ಸೋತವರ ಕೈಹಿಡಿದ ಟಾಟಾ! ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಂಚಿತರಿಗೆ ಕಾರುಗಳ ಉಡುಗೂರೆ; ಟಾಟಾ ಮೋಟಾರ್ಸ್ ಘೋಷಣೆ

ನಮ್ಮ ಅನೇಕ ಆಟಗಾರರು ವೇದಿಕೆಯನ್ನು ತಲುಪಲು ಹತ್ತಿರ ಬಂದರು ಆದರೆ ಪದಕ ಗೆಲ್ಲಲಾಗಲಿಲ್ಲ. ಅವರು ಪದಕ ಕಳೆದುಕೊಂಡಿರಬಹುದು. ಆದರೆ ಅವರು ತಮ್ಮ ಸಮರ್ಪಣೆಯಿಂದ ಲಕ್ಷಾಂತರ ಭಾರತೀಯರ ಹೃದಯ ಗೆದ್ದಿದ್ದಾರೆ.

ಸೋತವರ ಕೈಹಿಡಿದ ಟಾಟಾ! ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಂಚಿತರಿಗೆ ಕಾರುಗಳ ಉಡುಗೂರೆ; ಟಾಟಾ ಮೋಟಾರ್ಸ್ ಘೋಷಣೆ
ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಂಚಿತರು
Edited By:

Updated on: Aug 13, 2021 | 4:43 PM

ವಿಜೇತರು ದೊಡ್ಡ ಬಹುಮಾನಗಳನ್ನು ಪಡೆಯುವುದನ್ನು ನಾವು ಇಷ್ಟು ದಿನ ನೋಡಿದ್ದೇವೆ. ಆದರೆ ಈಗ ಲೆಕ್ಕಾಚಾರ ಬದಲಾಗಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಕಳೆದುಕೊಂಡ ಭಾರತೀಯ ಕ್ರೀಡಾಪಟುಗಳಿಗೆ ಆಲ್ಟ್ರೋಜ್ ಕಾರುಗಳನ್ನು ನೀಡುವುದಾಗಿ ಭಾರತದ ಅತಿದೊಡ್ಡ ಕಾರು ತಯಾರಕ ಟಾಟಾ ಮೋಟಾರ್ಸ್ ಘೋಷಿಸಿದೆ. ಜೊತೆಗೆ ಆಟಗಾರರ ಹೋರಾಟ ನಮ್ಮ ಹೃದಯ ಮತ್ತು ಮನಸ್ಸನ್ನು ಗೆದ್ದಿದೆ ಎಂದು ಟಾಟಾ ಮೋಟಾರ್ಸ್ ಘೋಷಿಸಿದೆ. ಟೋಕಿಯೋ ಕ್ರೀಡಾಕೂಟದಲ್ಲಿ ಭಾರತದ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್, ಕುಸ್ತಿಪಟು ದೀಪಕ್ ಪೂನಿಯಾ ಮತ್ತು ಮಹಿಳಾ ಹಾಕಿ ತಂಡ ನಾಲ್ಕನೇ ಸ್ಥಾನ ಪಡೆದರು. ಈ ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ ದೇಶದ ಅನೇಕ ಯುವ ಕ್ರೀಡಾಪಟುಗಳಿಗೆ ಕ್ರೀಡೆಯನ್ನು ತೆಗೆದುಕೊಳ್ಳಲು ಪ್ರೇರೇಪಿಸಿದರು.

ಲಕ್ಷಾಂತರ ಭಾರತೀಯರ ಹೃದಯ ಗೆದ್ದಿದ್ದಾರೆ
ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ ಬ್ಯುಸಿನೆಸ್ ನ ಅಧ್ಯಕ್ಷ ಶೈಲೇಶ್ ಚಂದ್ರ ಮಾತನಾಡಿ, ವೇದಿಕೆಯಲ್ಲಿರುವ ಆಟಗಾರರಿಗಿಂತ ಭಾರತಕ್ಕೆ ಒಲಿಂಪಿಕ್ ಪದಕಗಳು ಮುಖ್ಯ. ನಮ್ಮ ಅನೇಕ ಆಟಗಾರರು ವೇದಿಕೆಯನ್ನು ತಲುಪಲು ಹತ್ತಿರ ಬಂದರು ಆದರೆ ಪದಕ ಗೆಲ್ಲಲಾಗಲಿಲ್ಲ. ಅವರು ಪದಕ ಕಳೆದುಕೊಂಡಿರಬಹುದು. ಆದರೆ ಅವರು ತಮ್ಮ ಸಮರ್ಪಣೆಯಿಂದ ಲಕ್ಷಾಂತರ ಭಾರತೀಯರ ಹೃದಯ ಗೆದ್ದಿದ್ದಾರೆ. ಅವರು ಭಾರತದ ಉದಯೋನ್ಮುಖ ಆಟಗಾರರಿಗೆ ನಿಜವಾದ ಸ್ಫೂರ್ತಿ ಎಂದಿದ್ದಾರೆ.

ಏತನ್ಮಧ್ಯೆ, ಲಕ್ನೋ ಮೂಲದ ರಿಯಲ್ ಎಸ್ಟೇಟ್ ಕಂಪನಿಯು ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರಿಗೆ 5 ಲಕ್ಷ ಬಹುಮಾನವನ್ನು ಘೋಷಿಸಿದೆ. ಇದಲ್ಲದೇ, ‘ವಿ ಪ್ಲಸ್ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್’ ಒಲಿಂಪಿಕ್ ಚಾಂಪಿಯನ್ಸ್‌ಗಾಗಿ ಇತರ ಸೌಲಭ್ಯಗಳನ್ನು ಒದಗಿಸುವುದಾಗಿ ಹೇಳಿಕೊಂಡಿದೆ.