ಸ್ಪಂದನಾ ವಿಜಯ್ 11ನೇ ದಿನದ ಕಾರ್ಯದಲ್ಲಿ ಸುಮಾರು 4 ಸಾವಿರ ಜನ ಭಾಗಿಯಾಗುವ ನಿರೀಕ್ಷೆ, 75 ಬಾಣಸಿಗರಿಂದ ಅಡುಗೆ ತಯಾರಿ

|

Updated on: Aug 16, 2023 | 11:42 AM

Spandana Vijay 11th day ritual: 75 ಬಾಣಸಿಗರಿಂದ ಲಾಡು, ಪಾಯಸ, ಎರಡು ತರಹದ ಪಲ್ಯ, ಉದ್ದಿನ ವಡೆ, ಮಸಾಲೆ ವಡೆ, ಕೋಸಂಬರಿ, ಪುಲಾವ್, ಅನ್ನ ಸಾಂಬಾರು, ರಸಂ ಮತ್ತು ಮೊಸರನ್ನ ಮೊದಲಾದ ಅಡುಗೆಗಳು ತಯಾರಾಗುತ್ತಿವೆ. ಪೂಜೆ ನೆರವೇರಿದ ಬಳಿಕ ಮಧ್ಯಾಹ್ನ 12ಕ್ಕೆ ಊಟ ಶುರುವಾಗಲಿದೆ.

ಬೆಂಗಳೂರು: ಕುಟುಂಬದ ಕೆಲ ಸದಸ್ಯರೊಂದಿಗೆ ವಿದೇಶ ಪ್ರವಾಸದಲ್ಲಿದ್ದ ಸ್ಪಂದನಾ ವಿಜಯರಾಘವೇಂದ್ರ (Spandana Vijay Raghavendra) ಆಗಸ್ಟ್ 6ರಂದು ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್ ನಲ್ಲಿರುವ ಹೋಟೆಲೊಂದರಲ್ಲಿ ಲೋ ಬಿಪಿಯಿಂದ ಹೃದಯಾಘಾತಕ್ಕೊಳಗಾಗಿ ಕೇವಲ 41ನೇ ವಯಸ್ಸಿನಲ್ಲಿ ದಾರುಣ ಸಾವನ್ನಪ್ಪಿದರು. ಇಂದು ಅವರ 11 ನೇ ದಿನದ ಕಾರ್ಯವನ್ನು (11th day ritual) ನಗರದ ಮಲ್ಲೇಶ್ವರಂನಲ್ಲಿರುವ ಸ್ಪಂದನಾ ತವರುಮನೆಯಲ್ಲಿ (ನಿವೃತ್ತ ಪೊಲೀಸ್ ಅಧಿಕಾರಿ ಬಿಕೆ ಶಿವರಾಂ ಮನೆ) ವ್ಯವಸ್ಥೆ ಮಾಡಲಾಗಿದೆ. ವಿಡಿಯೋದಲ್ಲಿ ಬಾಣಸಿಗರು ಅಡುಗೆ ತಯಾರಿ ನಡೆಸಿರುವುದನ್ನು ನೋಡಬಹುದು. ಸುಮಾರು 3ರಿಂದ 4 ಸಾವಿರ ಜನ ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ. 75 ಬಾಣಸಿಗರಿಂದ (cooks) ಲಾಡು, ಪಾಯಸ, ಎರಡು ತರಹದ ಪಲ್ಯ, ಉದ್ದಿನ ವಡೆ, ಮಸಾಲೆ ವಡೆ, ಕೋಸಂಬರಿ, ಪುಲಾವ್, ಅನ್ನ ಸಾಂಬಾರು, ರಸಂ ಮತ್ತು ಮೊಸರನ್ನ ಮೊದಲಾದ ಅಡುಗೆಗಳು ತಯಾರಾಗುತ್ತಿವೆ. ಪೂಜೆ ನೆರವೇರಿದ ಬಳಿಕ ಮಧ್ಯಾಹ್ನ 12ಕ್ಕೆ ಊಟ ಶುರುವಾಗಲಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Follow us on