‘ಭಾಷೆ-ಸಂಸ್ಕೃತಿಗೆ ಗೌರವಿಸಬೇಕು’; ಸೋನು ನಿಗಮ್ಗೆ ರಾಗಿಣಿ ಕಿವಿಮಾತು
ನಟಿ ರಾಗಿಣಿ ದ್ವಿವೇದಿ ಅವರು ಸೋನು ನಿಗಮ್ ನೀಡಿದ ಹೇಳಿಕೆಯ ಬಗ್ಗೆ ಮಾತನಾಡಿದ್ದಾರೆ. ರಾಗಿಣಿ ಅವರು ಬೇರೆ ರಾಜ್ಯದವರು. ಅವರು ಕರ್ನಾಟಕಕ್ಕೆ ಬಂದು ಕನ್ನಡ ಕಲಿತು ಮಾತನಾಡಿದ್ದಾರೆ. ಇಲ್ಲಿಯ ಭಾಷೆಯ ಬಗ್ಗೆ ಸಾಕಷ್ಟು ಗೌರವ ಸಿಕ್ಕಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಸೋನು ನಿಗಮ್ (Sonu Nigam) ಅವರ ಹೇಳಿಕೆಯನ್ನು ರಾಗಿಣಿ ಖಂಡಿಸಿದ್ದಾರೆ. ಭಾಷೆ ಹಾಗೂ ಸಂಸ್ಕೃತಿಯನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ‘ಪ್ರೀತಿ, ಸಂಸ್ಕೃತಿ ಹಾಗೂ ಪರಸ್ಪರ ಗೌರವಿಸೋದನ್ನು ನಾನು ನಂಬುತ್ತೇನೆ. ಈ ಮೂರು ವಿಚಾರಗಳ ಬಗ್ಗೆ ಯಾರೂ ಮಾತನಾಡಬಾರದು. ಕರ್ನಾಟಕ ನನ್ನ ಮನೆ. ಭಾಷೆ ಎಲ್ಲರನ್ನೂ ಒಂದುಗೂಡಿಸುತ್ತದೆ. ಎಲ್ಲಿಂದ ಬಂದರೂ ಭಾಷೆ ಹಾಗೂ ಸಂಸ್ಕೃತಿ ಗೌರವಿಸಬೇಕು’ ಎಂದಿದ್ದಾರೆ ರಾಗಿಣಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
