Woman left ignored: ಮಹಿಳೆಯ ಗೋಳು ಕೇಳುವುದಕ್ಕಿಂತ ಮಾಧ್ಯಮಗಳೊಂದಿಗೆ ಮಾತಾಡುವುದು ಮುಖ್ಯಮಂತ್ರಿಗಳಿಗೆ ಜಾಸ್ತಿ ಮುಖ್ಯವಾಗಿತ್ತು!

Updated on: Mar 03, 2023 | 12:30 PM

ಮುಖ್ಯಮಂತ್ರಿಗಳ ಭದ್ರತಾ ಸಿಬ್ಬಂದಿ ಮತ್ತು ಅಧಿಕಾರಿಗಳು ಆಕೆಯನ್ನು ಹಿಂದೆ ತಳ್ಳುತ್ತಾರೆ, ಬೊಮ್ಮಾಯಿ ಅವರು ಎದೆ ಸೆಟೆಸಿಕೊಂಡು ಮಾಧ್ಯಮದ ಕೆಮೆರಾಗಳ ಮುಂದೆ ಬಂದು ನಿಲ್ಲುತ್ತಾರೆ!

ಬೆಂಗಳೂರು: ದೊಡ್ಡವರ ಮಾತೇ ಹಾಗೆ ಸ್ವಾಮಿ, ಜನರ ಕಷ್ಟ ಕೇಳುವಷ್ಟು ವ್ಯವಧಾನ ಅವರಲ್ಲಿ ಇರಲಾರದು. ವ್ಯವಧಾನ ಇತ್ತು ಅಂದುಕೊಳ್ಳಿ, ಮಾಧ್ಯಮದ ಕೆಮೆರಾಗಳಿಗೆ ಪೋಸು ನೀಡಲು ಹುಸಿ ಕಳಕಳಿ ತೋರುತ್ತಾರೆ. ಇದನ್ನು ಯಾಕೆ ಹೇಳಬೇಕಾಗಿದೆಯೆಂದರೆ, ಮುಖ್ಯಮಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಮನೆಯೆದುರು (residence) ಎಂದಿನಂತೆ ಇಂದು ಸಹ ಅನೇಕ ಜನ ತಮ್ಮ ದೂರುದುಮ್ಮಾನ ಹೇಳಿಕೊಳ್ಳಲು ನೆರೆದಿದ್ದರು. ಅವರಲ್ಲೊಬ್ಬ ಮಹಿಳೆ, ಪಾಪ ಅಕೆಗೆ ಅದ್ಯಾವ ಸಮಸ್ಯೆಯಿತ್ತೋ, ಯಾವ ಕಷ್ಟ ರಾಜ್ಯದ ದೊರೆಗೆ ಹೇಳಬೇಕಿಕೊಂಡಿದ್ದಳೋ? ಅಳುತ್ತಾ, ರೋದಿಸುತ್ತಾ (wailing) ಅಕೆ ಬೊಮ್ಮಾಯಿ ಅವರಿಗೆ ತನ್ನ ವೇದನೆ ಹೇಳಿಕೊಳ್ಳಲಾರಂಭಿಸುತ್ತಾಳೆ. ಅದರೆ ಆಕೆಯ ಮಾತುಗಳಿಂದ ಒಂದರೆಡೇ ಕ್ಷಣಗಳಲ್ಲಿ ಮುಖ್ಯಮಂತ್ರಿಗಳಿಗೆ ಬೇಸರ ಹುಟ್ಟಿ ಮುಂದೆ ಸಾಗುತ್ತಾರೆ. ಆ ತಾಯಿ ಸಾರ್ ಸಾರ್… ಅಂತ ಗೋಗರೆಯುತ್ತಾಳೆ. ಮುಖ್ಯಮಂತ್ರಿಗಳ ಭದ್ರತಾ ಸಿಬ್ಬಂದಿ ಮತ್ತು ಅಧಿಕಾರಿಗಳು ಆಕೆಯನ್ನು ಹಿಂದೆ ತಳ್ಳುತ್ತಾರೆ, ಬೊಮ್ಮಾಯಿ ಅವರು ಎದೆ ಸೆಟೆಸಿಕೊಂಡು ಮಾಧ್ಯಮದ ಕೆಮೆರಾಗಳ ಮುಂದೆ ಬಂದು ನಿಲ್ಲುತ್ತಾರೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More