Loading video

ನಮಗೆ ವಿಕೃತ ಮನಸ್ಸಿನ ವ್ಯಕ್ತಿಗಿಂತ 2 ಸಾವಿರ ಮಹಿಳೆಯರು ಮುಖ್ಯ: ಪ್ರಕಾಶ್​​ ರೈ​​​

|

Updated on: May 01, 2024 | 11:04 AM

Prakash Rai: ಪ್ರಜ್ವಲ್ ರೇವಣ್ಣನ‌ ಪೆನ್ ಡ್ರೈವ್ ಬಿಜೆಪಿಯವರಿಗೆ ಕೊಟ್ರಂತೆ, ಕಾಂಗ್ರೆಸ್​​​ನವರಿಗೆ ಕೊಟ್ರಂತೆ ಈ‌ ಮದ್ಯೆ ಡ್ರೈವರ್ ಬಂದಿದ್ದಾನೆ. ಆತನ ನಾನು ಮಾತ್ರ ಒಬ್ಬರಿಗೆ ಕೊಟ್ಟಿದಾನೆ ಎಂದು ಹೇಳಿದ್ದಾನೆ. ಇದರಲ್ಲಿ ಯಾರನ್ನೂ ನಂಬೋದು ಎಂದು ನಟ ಪ್ರಕಾಶ್ ರಾಜ್ ಹೇಳಿದ್ದಾರೆ.

ಬೆಂಗಳೂರು, ಮೆ.1: ರಾಜ್ಯದಲ್ಲಿ ಭಾರೀ ಸದ್ದು ಆಗುತ್ತಿರುವ ಪ್ರಜ್ವಲ್​​​​​ ರೇವಣ್ಣ ಪೆನ್​​​ಡ್ರೈವ್​ ಪ್ರಕರಣಕ್ಕೆ ಒಂದಲ್ಲ ಒಂದು ತಿರುವು ಸಿಗುತ್ತಿದೆ. ಇದರ ಮಧ್ಯೆ ನಡುವೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ರಾಜಕಾರಣಿಗಳು, ಸಿನಿಮಾ ನಟರು ಕಮೆಂಟ್​​​ ಮಾಡುತ್ತಿದ್ದಾರೆ. ಖ್ಯಾತ ನಟ ಪ್ರಕಾಶ್​​​ ರೈ ಕೂಡ ಈ ಪ್ರಕರಣದ ಬಗ್ಗೆ ಹುಬ್ಬಳ್ಳಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದಾರೆ. ಪ್ರಜ್ವಲ್ ರೇವಣ್ಣನ‌ ಪೆನ್ ಡ್ರೈವ್ ಬಿಜೆಪಿಯವರಿಗೆ ಕೊಟ್ರಂತೆ, ಕಾಂಗ್ರೆಸ್​​​ನವರಿಗೆ ಕೊಟ್ರಂತೆ ಈ‌ ಮದ್ಯೆ ಡ್ರೈವರ್ ಬಂದಿದ್ದಾನೆ. ಆತನ ನಾನು ಮಾತ್ರ ಒಬ್ಬರಿಗೆ ಕೊಟ್ಟಿದಾನೆ ಎಂದು ಹೇಳಿದ್ದಾನೆ. ಇದರಲ್ಲಿ ಯಾರನ್ನೂ ನಂಬೋದು ಎಂದು ನಟ ಪ್ರಕಾಶ್ ರಾಜ್ ಹೇಳಿದ್ದಾರೆ. ಬಿಜೆಪಿ ಚಾಣಕ್ಯ ಅಮಿತ್​​ ಶಾ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಆದರೆ ಅವರು ಇದು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದಲ್ಲ, ರಾಜ್ಯ ಸರ್ಕಾರಕ್ಕೆ ಬಿಟ್ಟಿದ್ದು, ಹೀಗೆ ಹೇಳುಲು ನಾಚಿಕೆ ಆಗುವುದಿಲ್ಲ. ಕೊನೆಯ ಪಕ್ಷ ನಿಮ್ಮ ಜನರನ್ನು, ಮಹಿಳೆಯನ್ನು ಇದರ ಬಗ್ಗೆ ಪ್ರತಿಭಟನೆ ಮಾಡಲು ಹೇಳಿ ಎಂದು ಅಮಿತ್​​ ಶಾ ಅವರನ್ನು ಏಕವಚನದಲ್ಲಿ ಉಲ್ಲೇಖಿಸಿದ್ದಾರೆ. ನಮ್ಮ ಆ ವಿಕೃತ ಕಾಮಿ ಮುಖ್ಯ ಅಲ್ಲ, ಆ ಎರಡು ಸಾವಿರ ಹೆಣ್ಮಕ್ಕಳು ಮುಖ್ಯ ಎಂದು ಹೇಳಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ