AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೆಸ್ಟ್​ ಕ್ರಿಕೆಟ್ 4 ದಿನಕ್ಕೇ ಸೀಮಿತ, ಐಸಿಸಿ ನಿರ್ಧಾರಕ್ಕೆ ‘ಕ್ರಿಕೆಟ್​ ಗಾಡ್​’ ವಿರೋಧ

ಟೆಸ್ಟ್ ಕ್ರಿಕೆಟ್​ನಲ್ಲಿ ರೋಚಕತೆ ಸೃಷ್ಟಿಸಲು 5 ದಿನದ ಬದಲು ನಾಲ್ಕು ದಿನಗಳಿಗೆ ಕಡಿತ ಮಾಡಲು ಮುಂದಾಗಿರೋ ಐಸಿಸಿ ನಿರ್ಧಾರಕ್ಕೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ವಿರೋಧ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್​ನ ಅತಿ ಶುದ್ಧರೂಪ ಟೆಸ್ಟ್ ಕ್ರಿಕೆಟ್. ಅದನ್ನ ಕುಲಗೆಡಿಸಬೇಡಿ. ಏಕದಿನ, ಟಿ20, ಟಿ10 ಕ್ರಿಕೆಟ್ ಎಲ್ಲವನ್ನೂ ಜಾರಿಗೆ ತಂದಿದ್ದೀರಾ. ಆದರೆ ಟೆಸ್ಟ್ ಕ್ರಿಕೆಟ್​ನಲ್ಲಿ ಯಾವುದೇ ಬದಲಾವಣೆ ಮಾಡಬೇಡಿ. ಅದನ್ನು ಹಾಗೆಯೇ ಬಿಡಿ ಎಂದು ಸಚಿನ್ ವಿರೋಧ ವ್ಯಕ್ತಪಡಿಸಿದ್ದಾರೆ. ಅಭಿಮಾನಕ್ಕೆ ಕೊಹ್ಲಿ ಫಿದಾ ಗುವಾಹಟಿ ಟಿ-ಟ್ವೆಂಟಿ ಪಂದ್ಯಕ್ಕೂ ಮುನ್ನ ವಿರಾಟ್ […]

ಟೆಸ್ಟ್​ ಕ್ರಿಕೆಟ್ 4 ದಿನಕ್ಕೇ ಸೀಮಿತ, ಐಸಿಸಿ ನಿರ್ಧಾರಕ್ಕೆ ‘ಕ್ರಿಕೆಟ್​ ಗಾಡ್​’ ವಿರೋಧ
ಸಾಧು ಶ್ರೀನಾಥ್​
|

Updated on:Jan 06, 2020 | 7:00 PM

Share

ಟೆಸ್ಟ್ ಕ್ರಿಕೆಟ್​ನಲ್ಲಿ ರೋಚಕತೆ ಸೃಷ್ಟಿಸಲು 5 ದಿನದ ಬದಲು ನಾಲ್ಕು ದಿನಗಳಿಗೆ ಕಡಿತ ಮಾಡಲು ಮುಂದಾಗಿರೋ ಐಸಿಸಿ ನಿರ್ಧಾರಕ್ಕೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ವಿರೋಧ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್​ನ ಅತಿ ಶುದ್ಧರೂಪ ಟೆಸ್ಟ್ ಕ್ರಿಕೆಟ್. ಅದನ್ನ ಕುಲಗೆಡಿಸಬೇಡಿ. ಏಕದಿನ, ಟಿ20, ಟಿ10 ಕ್ರಿಕೆಟ್ ಎಲ್ಲವನ್ನೂ ಜಾರಿಗೆ ತಂದಿದ್ದೀರಾ. ಆದರೆ ಟೆಸ್ಟ್ ಕ್ರಿಕೆಟ್​ನಲ್ಲಿ ಯಾವುದೇ ಬದಲಾವಣೆ ಮಾಡಬೇಡಿ. ಅದನ್ನು ಹಾಗೆಯೇ ಬಿಡಿ ಎಂದು ಸಚಿನ್ ವಿರೋಧ ವ್ಯಕ್ತಪಡಿಸಿದ್ದಾರೆ.

ಅಭಿಮಾನಕ್ಕೆ ಕೊಹ್ಲಿ ಫಿದಾ ಗುವಾಹಟಿ ಟಿ-ಟ್ವೆಂಟಿ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿಗೆ ಅಭಿಮಾನಿಯೊಬ್ಬ, ವಿಶೇಷ ಕಲಾಕೃತಿಯ ಗಿಫ್ಟ್​ನ್ನ ನೀಡಿದ್ದಾನೆ. ಕೊಹ್ಲಿ ಅಪ್ಪಟ ಅಭಿಮಾನಿ ಆಗಿರೋ ರಾಹುಲ್ ಪಾರೆಕ್, ಹಳೆಯ ಮೊಬೈಲ್ ಫೋನ್​ಗಳ ಬಿಡಿಭಾಗಗಳನ್ನ ಬಳಕೆ ಮಾಡಿ, ಕೊಹ್ಲಿಯ ಕಲಾಕೃತಿಯನ್ನ ನಿರ್ಮಿಸಿದ್ದಾನೆ. ಅಭಿಮಾನಿ ಕುಂಚದಲ್ಲಿ ಅರಳಿದ ಕಲಾಕೃತಿ ಕಂಡು ನಿಬ್ಬೆರಗಾದ ಕೊಹ್ಲಿ, ತಮ್ಮ ಹಷ್ತಾಕ್ಷರದೊಂದಿಗೆ ಫ್ಯಾನ್​ಗೆ ಶುಭಕೋರಿದ್ರು. ಈ ವಿಡಿಯೋವನ್ನ ಬಿಸಿಸಿಐ ಟ್ವೀಟ್ ಮಾಡಿದ್ದು, ಸಖತ್ ವೈರಲ್ ಆಗ್ತಿದೆ.

ಆಸಿಸ್ ಕ್ಲೀನ್ ಸ್ವೀಪ್ ನ್ಯೂಜಿಲೆಂಡ್ ವಿರುದ್ಧದ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಆಸಿಸ್ 279ರನ್​ಗಳ ಭರ್ಜರಿ ಗೆಲುವು ಸಾಧಿಸಿದೆ. 416ರನ್​ಗಳ ಬಿಗ್ ಟಾರ್ಗೆಟ್ ಬೆನ್ನತ್ತಿದ್ದ ನ್ಯೂಜಿಲೆಂಡ್, 136ರನ್​ಗೆ ಆಲೌಟ್ ಆಯ್ತು. ಎರಡನೇ ಇನ್ನಿಂಗ್ಸ್​ನಲ್ಲಿ ಡೇವಿಡ್ ವಾರ್ನರ್ ಶತಕ ಬಾರಿಸಿದ್ರೆ, ಮಾರ್ನಸ್ ಲಾಬುಚಾನ್ ಅರ್ಧಶತಕ ಸಿಡಿಸಿದ್ರು. ಕಿವೀಸ್ ಪರ ಗ್ರ್ಯಾಂಡ್​ಹೋಮ್ 52ರನ್ ಗಳಿಸಿದ್ರೆ, ನಾಥನ್ ಲಿಯಾನ್ 5ವಿಕೆಟ್ ಪಡೆದ್ರು. ಇದ್ರೊಂದಿಗೆ ಆಸಿಸ್ 3-0ಅಂತರದಿಂದ ಸರಣಿ ಕ್ಲೀನ್ ಸ್ವೀಪ್ ಮಾಡ್ತು.

ಪುತ್ರಿಯೊಂದಿಗೆ ಧೋನಿ ಎಂಜಾಯ್ ಟೀಂ ಇಂಡಿಯಾದಿಂದ ದೂರವಾಗಿರೋ ಮಹೇಂದ್ರ ಸಿಂಗ್ ಧೋನಿ, ಇದೀಗ ಮಗಳು ಝೀವಾಳೊಂದಿಗೆ ಸಖತ್ ಎಂಜಯ್ ಮಾಡ್ತಿದ್ದಾರೆ. ಇತ್ತೀಚೆಗೆ ಕುಟುಂಬದೊಂದಿಗೆ ಡೆಹ್ರಾಡೂನ್ ಪ್ರವಾಸವನ್ನ ಕೈಗೊಂಡಿದ್ರು. ಈ ವೇಳೆ ಮಾಹಿ ಪುತ್ರಿಯೊಂದಿಗೆ ಹಿಮಭರಿತ ಬೆಟ್ಟಗಳಲ್ಲಿ ಆಟವಾಡಿ, ಎಂಜಾಯ್ ಮಾಡಿದ್ರು. ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿವೆ.

https://www.instagram.com/p/B68RZREnvS6/?utm_source=ig_web_copy_link

Published On - 6:39 pm, Mon, 6 January 20

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ