Video Viral: ಭಾನುವಾರ ಕಳೆದು ಸೋಮವಾರ ಬಂದಾಗ ನಿಮಗೂ ಹೀಗೆ ಆಗಿರಬಹುದು, ಸೃತಿ ಇರಾನಿ ಹಂಚಿಕೊಂಡ ವಿಡಿಯೊ ವೈರಲ್

ಭಾನುವಾರ ಮುಗಿದು ಸೋಮವಾರ ಬಂದರೆ ಸಾಕು ಅದೊಂದು ಒತ್ತಡದ ದಿನ ಎಂದು ಭಾವಿಸುತ್ತೇವೆ, ಈ ಬಗ್ಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಒಂದು ಮೀಮ್ ಹಂಚಿಕೊಂಡಿದ್ದಾರೆ.

Video Viral: ಭಾನುವಾರ ಕಳೆದು ಸೋಮವಾರ ಬಂದಾಗ ನಿಮಗೂ ಹೀಗೆ ಆಗಿರಬಹುದು, ಸೃತಿ ಇರಾನಿ ಹಂಚಿಕೊಂಡ ವಿಡಿಯೊ ವೈರಲ್
ಸಾಂದರ್ಭಿಕ ಚಿತ್ರ

Updated on: Feb 20, 2023 | 1:31 PM

ಸೋಮವಾರ ಎಂದರೆ ಸಾಕು ತುಂಬಾ ಭಯನಕ ದಿನದಂತೆ ಅನಿಸುತ್ತದೆ, ಭಾನುವಾರ ಮುಗಿದು ಸೋಮವಾರ ಬಂದರೆ ಸಾಕು ಮತ್ತೆ ಅದೇ ನಿಮ್ಮ ಕೆಲಸ, ಅದೇ ಒತ್ತಡ, ಭಾನುವಾರ ಮುಗಿದರೆ ಒಂದು ರೀತಿಯ ಸಂಕಷ್ಟ ದಿನವಾಗಿರುತ್ತದೆ. ಹೀಗೆ ಭಾನುವಾರ ಮುಗಿದು ಸೋಮವಾರ ಬಂದರೆ ಸಾಕು ಅದೊಂದು ಒತ್ತಡದ ದಿನ ಎಂದು ಭಾವಿಸುತ್ತೇವೆ, ಈ ಬಗ್ಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಒಂದು ಮೀಮ್ ಹಂಚಿಕೊಂಡಿದ್ದಾರೆ. ಭಾನುವಾರ ರಜೆ ಮುಗಿಸಿ ನೀವು ಸೋಮವಾರ ನಿದ್ರೆ, ಅಲಸ್ಯ, ಕೋಪ, ಒತ್ತಡ ಎಲ್ಲವೂ ಕಾಡುವುದು ಸಹಜ. ಅದಕ್ಕಾಗಿಯೆ ಈ ಸೋಮವಾರವನ್ನು ಅನೇಕರು ದ್ವೇಷಿಸುತ್ತಾರೆ, ಅದರಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಒಬ್ಬರು. ಅವರು ಸೋಮವಾರದ ಆರಂಭದ ಬಗ್ಗೆ ಅಥವಾ ದಿನದ ಬಗ್ಗೆ ಸಂಕ್ಷಿಪ್ತವಾಗಿ ಹೇಳಲು, ಸಚಿವರು ತಮಾಷೆಯ ಶೀರ್ಷಿಕೆಯೊಂದಿಗೆ Instagram ನಲ್ಲಿ ಒಂದು ಮೀಮ್ ಅನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ತಮ್ಮ ಸೋಮವಾರದ ಮನಸ್ಥಿತಿಯನ್ನು ಹೇಗಿರುತ್ತದೆ ಎಂಬುದನ್ನು ಹಂಚಿಕೊಂಡರೆ, ಈ ಬಗ್ಗೆ Instagram ಬಳಕೆದಾರರೂ ಕೂಡ ಕಮೆಂಟ್ ಮಾಡಿದ್ದಾರೆ.

ನೀವು ಭಾನುವಾರ ಕಳೆದು ಸೋಮವಾರ ಹೇಳುವಾಗ ಕೊ ಲೆಟ್ ಜಾ ರೇ’ ( ಸೋಮವಾರವನ್ನು ನಿನ್ನ ಜೊತೆಗೆ ತೆಗೆದುಕೊಂಡು ಹೋಗು )” ಎಂದು ಸ್ಮೃತಿ ಇರಾನಿ ಅವರು ಹೆರಿ ಫೇರಿ ಚಿತ್ರದ ತುಣುಕನ್ನು ಹಂಚಿಕೊಳ್ಳುವಾಗ ಬರೆದಿದ್ದಾರೆ. ವೀಡಿಯೊದಲ್ಲಿ, ಅಕ್ಷಯ್ ಕುಮಾರ್ ಭಾನುವಾರ, ಪರೇಶ್ ರಾವಲ್ ಸೋಮವಾರದ ಅತ್ಯಂತ ಭಯಾನಕ ದಿನ ಎಂಬಂತೆ ಪ್ರತಿನಿಧಿಸುತ್ತಾರೆ. ಅಕ್ಷಯ್ ಪರೇಶ್‌ಗೆ, “ಮೈ ಚಲಾ ಜೌಂಗಾ (ನಾನು ಹೋಗುತ್ತೇನೆ)” ಎಂದು ಹೇಳುತ್ತಾರೆ. ಇದಕ್ಕೆ ಪರೇಶ್ ರಾವಲ್ ಅವರು, “ಜಾ (ಗೋ)” ಎಂದು ಉತ್ತರಿಸುತ್ತಾರೆ. ಅಕ್ಷಯ್ ತಾನು ಹೋಗುತ್ತೇನೆ ಎಂದು ಪುನರಾವರ್ತಿಸುತ್ತಲೇ ಇರುತ್ತಾರೆ ಮತ್ತು ರಾವಲ್ ಕ್ಲಿಪ್ ಉದ್ದಕ್ಕೂ “ಜಾ (ಗೋ)” ಎಂದು ಹೇಳುತ್ತಾರೆ.

ಇದನ್ನೂ ಓದಿ: Video Viral : ನಾಯಿಯೊಂದಿಗೆ ಸೆಲ್ಫಿಯಲ್ಲಿ ಮುಳುಗಿದ ಪೈಲಟ್, ವಿಳಂಬವಾಗಿ ಹಾರಿದ ವಿಮಾನ

ಕೆಲವು ಗಂಟೆಗಳ ಹಿಂದೆ ಸ್ಮೃತಿ ಇರಾನಿ ಹಂಚಿಕೊಂಡ ಈ ವಿಡಿಯೊ 1.9 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 12,800 ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. ಅನೇಕರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿದ್ದಾರೆ. ಅಥ್ಲೀಟ್ ರೀಟಾ ಜೈರತ್ ಅವರು ಕಾಮೆಂಟ್ ಮಾಡಿದ್ದು “ಮಿಸ್ಟರ್ ಸೋಮವಾರದ ‘ಕಡ್-ಕಾರ್-ಲೆಸ್’ ಮನೋಭಾವವನ್ನು ಪ್ರೀತಿಸಿ!” ಇದರ ಜೊತೆಗೆ ನಗುವ ಎಮೋಟಿಕಾನ್‌ಗಳನ್ನು ಕೂಡ ಕಮೆಂಟ್ ಮಾಡಿದ್ದಾರೆ. ಇದು ಪ್ರತಿದಿನ ನಮ್ಮ ಮನಸ್ಸಿನಲ್ಲಿಂಟು ಮಾಡುವ ಭಾವನೆ ಎಂದು ಒಬ್ಬ ಬಳಕೆದಾರ ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಇದು ನಿಜ ಎಂದು ಹೇಳಿದ್ದಾರೆ. ನಾವು ನಿಜವಾಗಿಯೂ ನಿಮ್ಮ ಹಾಸ್ಯಪ್ರಜ್ಞೆಯನ್ನು ಪ್ರೀತಿಸುತ್ತೇವೆ ಎಂದು ಮತ್ತೊಬ್ಬ ವ್ಯಕ್ತಿ ಕಮೆಂಟ್​ ಮಾಡಿದ್ದಾರೆ.

Published On - 1:31 pm, Mon, 20 February 23

Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Follow Us