲಿ ಜೀರಿಗೆ ಬೆಲ್ಲದ ಮಹತ್ವ ಏನು?: ವೈಜ್ಞಾನಿಕ , ಆಧ್ಯಾತ್ಮಿಕ ಹಿನ್ನೆಲೆಯ ಮಾಹಿತಿ ಇಲ್ಲಿದೆ

ಪ್ರಸನ್ನ ಹೆಗಡೆ
|

Updated on: Mar 26, 2026 | 6:51 AM

Share

ಹಿಂದೂ ವಿವಾಹ ಸಂಪ್ರದಾಯದಲ್ಲಿ ವಧು ವರರ ತಲೆಯ ಮೇಲೆ ಜೀರಿಗೆ ಬೆಲ್ಲ ಇಡುವ ವಿಧಿಗೆ ಮಹತ್ವವಿದೆ. ಇದು ಸಹಸ್ರಾರ ಚಕ್ರವನ್ನು ಜಾಗೃತಗೊಳಿಸಿ ಮೆದುಳಿನಲ್ಲಿ ಧನಾತ್ಮಕ ಶಕ್ತಿಯನ್ನು ಪ್ರಚೋದಿಸುತ್ತದೆ. ಜವಾಬ್ದಾರಿ ಪ್ರಜ್ಞೆ ಮೂಡಿಸಿ, ಋಣಾತ್ಮಕ ಶಕ್ತಿಯನ್ನು ಹೋಗಲಾಡಿಸಿ ಅನ್ಯೋನ್ಯತೆ ಹೆಚ್ಚಿಸುತ್ತದೆ. ಈ ಆಚರಣೆ ಕೇವಲ ಸಾಂಪ್ರದಾಯಿಕವಲ್ಲದೆ ಮಾನಸಿಕ ಪರಿವರ್ತನೆಗೂ ಸಹಕಾರಿಯಾಗಿದೆ.

ಹಿಂದೂ ಸನಾತನ ಸಂಪ್ರದಾಯಗಳಲ್ಲಿ ಅನೇಕ ವಿಧಿ ವಿಧಾನಗಳಿವೆ. ಅವುಗಳ ಸಾಮಾಜಿಕ, ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಹಿನ್ನೆಲೆಯನ್ನು ಅರಿತಾಗ ಅವುಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತದೆ. ವಿವಾಹದ ಸಂದರ್ಭದಲ್ಲಿ ವಧು ವರರ ತಲೆಯ ಮೇಲೆ ಜೀರಿಗೆ ಬೆಲ್ಲ ಇಡುವ ವಿಧಿ ಅಂತಹ ಒಂದು ವಿಶಿಷ್ಟ ಆಚರಣೆಯಾಗಿದೆ. ಈ ಆಚರಣೆಯ ವೈಶಿಷ್ಟ್ಯವೆಂದರೆ, ತಲೆಯ ಮೇಲಿರುವ ಸಹಸ್ರಾರ ಚಕ್ರವನ್ನು ಜಾಗೃತಿಗೊಳಿಸುವುದು. ಮದುವೆಯ ನಂತರ ಜೀವನದಲ್ಲಿ ಜವಾಬ್ದಾರಿಗಳು ಹೆಚ್ಚಾಗುವುದರಿಂದ, ಈ ವಿಧಿಯು ನಾನು ಮದುವೆಯಾಗುತ್ತಿದ್ದೇನೆ, ನನಗೆ ಜವಾಬ್ದಾರಿಗಳು ಬರುತ್ತಿವೆ ಎಂಬ ಪ್ರಜ್ಞೆಯನ್ನು ಮೂಡಿಸುತ್ತದೆ. ಇದರಿಂದ ಸಂಪಾದನೆ, ಆದಾಯ, ಖರ್ಚುಗಳನ್ನು ನಿಭಾಯಿಸುವ ಅರಿವು ಮೂಡುತ್ತದೆ. ಮೆದುಳಿನಲ್ಲಿ ಧನಾತ್ಮಕ ಶಕ್ತಿಗಳು ಜಾಗೃತಗೊಳ್ಳುತ್ತವೆ.

ಜೀರಿಗೆಯು ದೇಹದಲ್ಲಿರುವ ಋಣಾತ್ಮಕ ಶಕ್ತಿಗಳನ್ನು ಹೊರಹಾಕುತ್ತದೆ ಎಂದು ನಂಬಲಾಗಿದೆ. ಬೆಲ್ಲವು ಉಷ್ಣತೆಯನ್ನು ಪ್ರಚೋದಿಸಿ ಶಕ್ತಿಯನ್ನು ನೀಡುತ್ತದೆ. ಆದರೆ ಇಲ್ಲಿ ಜೀರಿಗೆ ಬೆಲ್ಲವನ್ನು ಸೇವಿಸಲು ನೀಡುವುದಿಲ್ಲ, ಬದಲಿಗೆ ತಲೆಯ ಮೇಲೆ ಇಡಲಾಗುತ್ತದೆ. ಇದು ದಂಪತಿಗಳಲ್ಲಿ ಅನ್ಯೋನ್ಯತೆಯನ್ನು ಹೆಚ್ಚಿಸಿ, ಮನಸ್ಸಿನ ಭಾವನೆಗಳಿಗೆ ವಿಶೇಷ ಶಕ್ತಿಯನ್ನು ನೀಡುತ್ತದೆ. ಮಾನಸಿಕವಾಗಿ ಪರಿವರ್ತನೆ ಮಾಡುವಂತಹ ಈ ವಿಧಿಯು ಪ್ರಾಚೀನ ಸಂಪ್ರದಾಯಗಳ ಸಕಾರಾತ್ಮಕ ಪ್ರಭಾವಕ್ಕೆ ಸಾಕ್ಷಿ ಎಂಬುದು ಡಾ. ಬಸವರಾಜ ಗುರೂಜಿ ಅವರ ಅಭಿಪ್ರಾಯ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us