AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

4 ಕಿ.ಮೀಗೆ 1 ರೂ ವೆಚ್ಚ, 10 ನಿಮಿಷಗಳಲ್ಲಿ ಡೆಲಿವರಿ: ರೋಗಿಗಳ ಜೀವ ಉಳಿಸುತ್ತಿವೆ ಈ ಡ್ರೋನ್​​ ಸೇವೆ

ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಡ್ರೋನ್ ಯೋಜನೆ ಪರಿಹಾರ ಒದಗಿಸಿದೆ. ಚಂದ್ರಾಪುರದಿಂದ ಬೊಮ್ಮಸಂದ್ರಕ್ಕೆ 10 ನಿಮಿಷದಲ್ಲಿ ವೈದ್ಯಕೀಯ ಮಾದರಿಗಳನ್ನು ತಲುಪಿಸಿ ಜೀವ ಉಳಿಸುವ ಕಾರ್ಯ ನಡೆಯುತ್ತಿದೆ. ಪ್ರತಿ ವಿತರಣೆಗೆ 1 ರೂಪಾಯಿ ವೆಚ್ಚ ತಗಲುತ್ತಿದ್ದು, DGCA ಅನುಮೋದನೆಯೊ ಇದಕ್ಕೆ ದೊರೆತಿದೆ ಎನ್ನಲಾಗಿದೆ. ಭಾರತದೆಲ್ಲೆಡೆಯೂ ಯೋಜನೆ ವಿಸ್ತರಣೆ ಹೊಂದಿ 10 ನಿಮಿಷಗಳಲ್ಲಿ ವೈದ್ಯಕೀಯ ವಿತರಣೆ ಸಾಮಾನ್ಯವಾಗಬಹುದೆಂದ ಹೊಸ ನಿರೀಕ್ಷೆಯೂ ಇದರಿಂದಾಗಿ ಹುಟ್ಟಿಕೊಂಡಿದೆ.

ಪ್ರಸನ್ನ ಹೆಗಡೆ
|

Updated on:Mar 19, 2026 | 12:33 PM

Share
ಬೆಂಗಳೂರಿನ ಟ್ರಾಫಿಕ್​​ ಸಮಸ್ಯೆಯಿಂದಾಗಿ ತುರ್ತು ಚಿಕಿತ್ಸೆ ಅಗತ್ಯವಿರುವ ಅದೆಷ್ಟೋ ಮಂದಿ ಪ್ರಾಣ ತೆತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಔಷಧ, ಚಿಕಿತ್ಸೆಗೆ ಅಗತ್ಯ ವಸ್ತುಗಳ ಸಾಗಾಟಕ್ಕೂ ವಾಹನಗಳ ದಟ್ಟಣೆ ಅಡ್ಡಗಾಲಾಗಿ ಪರಿಣಮಿಸಿದೆ. ಇದಕ್ಕೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ನಾರಾಯಣ ಹೆಲ್ತ್​​ ಮತ್ತು  ಡ್ರೋನ್ ಸ್ಟಾರ್ಟ್‌ಅಪ್ Airbound ಒಟ್ಟಾಗಿ ಆರಂಭಿಸಿರುವ ಪೈಲಟ್ ಯೋಜನೆ,  ಟ್ರಾಫಿಕ್ ಸಮಸ್ಯೆ ಮೀರಿ ಅಗತ್ಯ ವೈದ್ಯಕೀಯ ಸಾಮಗ್ರಿಗಳು ಮತ್ತು ಪರೀಕ್ಷಾ ಮಾದರಿಗಳನ್ನು ಸಮಯಕ್ಕೆ ಸರಿಯಾಗಿ ತಲುಪಿಸುವ ಮೂಲಕ ಜೀವಗಳನ್ನು ಉಳಿಸುವ ಹೊಸ ಮಾರ್ಗವನ್ನು ತೋರಿಸಿದೆ.

ಬೆಂಗಳೂರಿನ ಟ್ರಾಫಿಕ್​​ ಸಮಸ್ಯೆಯಿಂದಾಗಿ ತುರ್ತು ಚಿಕಿತ್ಸೆ ಅಗತ್ಯವಿರುವ ಅದೆಷ್ಟೋ ಮಂದಿ ಪ್ರಾಣ ತೆತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಔಷಧ, ಚಿಕಿತ್ಸೆಗೆ ಅಗತ್ಯ ವಸ್ತುಗಳ ಸಾಗಾಟಕ್ಕೂ ವಾಹನಗಳ ದಟ್ಟಣೆ ಅಡ್ಡಗಾಲಾಗಿ ಪರಿಣಮಿಸಿದೆ. ಇದಕ್ಕೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ನಾರಾಯಣ ಹೆಲ್ತ್​​ ಮತ್ತು ಡ್ರೋನ್ ಸ್ಟಾರ್ಟ್‌ಅಪ್ Airbound ಒಟ್ಟಾಗಿ ಆರಂಭಿಸಿರುವ ಪೈಲಟ್ ಯೋಜನೆ, ಟ್ರಾಫಿಕ್ ಸಮಸ್ಯೆ ಮೀರಿ ಅಗತ್ಯ ವೈದ್ಯಕೀಯ ಸಾಮಗ್ರಿಗಳು ಮತ್ತು ಪರೀಕ್ಷಾ ಮಾದರಿಗಳನ್ನು ಸಮಯಕ್ಕೆ ಸರಿಯಾಗಿ ತಲುಪಿಸುವ ಮೂಲಕ ಜೀವಗಳನ್ನು ಉಳಿಸುವ ಹೊಸ ಮಾರ್ಗವನ್ನು ತೋರಿಸಿದೆ.

1 / 5
ಈ ಪೈಲಟ್ ಯೋಜನೆ ಚಂದ್ರಾಪುರದ ಕ್ಲಿನಿಕ್‌ನಿಂದ ಬೊಮ್ಮಸಂದ್ರದಲ್ಲಿರುವ ನಾರಾಯಣ ಹೆಲ್ತ್ ಸಿಟಿ ಪ್ರಯೋಗಾಲಯದವರೆಗೆ ಸಂಪರ್ಕ ಕಲ್ಪಿಸುತ್ತದೆ. ಸಾಮಾನ್ಯವಾಗಿ 4 ಕಿಮೀ ಪ್ರಯಾಣಕ್ಕೆ ಟ್ರಾಫಿಕ್ ಸಮಯದಲ್ಲಿ ಸುಮಾರು ಒಂದು ಗಂಟೆ ಸಮಯ ಬೇಕು. ಆದರೆ ಡ್ರೋನ್ ಮೂಲಕ ಇದು ಕೇವಲ 10 ನಿಮಿಷಗಳಲ್ಲಿ ಸಾಧ್ಯವಾಗುತ್ತಿದೆ. ಇದರಿಂದ ರೋಗಿಗಳಿಗೆ ಪರೀಕ್ಷಾ ಫಲಿತಾಂಶಗಳು ಹಾಗೂ ಚಿಕಿತ್ಸೆ ಬಹಳ ವೇಗವಾಗಿ ಲಭ್ಯವಾಗಲಿವೆ.

ಈ ಪೈಲಟ್ ಯೋಜನೆ ಚಂದ್ರಾಪುರದ ಕ್ಲಿನಿಕ್‌ನಿಂದ ಬೊಮ್ಮಸಂದ್ರದಲ್ಲಿರುವ ನಾರಾಯಣ ಹೆಲ್ತ್ ಸಿಟಿ ಪ್ರಯೋಗಾಲಯದವರೆಗೆ ಸಂಪರ್ಕ ಕಲ್ಪಿಸುತ್ತದೆ. ಸಾಮಾನ್ಯವಾಗಿ 4 ಕಿಮೀ ಪ್ರಯಾಣಕ್ಕೆ ಟ್ರಾಫಿಕ್ ಸಮಯದಲ್ಲಿ ಸುಮಾರು ಒಂದು ಗಂಟೆ ಸಮಯ ಬೇಕು. ಆದರೆ ಡ್ರೋನ್ ಮೂಲಕ ಇದು ಕೇವಲ 10 ನಿಮಿಷಗಳಲ್ಲಿ ಸಾಧ್ಯವಾಗುತ್ತಿದೆ. ಇದರಿಂದ ರೋಗಿಗಳಿಗೆ ಪರೀಕ್ಷಾ ಫಲಿತಾಂಶಗಳು ಹಾಗೂ ಚಿಕಿತ್ಸೆ ಬಹಳ ವೇಗವಾಗಿ ಲಭ್ಯವಾಗಲಿವೆ.

2 / 5
2026ರ ಆರಂಭದಿಂದಲೇ ಈ ಸೇವೆ ಪ್ರಾರಂಭವಾಗಿದ್ದು, 54 ದಿನಗಳ ಪ್ರಯೋಗಾವಧಿಯಲ್ಲಿ 700ಕ್ಕೂ ಹೆಚ್ಚು ಬಾರಿ  ಡ್ರೋನ್​​ ಹಾರಾಟ ಯಶಸ್ವಿಯಾಗಿ ನಡೆದಿದೆ. ಪ್ರತಿ ಹಾರಾಟದಲ್ಲಿ ಸುಮಾರು 40 ಪರೀಕ್ಷಾ ಮಾದರಿಗಳನ್ನು  ಸಾಗಿಸಲು ಸಾಧ್ಯವಾಗುತ್ತದೆ. ಈ ತಂತ್ರಜ್ಞಾನದಲ್ಲಿ ಮತ್ತೊಂದು ವಿಶೇಷವೆಂದರೆ ಅದರ ಕಡಿಮೆ ವೆಚ್ಚ. ಪ್ರತಿ ಡ್ರೋನ್ ಡೆಲಿವರಿಗೆ ಕೇವಲ 1 ರೂಪಾಯಿ ಮಾತ್ರ ಖರ್ಚಾಗುತ್ತದೆ. ಇದು ವಾಹನಗಳ ಮೂಲಕ ಸಾಗಾಟಕ್ಕಿಂತ ಬಹಳ ಕಡಿಮೆ ವೆಚ್ಚವಾಗಿದೆ.

2026ರ ಆರಂಭದಿಂದಲೇ ಈ ಸೇವೆ ಪ್ರಾರಂಭವಾಗಿದ್ದು, 54 ದಿನಗಳ ಪ್ರಯೋಗಾವಧಿಯಲ್ಲಿ 700ಕ್ಕೂ ಹೆಚ್ಚು ಬಾರಿ ಡ್ರೋನ್​​ ಹಾರಾಟ ಯಶಸ್ವಿಯಾಗಿ ನಡೆದಿದೆ. ಪ್ರತಿ ಹಾರಾಟದಲ್ಲಿ ಸುಮಾರು 40 ಪರೀಕ್ಷಾ ಮಾದರಿಗಳನ್ನು ಸಾಗಿಸಲು ಸಾಧ್ಯವಾಗುತ್ತದೆ. ಈ ತಂತ್ರಜ್ಞಾನದಲ್ಲಿ ಮತ್ತೊಂದು ವಿಶೇಷವೆಂದರೆ ಅದರ ಕಡಿಮೆ ವೆಚ್ಚ. ಪ್ರತಿ ಡ್ರೋನ್ ಡೆಲಿವರಿಗೆ ಕೇವಲ 1 ರೂಪಾಯಿ ಮಾತ್ರ ಖರ್ಚಾಗುತ್ತದೆ. ಇದು ವಾಹನಗಳ ಮೂಲಕ ಸಾಗಾಟಕ್ಕಿಂತ ಬಹಳ ಕಡಿಮೆ ವೆಚ್ಚವಾಗಿದೆ.

3 / 5
ಈ ಯೋಜನೆಯ ಯಶಸ್ಸಿಗೆ ಡ್ರೋನ್​​ ಮಾದರಿಯೂ ಪ್ರಮುಖ ಪಾತ್ರ ವಹಿಸಿದೆ. ಇದು ವರ್ಟಿಕಲ್ ಟೆಕ್‌ಆಫ್ ಸಾಮರ್ಥ್ಯ ಮತ್ತು ಫಿಕ್ಸ್ಡ್-ವಿಂಗ್ ಹಾರಾಟದ ದಕ್ಷತೆಯನ್ನು ಒಟ್ಟಿಗೆ ಹೊಂದಿದ್ದು, ನಗರ ಪ್ರದೇಶಗಳಲ್ಲಿ ಕಡಿಮೆ ವೆಚ್ಚದಲ್ಲಿ ಹೆಚ್ಚು ಬಾರಿ ಹಾರಾಟ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿದೆ.

ಈ ಯೋಜನೆಯ ಯಶಸ್ಸಿಗೆ ಡ್ರೋನ್​​ ಮಾದರಿಯೂ ಪ್ರಮುಖ ಪಾತ್ರ ವಹಿಸಿದೆ. ಇದು ವರ್ಟಿಕಲ್ ಟೆಕ್‌ಆಫ್ ಸಾಮರ್ಥ್ಯ ಮತ್ತು ಫಿಕ್ಸ್ಡ್-ವಿಂಗ್ ಹಾರಾಟದ ದಕ್ಷತೆಯನ್ನು ಒಟ್ಟಿಗೆ ಹೊಂದಿದ್ದು, ನಗರ ಪ್ರದೇಶಗಳಲ್ಲಿ ಕಡಿಮೆ ವೆಚ್ಚದಲ್ಲಿ ಹೆಚ್ಚು ಬಾರಿ ಹಾರಾಟ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿದೆ.

4 / 5
ಈ ಯೋಜನೆಗೆ Directorate General of Civil Aviation (DGCA) ಅನುಮೋದನೆಯೂ ದೊರೆತಿದೆ ಎನ್ನಲಾಗಿದ್ದು, ಈಗ ಇದನ್ನು ನಗರಾದ್ಯಂತ ವಿಸ್ತರಿಸಲು ಅನುಮತಿ ಪಡೆಯುವ ಪ್ರಯತ್ನಗಳು ನಡೆಯುತ್ತಿವೆ. ಬೆಂಗಳೂರಿನಲ್ಲಿ ಈ ಪ್ರಯೋಗ ಯಶಸ್ವಿಯಾಗಿರುವುದರಿಂದ, ಭಾರತದೆಲ್ಲೆಡೆಯೂ ಯೋಜನೆ ವಿಸ್ತರಣೆ ಹೊಂದಿ 10 ನಿಮಿಷಗಳಲ್ಲಿ ವೈದ್ಯಕೀಯ ವಿತರಣೆ ಸಾಮಾನ್ಯವಾಗಬಹುದೆಂದ ಹೊಸ ನಿರೀಕ್ಷೆ ಹುಟ್ಟಿಕೊಂಡಿದೆ.

ಈ ಯೋಜನೆಗೆ Directorate General of Civil Aviation (DGCA) ಅನುಮೋದನೆಯೂ ದೊರೆತಿದೆ ಎನ್ನಲಾಗಿದ್ದು, ಈಗ ಇದನ್ನು ನಗರಾದ್ಯಂತ ವಿಸ್ತರಿಸಲು ಅನುಮತಿ ಪಡೆಯುವ ಪ್ರಯತ್ನಗಳು ನಡೆಯುತ್ತಿವೆ. ಬೆಂಗಳೂರಿನಲ್ಲಿ ಈ ಪ್ರಯೋಗ ಯಶಸ್ವಿಯಾಗಿರುವುದರಿಂದ, ಭಾರತದೆಲ್ಲೆಡೆಯೂ ಯೋಜನೆ ವಿಸ್ತರಣೆ ಹೊಂದಿ 10 ನಿಮಿಷಗಳಲ್ಲಿ ವೈದ್ಯಕೀಯ ವಿತರಣೆ ಸಾಮಾನ್ಯವಾಗಬಹುದೆಂದ ಹೊಸ ನಿರೀಕ್ಷೆ ಹುಟ್ಟಿಕೊಂಡಿದೆ.

5 / 5

Published On - 12:32 pm, Thu, 19 March 26

Follow Us
SIR ಗೆ ಶಿಕ್ಷಕರ ನಿಯೋಜನೆ: ತರಗತಿಗಳು ಸ್ಥಗಿತ, ವಿದ್ಯಾರ್ಥಿಗಳ ಪ್ರತಿಭಟನೆ
SIR ಗೆ ಶಿಕ್ಷಕರ ನಿಯೋಜನೆ: ತರಗತಿಗಳು ಸ್ಥಗಿತ, ವಿದ್ಯಾರ್ಥಿಗಳ ಪ್ರತಿಭಟನೆ
ಮೈಸೂರು ದಸರಾದಲ್ಲಿ ಕಂಬಳಕ್ಕೆ ವಿರೋಧಿಸ್ತಿರೋ ಪ್ರತಿಭಟನಾಕಾರರು ಹೇಳಿದ್ದೇನು?
ಮೈಸೂರು ದಸರಾದಲ್ಲಿ ಕಂಬಳಕ್ಕೆ ವಿರೋಧಿಸ್ತಿರೋ ಪ್ರತಿಭಟನಾಕಾರರು ಹೇಳಿದ್ದೇನು?
ಸಂಡೂರಿನ ಅಂತಾಪುರದಲ್ಲಿ ವಿಜಯನಗರ ಕಾಲದ ಅಪರೂಪದ ಜೈನ ದಾನಶಾಸನ ಪತ್ತೆ!
ಸಂಡೂರಿನ ಅಂತಾಪುರದಲ್ಲಿ ವಿಜಯನಗರ ಕಾಲದ ಅಪರೂಪದ ಜೈನ ದಾನಶಾಸನ ಪತ್ತೆ!
ಟೋಯಿಂಗ್ ಬಳಿಕವೂ ಮಾಲೀಕರು ಬರದಿದ್ರೆ ಹರಾಜು ಹಾಕ್ತೇವೆ: ಸಚಿವ ಕೃಷ್ಣಭೈರೇಗೌಡ
ಟೋಯಿಂಗ್ ಬಳಿಕವೂ ಮಾಲೀಕರು ಬರದಿದ್ರೆ ಹರಾಜು ಹಾಕ್ತೇವೆ: ಸಚಿವ ಕೃಷ್ಣಭೈರೇಗೌಡ
ರಾಯಚೂರಿನಲ್ಲಿ 760 ಕೆಜಿಗೂ ಅಧಿಕ ನಂದಿನಿ ಕೆನೆಭರಿತ ಹಾಲಿನ ಪುಡಿ ಪತ್ತೆ
ರಾಯಚೂರಿನಲ್ಲಿ 760 ಕೆಜಿಗೂ ಅಧಿಕ ನಂದಿನಿ ಕೆನೆಭರಿತ ಹಾಲಿನ ಪುಡಿ ಪತ್ತೆ
ಚೆನ್ನಮ್ಮ ಆರೋಗ್ಯ ಈಗ ಹೇಗಿದೆ? ವೈದ್ಯರು ಕೊಟ್ಟ ಮಾಹಿತಿ ಇಲ್ಲಿದೆ
ಚೆನ್ನಮ್ಮ ಆರೋಗ್ಯ ಈಗ ಹೇಗಿದೆ? ವೈದ್ಯರು ಕೊಟ್ಟ ಮಾಹಿತಿ ಇಲ್ಲಿದೆ
ಹಾರ್ಮೋಜ್ಗನ್ ಪ್ರಾಂತ್ಯದಲ್ಲಿ ಒಟ್ಟು 5-6 ಸೇತುವೆಗಳು ಧ್ವಂಸ
ಹಾರ್ಮೋಜ್ಗನ್ ಪ್ರಾಂತ್ಯದಲ್ಲಿ ಒಟ್ಟು 5-6 ಸೇತುವೆಗಳು ಧ್ವಂಸ
ಸೌದಿ ಅರೇಬಿಯಾದಲ್ಲಿ ಮಂಗಳೂರಿನ ವಿಟ್ಲದ ಯುವಕನ ಸಾಧನೆ!
ಸೌದಿ ಅರೇಬಿಯಾದಲ್ಲಿ ಮಂಗಳೂರಿನ ವಿಟ್ಲದ ಯುವಕನ ಸಾಧನೆ!
ಚೆನ್ನಮ್ಮ ಆರೋಗ್ಯ ಸ್ಥಿತಿ ಗಂಭೀರ: ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಕೆ
ಚೆನ್ನಮ್ಮ ಆರೋಗ್ಯ ಸ್ಥಿತಿ ಗಂಭೀರ: ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಕೆ
ಬಂಟ್ವಾಳ ಕೊಲೆ ಆರೋಪಿ ಬಗ್ಗೆ ತಪ್ಪು ಮಾಹಿತಿ ಹರಡಿದವರ ವಿರುದ್ಧ ಕೇಸ್
ಬಂಟ್ವಾಳ ಕೊಲೆ ಆರೋಪಿ ಬಗ್ಗೆ ತಪ್ಪು ಮಾಹಿತಿ ಹರಡಿದವರ ವಿರುದ್ಧ ಕೇಸ್