Rohit Sharma: ವಿಂಬಲ್ಡನ್ ಅಂಗಳದಲ್ಲಿ ರೋಹಿತ್ ಶರ್ಮಾ ಮಿಂಚಿಂಗ್

Wimbledon 2024: ವಿಂಬಲ್ಡನ್ ಟೆನಿಸ್ ಟೂರ್ನಿಯ ಸೆಮಿಫೈನಲ್ ಪಂದ್ಯದ ವೇಳೆ ಟಿ20 ವಿಶ್ವಕಪ್ ವಿಜೇತ ತಂಡದ ನಾಯಕ ರೋಹಿತ್ ಶರ್ಮಾ ಕಾಣಿಸಿಕೊಂಡಿದ್ದಾರೆ. ಲಂಡನ್​ನಲ್ಲಿ ನಡೆದ ಕಾರ್ಲೋಸ್ ಅಲ್ಕರಾಝ್ ಹಾಗೂ ಡೇನಿಯಲ್ ಮೆಡ್ವೆಡೆವ್ ನಡುವಣ ಪಂದ್ಯ ವೀಕ್ಷಿಸಲು ಆಗಮಿಸಿದ ಹಿಟ್​ಮ್ಯಾನ್ ಅವರನ್ನು ವಿಂಬಲ್ಡನ್ ಆಯೋಜಕರು ಭವ್ಯವಾಗಿ ಸ್ವಾಗತಿಸಿದ್ದರು.

Rohit Sharma: ವಿಂಬಲ್ಡನ್ ಅಂಗಳದಲ್ಲಿ ರೋಹಿತ್ ಶರ್ಮಾ ಮಿಂಚಿಂಗ್
|

Updated on:Jul 13, 2024 | 10:21 AM

ಲಂಡನ್​ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಟೆನಿಸ್ ಟೂರ್ನಿ ವಿಂಬಲ್ಡನ್ ಪಂದ್ಯದ ವೇಳೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕಾಣಿಸಿಕೊಂಡಿದ್ದಾರೆ. ಸೆಮಿಫೈನಲ್​ ಪಂದ್ಯ ವೀಕ್ಷಿಸಲು ಸೆಂಟ್ರಲ್ ಕೋರ್ಟ್​ಗೆ ಆಗಮಿಸಿದ ರೋಹಿತ್ ಶರ್ಮಾ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು. ಇದೇ ವೇಳೆ ಮಾತನಾಡಿದ ರೋಹಿತ್ ಶರ್ಮಾ, ನಾನು ಇದುವರೆಗೆ ವಿಂಬಲ್ಡನ್ ವೀಕ್ಷಿಸಲು ಬಂದಿರಲಿಲ್ಲ. ಇದೇ ಮೊದಲ ಬಾರಿಗೆ ಈ ವೈಬ್ ಅನುಭವಿಸಲು ಉತ್ಸುಕನಾಗಿದ್ದೇನೆ ಎಂದರು. ಅಲ್ಲದೆ ಕಾರ್ಲೋಸ್ ಅಲ್ಕರಾಝ್ ಮತ್ತು ಡೇನಿಯಲ್ ಮೆಡ್ವೆಡೆವ್ ನಡುವಣ ಮೊದಲ ಸೆಮಿಫೈನಲ್ ಪಂದ್ಯವನ್ನು ವೀಕ್ಷಿಸಿದರು.

ಇದಕ್ಕೂ ಮುನ್ನ ವಿಂಬಲ್ಡನ್​ನ ಕ್ವಾರ್ಟರ್ ಫೈನಲ್ ಪಂದ್ಯದ ವೇಳೆ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ಬೆನ್ ಸ್ಟೋಕ್ಸ್, ಪ್ಯಾಟ್ ಕಮ್ಮಿನ್ಸ್, ಜೋಸ್ ಬಟ್ಲರ್ ಮತ್ತು ಜೋ ರೂಟ್ ಕಾಣಿಸಿಕೊಂಡಿದ್ದರು. ಇದೀಗ ರೋಹಿತ್ ಶರ್ಮಾ ಕೂಡ ವಿಂಬಲ್ಡನ್ ಅಂಗಳದಲ್ಲಿ ಕಾಣಿಸಿಕೊಳ್ಳುವ ಮೂಲಕ ಮಿಂಚಿದ್ದಾರೆ.

ಸದ್ಯ ಟೀಮ್ ಇಂಡಿಯಾದಿಂದ ಹೊರಗುಳಿದಿರುವ ರೋಹಿತ್ ಶರ್ಮಾ ಶ್ರೀಲಂಕಾ ವಿರುದ್ಧದ ಸರಣಿಗೂ ಅಲಭ್ಯರಾಗಲಿದ್ದಾರೆ ಎಂದು ತಿಳಿದು ಬಂದಿದೆ. ಲಂಕಾ ವಿರುದ್ಧದ ಟಿ20 ಮತ್ತು ಏಕದಿನ ಸರಣಿಯಿಂದ ವಿಶ್ರಾಂತಿ ಬಯಸಿರುವ ಹಿಟ್​ಮ್ಯಾನ್ ಇದೀಗ ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ. ಇದೇ ವೇಳೆ ವಿಂಬಲ್ಡನ್ ಟೂರ್ನಿ ವೀಕ್ಷಿಸಲು ತೆರಳಿದ್ದರು.

ವಿಂಬಲ್ಡನ್​ನ ಮೊದಲ ಸೆಮಿಫೈನಲ್​ನಲ್ಲಿ ಡೇನಿಯಲ್ ಮೆಡ್ವೆಡೆವ್ ವಿರುದ್ಧ ಕಾರ್ಲೋಸ್ ಅಲ್ಕರಾಝ್ ಗೆಲುವು ದಾಖಲಿಸಿ ಫೈನಲ್​ಗೆ ಪ್ರವೇಶಿಸಿದ್ದಾರೆ. ಹಾಗೆಯೇ ಎರಡನೇ ಸೆಮಿಫೈನಲ್​ನಲ್ಲಿ ಲೊರೆಂಜೊ ಮುಸೆಟ್ಟಿ ಅವರನ್ನು ನೇರ ಸೆಟ್​ಗಳಿಂದ ಮಣಿಸಿರುವ ನೊವಾಕ್ ಜೊಕೊವಿಚ್ ಅಂತಿಮ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಅದರಂತೆ ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ನೊವಾಕ್ ಜೊಕೊವಿಚ್ ಹಾಗೂ ಕಾರ್ಲೋಸ್ ಅಲ್ಕರಾಝ್ ಮುಖಾಮುಖಿಯಾಗಲಿದ್ದಾರೆ.

Published On - 10:17 am, Sat, 13 July 24

Follow us
ವಿಧಾನಸೌಧಕ್ಕೆ ಬಂದ ಪವನ್ ಕಲ್ಯಾಣ್ ನೋಡಲು ಮುಗಿಬಿದ್ದ ಸರ್ಕಾರಿ ನೌಕರರು
ವಿಧಾನಸೌಧಕ್ಕೆ ಬಂದ ಪವನ್ ಕಲ್ಯಾಣ್ ನೋಡಲು ಮುಗಿಬಿದ್ದ ಸರ್ಕಾರಿ ನೌಕರರು
ಸಾಕು ನಾಯಿ ಮರಿ ಮೇಲೆ ಕ್ಯಾಬ್ ಚಲಾಯಿಸಿ ವಿಕೃತಿ, ದೃಶ್ಯ ಸಿಸಿಟಿವಿಯಲ್ಲಿಸೆರೆ
ಸಾಕು ನಾಯಿ ಮರಿ ಮೇಲೆ ಕ್ಯಾಬ್ ಚಲಾಯಿಸಿ ವಿಕೃತಿ, ದೃಶ್ಯ ಸಿಸಿಟಿವಿಯಲ್ಲಿಸೆರೆ
ಎಂಜಲಿನಿಂದ ಗ್ರಾಹಕನ ಮುಖಕ್ಕೆ ಮಸಾಜ್ ಮಾಡಿದ್ದ ಕ್ಷೌರಿಕನ ಸಲೂನ್ ನೆಲಸಮ
ಎಂಜಲಿನಿಂದ ಗ್ರಾಹಕನ ಮುಖಕ್ಕೆ ಮಸಾಜ್ ಮಾಡಿದ್ದ ಕ್ಷೌರಿಕನ ಸಲೂನ್ ನೆಲಸಮ
ಬಿಜೆಪಿ-ಜೆಡಿಎಸ್​ 6ನೇ ದಿನದ ಪಾದಯಾತ್ರೆ ಶುರು
ಬಿಜೆಪಿ-ಜೆಡಿಎಸ್​ 6ನೇ ದಿನದ ಪಾದಯಾತ್ರೆ ಶುರು
ಸಾವು ಹೀಗೂ ಬರಬಹುದು, 5ನೇ ಮಹಡಿಯಿಂದ ನಾಯಿ ಬಿದ್ದು 3 ವರ್ಷದ ಬಾಲಕಿ ಸಾವು
ಸಾವು ಹೀಗೂ ಬರಬಹುದು, 5ನೇ ಮಹಡಿಯಿಂದ ನಾಯಿ ಬಿದ್ದು 3 ವರ್ಷದ ಬಾಲಕಿ ಸಾವು
ಮಂಡ್ಯ: ಪ್ರೀತಂಗೌಡ ಭಾವಚಿತ್ರವಿದ್ದ ಫ್ಲೆಕ್ಸ್​ಗಳಿಗೆ ಬೆಂಕಿ
ಮಂಡ್ಯ: ಪ್ರೀತಂಗೌಡ ಭಾವಚಿತ್ರವಿದ್ದ ಫ್ಲೆಕ್ಸ್​ಗಳಿಗೆ ಬೆಂಕಿ
ಪೊಲೀಸ್​ ಠಾಣೆಯಲ್ಲಿ ಮಹಿಳೆಗೆ ಮನಬಂದಂತೆ ಥಳಿಸಿದ ಬಿಜೆಪಿ ಮುಖಂಡ
ಪೊಲೀಸ್​ ಠಾಣೆಯಲ್ಲಿ ಮಹಿಳೆಗೆ ಮನಬಂದಂತೆ ಥಳಿಸಿದ ಬಿಜೆಪಿ ಮುಖಂಡ
ಹೊಸ ಮನೆ ಗೃಹಪ್ರವೇಶದ ವೇಳೆ ಹಾಲು ಏಕೆ ಉಕ್ಕಿಸುತ್ತಾರೆ?
ಹೊಸ ಮನೆ ಗೃಹಪ್ರವೇಶದ ವೇಳೆ ಹಾಲು ಏಕೆ ಉಕ್ಕಿಸುತ್ತಾರೆ?
Nithya Bhavishya: ಶ್ರಾವಣ ಮಾಸ ಗುರುವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಶ್ರಾವಣ ಮಾಸ ಗುರುವಾರದ ರಾಶಿಭವಿಷ್ಯ ತಿಳಿಯಿರಿ
ಎಫ್​ಎಸ್​ಎಲ್ ವರದಿ: ಕೊಲೆ ಆರೋಪದಲ್ಲಿ ದರ್ಶನ್​ ವಿರುದ್ಧ ಇದು ಪಕ್ಕಾ ಸಾಕ್ಷಿ
ಎಫ್​ಎಸ್​ಎಲ್ ವರದಿ: ಕೊಲೆ ಆರೋಪದಲ್ಲಿ ದರ್ಶನ್​ ವಿರುದ್ಧ ಇದು ಪಕ್ಕಾ ಸಾಕ್ಷಿ