Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವಾತಂತ್ರ್ಯೋತ್ಸವ ದಿನಾಚರಣೆಯ ಕಾರ್ಯಕ್ರಮಗಳಲ್ಲಿ ಭಾಗಿಯಾದ ಬಳಿಕ ಸಿದ್ದರಾಮಯ್ಯ ಮತ್ತು ಡಿಕೆ ಶಿವಕಮಾರ್ ಒಟ್ಟಿಗೆ ಹೋಟೆಲೊಂದಕ್ಕೆ ಊಟಕ್ಕೆ ಹೊರಟರು!

ಸ್ವಾತಂತ್ರ್ಯೋತ್ಸವ ದಿನಾಚರಣೆಯ ಕಾರ್ಯಕ್ರಮಗಳಲ್ಲಿ ಭಾಗಿಯಾದ ಬಳಿಕ ಸಿದ್ದರಾಮಯ್ಯ ಮತ್ತು ಡಿಕೆ ಶಿವಕಮಾರ್ ಒಟ್ಟಿಗೆ ಹೋಟೆಲೊಂದಕ್ಕೆ ಊಟಕ್ಕೆ ಹೊರಟರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 15, 2023 | 4:56 PM

ಗಣ್ಯರ ಜೊತೆ ಅಷ್ಟೆಲ್ಲ ಆಧಿಕಾರಿಗಳು, ಭದ್ರತಾ ಸಿಬ್ಬಂದಿ ಇರುತ್ತಾರಲ್ಲ? ಆಫ್ ಕೋರ್ಸ್ ಅವರು ಕೂಡ ಹಸಿದಿರುತ್ತಾರೆ. ಅಂದರೆ ಸಿದ್ದರಾಮಯ್ಯ ಆಗಲೀ, ಶಿವಕುಮಾರ್ ಆಗಲೀ ಅಥವಾ ಬೇರೆ ಯಾವುದೇ ಸಚಿವನಾಗಲೀ; ತಮ್ಮೊಂದಿಗಿರುವ ಜನ-ಅಧಿಕಾರಿ, ಭದ್ರತಾ ಸಿಬ್ಬಂದಿ, ಕಾರ್ಯಕರ್ತರಿಗೂ ಊಟ ಕೊಡಿಸುತ್ತಾರೆಯೇ?

ಬೆಂಗಳೂರು: ಸ್ವಾತಂತ್ರ್ಯೋತ್ಸವ ದಿನಾಚರಣೆ (Independence Day Celebrations) ಅಂಗವಾಗಿ ನಗರದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮಗಳಲ್ಲಿ ಭಾಗಿಯಾದ ಬಳಿಕ ಹಸಿದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ನಗರದ ಖ್ಯಾತ ಖಾಸಗಿ ಹೋಟೆಲೊಂದರಲ್ಲಿ ಒಟ್ಟಿಗೆ ಊಟಮಾಡಿದರು. ಇಬ್ಬರೂ ಉನ್ನತ ಹುದ್ದೆಗಳಲ್ಲಿರುವುದರ ಜೊತೆಗೆ ಜನಪ್ರಿಯ ನಾಯಕರೂ ಆಗಿರುವುದರಿಂದ ಹೋದೆಡೆಯೆಲ್ಲ ಸಹಜವಾಗೇ ಜನ ಅವರನ್ನು ಸುತ್ತುವರಿದು ಬಿಡುತ್ತಾರೆ. ಭದ್ರತಾ ಸಿಬ್ಬಂದಿ ಇಲ್ಲವೇ ಅಧಿಕಾರಿಗಳು ಅವರಿಗೆ ದಾರಿ ಮಾಡಿಕೊಡಬೇಕಾಗುತ್ತದೆ. ಆದರೆ ನಮಗಿರುವ ಗೊಂದಲ ಅದಲ್ಲ. ಈ ಗಣ್ಯರ ಜೊತೆ ಅಷ್ಟೆಲ್ಲ ಆಧಿಕಾರಿಗಳು, ಭದ್ರತಾ ಸಿಬ್ಬಂದಿ ಇರುತ್ತಾರಲ್ಲ? ಆಫ್ ಕೋರ್ಸ್ ಅವರು ಕೂಡ ಹಸಿದಿರುತ್ತಾರೆ. ಅಂದರೆ ಸಿದ್ದರಾಮಯ್ಯ ಆಗಲೀ, ಶಿವಕುಮಾರ್ ಆಗಲೀ ಅಥವಾ ಬೇರೆ ಯಾವುದೇ ಸಚಿವನಾಗಲೀ; ತಮ್ಮೊಂದಿಗಿರುವ ಜನ-ಅಧಿಕಾರಿ, ಭದ್ರತಾ ಸಿಬ್ಬಂದಿ, ಕಾರ್ಯಕರ್ತರಿಗೂ ಊಟ ಕೊಡಿಸುತ್ತಾರೆಯೇ? ಇದರ ಬಗ್ಗೆಯಂತೂ ಜನಸಾಮಾನ್ಯರಲ್ಲಿ ವಿಪರೀತ ಕುತೂಹಲವಿದೆ ಮಾರಾಯ್ರೇ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ