ಸೋಶಿಯಲ್ ಮೀಡಿಯಾ ಸ್ಟಾರ್ ಕಿಪಿ ಕೀರ್ತಿ ಜೊತೆ ಟಿವಿ9 ಪ್ರತಿನಿಧಿಯ ಮಾತು, ಕೀರ್ತಿಯ ಕನ್ನಡಾಭಿಮಾನ ಅನನ್ಯ!

ಅರುಣ್​ ಕುಮಾರ್​ ಬೆಳ್ಳಿ

Updated on: Feb 08, 2025 | 8:19 PM

ಕಿಪಿ ಕೀರ್ತಿ ಕನ್ನಡ ಭಾಷೆಯನ್ನು ನಿರರ್ಗಳವಾಗಿ ಮಾತಾಡುತ್ತಾರಾದರೂ ಅಲ್ಲಲ್ಲಿ ಅಲ್ಪವಿರಾಮಗಳನ್ನು ಹಾಕಿ ಪದಗಳಿಗಾಗಿ ತಡಕಾಡುತ್ತಾರೆ. ಟಿವಿ ಪರದೆಯ ಖ್ಯಾತ ಌಂಕರ್ ಅನುಶ್ರೀಯನ್ನು ಕೀರ್ತಿ ತುಂಬಾ ಇಷ್ಟಪಡುತ್ತಾರೆ. ತನ್ನಲ್ಲಿರುವ ಪ್ರತಿಭೆಯನ್ನು ಅವರೇ ಗುರತಿಸಿದ್ದು ಎಂದು ಕೀರ್ತಿ ಹೇಳುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್​ಗಳೆನಿಸಿಕೊಂಡವರನ್ನು ತಮ್ಮ ಕುಟುಂಬ ಎನ್ನುವ ಕೀರ್ತಿ ತಮ್ಮ ನಿಷ್ಕಪಟ ಮಾತುಗಳಿಂದ ಇಷ್ಟವಾಗುತ್ತಾರೆ.

ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವವರಿಗೆಲ್ಲ ಕಿಪಿ ಕೀರ್ತಿ ಪರಿಚಯ ಇದ್ದೇ ಇರುತ್ತೆ. ಕೊಡಗಿನ ಕೀರ್ತಿ ಇವತ್ತು ಬೆಂಗಳೂರಲ್ಲಿದ್ದರು ಮತ್ತು ನಮ್ಮ ಪ್ರತಿನಿಧಿ ಅವರೊಂದಿಗೆ ಮಾತಾಡಿದ್ದಾರೆ. ಕೀರ್ತಿಗೆ ಕನ್ನಡದ ಸಿನಿಮಾ, ಹಾಡು, ನಟರು ಹಾಗೂ ಜನರ ಬಗ್ಗೆ ಎಷ್ಟು ಪ್ರೀತಿ ಮತ್ತು ಅಭಿಮಾನವಿದೆ ಅನ್ನೋದು ಮಾತುಗಳಲ್ಲಿ ಗೊತ್ತಾಗುತ್ತದೆ. ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮೂಲಕ ಹೆಸರುವಾಸಿಯಾಗಿರುವ ಕೀರ್ತಿಗೆ ಪುನೀತ್ ರಾಜ್​ಕುಮಾರ್ ಅವರೆಂದರೆ ಬಹಳ ಇಷ್ಟ. ಇದೇ ರಿಯಾಲಿಟಿ ಶೋನ ಭಾಗವಾಗಿರುವ ಮನು ಅವರ ಹಾಡಿರುವ ಹಾಡಿನ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕೀರ್ತಿ ಬೆಂಗಳೂರುಗೆ ಬಂದಿದ್ದಾರಂತೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   Kashmir : ಕಾಶ್ಮೀರದ ಅತೀ ಚಿಕ್ಕವಯಸ್ಸಿನ ಸೋಶಿಯಲ್ ಮೀಡಿಯಾ ಇನ್​ಫ್ಲೂಯೆನ್ಸರ್​ ಅಕ್ಸಾ ಮಸರತ್

Published on: Feb 08, 2025 07:18 PM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.