ಮದುವೆಯಾದ ಕೆಲವೇ ನಿಮಿಷಗಳಲ್ಲಿ ವಿಡಿಯೋ KYC ಮೂಲಕ ಮದುವೆ ನೋಂದಣಿ ಮಾಡಿಕೊಂಡ ಕೇರಳದ ದಂಪತಿ

ಮದುವೆ ನೋಂದಣಿ ಪ್ರಕ್ರಿಯೆ ಈಗ ಸರಳವಾಗಿದೆ. ಕೇರಳದಲ್ಲಿ ವಿಡಿಯೋ KYC ಮೂಲಕ ಕೆಲವೇ ನಿಮಿಷಗಳಲ್ಲಿ ಮದುವೆ ನೋಂದಾಣಿ ಮಾಡಿಕೊಂಡಿದ್ದಾರೆ. ಕೇರಳದ ದಂಪತಿ ಲಾವಣ್ಯ ಮತ್ತು ವಿಷ್ಣು ಈ ಡಿಜಿಟಲ್ ವ್ಯವಸ್ಥೆಯನ್ನು ಬಳಸಿಕೊಂಡಿದ್ದಾರೆ. ಈ ಪಾರದರ್ಶಕ ಮತ್ತು ನಾಗರಿಕ ಸ್ನೇಹಿ ತಂತ್ರಜ್ಞಾನದಿಂದ ಸ್ಥಳದಲ್ಲೇ ಡಿಜಿಟಲ್ ಪ್ರಮಾಣಪತ್ರ ಪಡೆಯಬಹುದು, ಕೇರಳ ದೇಶಕ್ಕೆ ಮಾದರಿಯಾಗಿದೆ.

ಮದುವೆಯಾದ ಕೆಲವೇ ನಿಮಿಷಗಳಲ್ಲಿ ವಿಡಿಯೋ KYC ಮೂಲಕ ಮದುವೆ ನೋಂದಣಿ ಮಾಡಿಕೊಂಡ ಕೇರಳದ ದಂಪತಿ
ವೀಡಿಯೋ

Updated on: Oct 28, 2025 | 2:07 PM

ಕೇರಳ, ಅ28: ಮದುವೆಯ ನಂತರ ಭಾರತದ ಕಾನೂನಿನ ಪ್ರಕಾರ, ಮದುವೆ ನೋಂದಣಿಯನ್ನು ಮಾಡಿಕೊಳ್ಳಲೇಬೇಕು. ಆದರೆ ನೋಂದಣಿ ಮಾಡಿಕೊಳ್ಳಲು ಮೂರು-ನಾಲ್ಕು ದಿನಗಳ ಕಾಲ ಕಾಯಬೇಕಾದ ಸಂದರ್ಭದಲ್ಲಿ ಡಿಜಿಟಲ್ ನೋಂದಣಿ ಬಂದಿದೆ. ಹೌದು ಇದೀಗ ಕೇರಳ ಸರ್ಕಾರ ಮದುವೆ ನೋಂದಣಿಯನ್ನು (Marriage registration Kerala) ಸರಳೀಕರಣಗೊಳಿಸಿದೆ. ಈ ವಿಚಾರದಲ್ಲಿ ದೇಶಕ್ಕೆ ಕೇರಳ ಮಾದರಿಯಾಗಿದೆ. ಮದುವೆಯಾದ ಕೆಲವೇ ನಿಮಿಷಗಳಲ್ಲಿ ಮದುವೆ ನೋಂದಣಿ ಮಾಡಿಕೊಳ್ಳಬಹುದು. ಈ ವ್ಯವಸ್ಥೆಯ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಇದೀಗ ಈ ವ್ಯವಸ್ಥೆಯನ್ನು ಕೇರಳದ ನವ ದಂಪತಿಗಳು ಸರಿಯಾಗಿ ಬಳಸಿಕೊಂಡಿದ್ದಾರೆ. ಕೇರಳದ ಕವಸ್ಸೆರಿ ಪಂಚಾಯತ್‌ ವ್ಯಾಪ್ತಿಯಲ್ಲಿ ಬರುವ ಈ ದಂಪತಿಗಳು ವೀಡಿಯೊ KYC ಮೂಲಕ ತಮ್ಮ ಮದುವೆಯನ್ನು ನೋಂದಾಯಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ಭಾರೀ ವೈರಲ್​​ ಆಗಿದೆ. ದಂಪತಿಗಳು ಡಿಜಿಟಲ್​​ ಯುಗಕ್ಕೆ ತೆರೆದುಕೊಂಡಿದ್ದಾರೆ ಎಂದು ಸೋಶಿಯಲ್​​ ಮೀಡಿಯಾ ಬಳಕೆದಾರರು ಹೇಳಿದ್ದಾರೆ.

ಈ ವ್ಯವಸ್ಥೆ ಬರುವ ಮೊದಲು ಮದುವೆ ನೋಂದಣಿ ಮಾಡಿಕೊಳ್ಳಲು ದಿನಪೂರ್ತಿ ಸರ್ಕಾರಿ ಕಚೇರಿ ಮುಂದೆ ಕಾಯಬೇಕಿತ್ತು. ಅದ್ರೂ ಅಧಿಕಾರಿಗಳು ತಾಂತ್ರಿಕ ತೊಂದರೆ ಇದೆ ಎಂದು ಕಾರಣ ಹೇಳಿ, ವಾರಗಟ್ಟಲೇ ಕಾಯಿಸುತ್ತಾರೆ. ಆದರೆ ಇದೀಗ ಡಿಜಿಟಲ್​​​ ನೋಂದಣಿಯಿಂದ ಕೆಲವೇ ನಿಮಿಷಗಳಲ್ಲಿ ಮದುವೆ ನೋಂದಣಿ ಮಾಡಿಕೊಳ್ಳಬಹುದು. ಕೇರಳದ ಲಾವಣ್ಯ ಮತ್ತು ವಿಷ್ಣು ದಂಪತಿಗಳು ಒಂದೇ ದಿನದಲ್ಲಿ ವಿವಾಹ ನೋಂದಣಿ ಮತ್ತು ಪರಿಶೀಲನೆ ಎರಡನ್ನೂ ಮಾಡಿಕೊಂಡಿದ್ದಾರೆ.

ಇಲ್ಲಿದೆ ನೋಡಿ ಪೋಸ್ಟ್​​​:

ಈ ನೋಂದಾಣಿ ಪ್ರಕ್ರಿಯೆ ಮುಗಿದ ನಂತರ ಆನ್​​​​​ಲೈನ್​​ನಲ್ಲಿ ಪಂಚಾಯತ್ ಅಧಿಕಾರಿ ಅವರಿಗೆ ಅವರ ಫೋಟೋ ಇರುವ ಡಿಜಿಟಲ್ ಸಹಿ ಮಾಡಿದ ಪ್ರಮಾಣಪತ್ರವನ್ನು ನೀಡಿದ್ದಾರೆ. ಇದೀಗ ಈ ಬಗ್ಗೆ ವಿಡಿಯೋವೊಂದನ್ನು @SreekanthB+ve ಎಂಬ ಎಕ್ಸ್​​​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಹೀಗೆ ಬರೆದುಕೊಳ್ಳಲಾಗಿದೆ. ” ಲಾವಣ್ಯ ಮತ್ತು ವಿಷ್ಣು ದಂಪತಿಗಳು ವೀಡಿಯೊ KYC ಮೂಲಕ ಮದುವೆ ನೋಂದಣಿ ಮಾಡಿಕೊಂಡಿದ್ದಾರೆ. ಪಂಚಾಯತ್ ಅಧಿಕಾರಿ ಅದೇ ದಿನ ಮಧು-ವರರ ಫೋಟೋದೊಂದಿಗೆ ಡಿಜಿಟಲ್ ಆಗಿ ಪರಿಶೀಲಿಸಿದ ಪ್ರಮಾಣಪತ್ರವನ್ನು ಕೂಡ ನೀಡಿದ್ದಾರೆ”.

ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್ ಮಾಯವಾಗಿದೆ! ಹಬ್ಬದಂದು ಕೇವಲ 25 ನಿಮಿಷಗಳಲ್ಲಿ ವಿಮಾನ ನಿಲ್ದಾಣ ತಲುಪಿದ ನಟ ಆಶಿಶ್ ವಿದ್ಯಾರ್ಥಿ

ಇನ್ನು ಈ ಡಿಜಿಟಲ್​​​​ ತಂತ್ರವನ್ನು ಬಳಸಿಕೊಂಡ ಕೇರಳ ಮಾದರಿಯಾಗಿದೆ. ಈ ವ್ಯವಸ್ಥೆ ಪಾರದರ್ಶಕವಾಗಿ ಮತ್ತು ಹೆಚ್ಚು ನಾಗರಿಕ ಸ್ನೇಹಿಯಾಗಿದೆ ಎಂದು ಪೋಸ್ಟ್​​ನಲ್ಲಿ ಬರೆಯಲಾಗಿದೆ. ಈ ಪೋಸ್ಟ್​​ಗೆ ಸೋಶಿಯಲ್​ ಮೀಡಿಯಾ ಬಳಕೆದಾರರು ಕಮೆಂಟ್​​ ಮಾಡಿದ್ದಾರೆ. ಒಬ್ಬ ಬಳಕೆದಾರ ಇದು ಒಂದು ಕಾರಣಕ್ಕಾಗಿ 100% ಸಾಕ್ಷರತೆ ಎಂದು ಹೇಳಿದ್ದಾರೆ. ಈ ವಿಧಾನವನ್ನು ಶ್ಲಾಘಿಸಲೇಬೇಕು ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:16 am, Tue, 28 October 25

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Follow Us