ಪಾಕಿಸ್ತಾನಕ್ಕೆ ತನ್ನ ದೇಶದ ಹೆಸರನ್ನೂ ಬರೆಯೋಕಾಗದ ದುಃಸ್ಥಿತಿ ಬಂತಾ!

ಪಾಕಿಸ್ತಾನ ಕ್ರಿಕೆಟಿಗರು ಆಗಾಗ ಎಡವಟ್ಟುಗಳನ್ನ ಮಾಡಿಕೊಂಡು ಟ್ರೋಲ್​ಗೆ ಆಹಾರವಾಗೋದು ಕಾಮನ್ ಬಿಡಿ. ಆದ್ರೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿಯೇ ಎಡವಟ್ಟು ಮಾಡಿಕೊಂಡು ನಗೆಪಾಟಲಿಗೀಡಾಗಿದೆ. ಯಾವ ಮಟ್ಟಿಗೆ ಅಂದ್ರೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ತನ್ನ ದೇಶದ ಹೆಸರನ್ನು ಸರಿಯಾಗಿ ಬರೆಯೋಕು ಬರೋದಿಲ್ಲ ಅಂತಾ ಟ್ರೋಲ್​ಗೆ ಒಳಗಾಗ್ತಿದೆ. ಜುಲೈ 30 ರಿಂದ ಪಾಕಿಸ್ತಾನ ತಂಡ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್​​ಗೆ ಪ್ರಯಾಣ ಬೆಳೆಸಿದೆ. ಹಾಗೇ ಇಂಗ್ಲೆಂಡ್​ನಲ್ಲಿ ಪಾಕ್ ಕ್ರಿಕೆಟಿಗರು ಮೊದಲು 14 ದಿನಗಳ ಕ್ವಾರಂಟೈನ್​ನಲ್ಲಿ ಇರಬೇಕಾಗುತ್ತೆ. ಈ ವಿಚಾರವನ್ನ ಹೇಳೋ ಭರದಲ್ಲಿ ಪಾಕಿಸ್ತಾನ […]

ಪಾಕಿಸ್ತಾನಕ್ಕೆ ತನ್ನ ದೇಶದ ಹೆಸರನ್ನೂ ಬರೆಯೋಕಾಗದ ದುಃಸ್ಥಿತಿ ಬಂತಾ!
ಸಾಧು ಶ್ರೀನಾಥ್​

Updated on: Jun 30, 2020 | 5:12 PM

ಪಾಕಿಸ್ತಾನ ಕ್ರಿಕೆಟಿಗರು ಆಗಾಗ ಎಡವಟ್ಟುಗಳನ್ನ ಮಾಡಿಕೊಂಡು ಟ್ರೋಲ್​ಗೆ ಆಹಾರವಾಗೋದು ಕಾಮನ್ ಬಿಡಿ. ಆದ್ರೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿಯೇ ಎಡವಟ್ಟು ಮಾಡಿಕೊಂಡು ನಗೆಪಾಟಲಿಗೀಡಾಗಿದೆ. ಯಾವ ಮಟ್ಟಿಗೆ ಅಂದ್ರೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ತನ್ನ ದೇಶದ ಹೆಸರನ್ನು ಸರಿಯಾಗಿ ಬರೆಯೋಕು ಬರೋದಿಲ್ಲ ಅಂತಾ ಟ್ರೋಲ್​ಗೆ ಒಳಗಾಗ್ತಿದೆ.

ಜುಲೈ 30 ರಿಂದ ಪಾಕಿಸ್ತಾನ ತಂಡ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್​​ಗೆ ಪ್ರಯಾಣ ಬೆಳೆಸಿದೆ. ಹಾಗೇ ಇಂಗ್ಲೆಂಡ್​ನಲ್ಲಿ ಪಾಕ್ ಕ್ರಿಕೆಟಿಗರು ಮೊದಲು 14 ದಿನಗಳ ಕ್ವಾರಂಟೈನ್​ನಲ್ಲಿ ಇರಬೇಕಾಗುತ್ತೆ. ಈ ವಿಚಾರವನ್ನ ಹೇಳೋ ಭರದಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಎಡವಟ್ಟು ಮಾಡಿಕೊಂಡಿದೆ.

ಪಾಕಿಸ್ತಾನ ತಂಡ ಇಂಗ್ಲೆಂಡ್​ಗೆ ತೆರಳೋ ಫೋಟೋವನ್ನ ಟ್ವಿಟರ್​ನಲ್ಲಿ ಪೋಸ್ಟ್ ಮಾಡಿ, ಪಾಕಿಸ್ತಾನ ತಂಡ ಇಂಗ್ಲೆಂಡ್​ಗೆ ತೆರಳುತ್ತಿದೆ ಅನ್ನಬೇಕಿತ್ತು. ಆದ್ರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಟ್ವಿಟರ್​ನಲ್ಲಿ ಪಾಕಿಸ್ತಾನ (Pakistan) ಅನ್ನೋ ಬದಲು, ಸ್ಪೆಲ್ಲಿಂಗ್ ಮಿಸ್ಟೇಕ್ ಮಾಡಿದೆ. ಪಾಕಿಯಾಟನ್ (Pakiatan) ತಂಡ ಇಂಗ್ಲೆಂಡ್​ಗೆ ತೆರಳುತ್ತಿದೆ ಅಂತಾ ಬರೆದುಕೊಂಡಿದೆ.

ಪಿಸಿಬಿ ಹೀಗೆ ಟ್ವೀಟ್ ಮಾಡುತ್ತಿದ್ದಂತೆ, ನೆಟ್ಟಿಗರು ಸರಿಯಾಗೇ ಟ್ರೋಲ್ ಮಾಡಿದ್ದಾರೆ. ನಿಮಗೆ ನಿಮ್ಮ ದೇಶದ ಹೆಸರು ಬರೆಯೋಕಾಗದಷ್ಟು ದುಸ್ಥಿತಿ ಬಂತಾ? ಅಂತಾ ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದಾರೆ. ತಮಾಷೆ ವಿಷ್ಯ ಅಂದ್ರೆ, ಪಿಸಿಬಿಗೆ ಈ ಫೋಸ್ಟ್ ಮಾಡಿದ ಒಂದು ಗಂಟೆ ಬಳಿಕ ತನ್ನ ತಪ್ಪಿನ ಅರಿವಾಗಿದೆ. ಇದಕ್ಕೂ ನೆಟ್ಟಿಗರು ಪಿಸಿಬಿ ಕಾಲೆಳೆದಿದ್ದಾರೆ. ನಿಮ್ಮ ತಪ್ಪು ಗೊತ್ತಾಗೋಕೆ ಒಂದು ಗಂಟೆ ಬೇಕಾಯ್ತಾ ಅಂತಾ ಕಾಲೆಳೆದಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us