ಇಂದು ಆಷಾಢ ಅಮಾವಾಸ್ಯೆ: ಈ ದಿನದ ವಿಶೇಷ ಸಹಿತ 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ

Updated on: Jul 14, 2026 | 6:44 AM

ಜುಲೈ 14, 2026 ರ ಮಂಗಳವಾರದ ದೈನಂದಿನ ರಾಶಿ ಭವಿಷ್ಯವನ್ನು ಡಾ. ಬಸವರಾಜ ಗುರೂಜಿ ‘ಟಿವಿ9 ಕನ್ನಡ ಡಿಜಿಟಲ್’ ವಾಹಿನಿಯಲ್ಲಿ ಪ್ರಸ್ತುತಪಡಿಸಿದ್ದಾರೆ. ಆಷಾಢ ಅಮಾವಾಸ್ಯೆಯ ವಿಶೇಷ ಮಹತ್ವ, ಗೋಪೂಜೆಯ ಫಲ ಮತ್ತು ಪ್ರತಿ ರಾಶಿಯವರಿಗೆ ಆರ್ಥಿಕ, ವೈವಾಹಿಕ, ವೃತ್ತಿಜೀವನ, ಆರೋಗ್ಯ ವಿಷಯಗಳಲ್ಲಿನ ಫಲಾಫಲಗಳನ್ನು ವಿವರಿಸಿದ್ದಾರೆ.

ಇಂದು ಜುಲೈ 14, 2026 ರ ಮಂಗಳವಾರ, ಪರಾಭವನಾಮ ಸಂವತ್ಸರ, ಉತ್ತರಾಯಣ, ಜೇಷ್ಠ ಮಾಸ, ಕೃಷ್ಣಪಕ್ಷ ಅಮಾವಾಸ್ಯೆ ತಿಥಿ ಮತ್ತು ಪುನರ್ವಸು ನಕ್ಷತ್ರ ಇದ್ದು, ಈ ದಿನದ ದೈನಂದಿನ ರಾಶಿ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ತಜ್ಞ ಡಾ. ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ. ವಿಶೇಷವಾಗಿ ಇದು ಆಷಾಢ ಅಮಾವಾಸ್ಯೆ ದಿನವಾಗಿದ್ದು, ಗೋಪೂಜೆ ಮತ್ತು ದಾನಕ್ಕೆ ಮಹತ್ವ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಅಮಾವಾಸ್ಯೆಯಂದು ಗೋಪೂಜೆ ಮಾಡುವುದು ಕರ್ಮ ಫಲಗಳನ್ನು ಕಡಿಮೆ ಮಾಡುತ್ತದೆ ಎಂದು ತಿಳಿಸಲಾಗಿದೆ. ರವಿ ಮತ್ತು ಚಂದ್ರ ಮಿಥುನ ರಾಶಿಯಲ್ಲಿ ಸಂಚರಿಸುತ್ತಿರುವುದರಿಂದ ರೈತರು ಸಡಗರದಿಂದ ಹಬ್ಬವನ್ನು ಆಚರಿಸುತ್ತಾರೆ. ಉತ್ತರ ಕರ್ನಾಟಕದಲ್ಲಿ ಗೋವುಗಳಿಗೆ ಅಲಂಕಾರ ಮಾಡಿ, ಮಣ್ಣಿನ ಗೋವುಗಳನ್ನು ಪೂಜಿಸುವ ಸಂಪ್ರದಾಯವಿದೆ. ವಿವಾಹ, ಸಂತಾನ, ಕೌಟುಂಬಿಕ ಕಲಹಗಳು ಮತ್ತು ಭೂಮಿಯ ವಿವಾದಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಈ ಅಮಾವಾಸ್ಯೆ ಬಹಳ ಪ್ರಬಲವಾಗಿದೆ ಎಂದು ಗುರೂಜಿ ಹೇಳಿದ್ದಾರೆ. ಜಪ, ತಪ ಮತ್ತು ದಾನಕ್ಕೆ ಇದು ಅತ್ಯಂತ ಶುಭ ದಿನ ಎಂದು ಅವರು ಹೇಳಿದ್ದಾರೆ. ಜತೆಗೆ, ದ್ವಾದಶ ರಾಶಿಗಳಾದ ಮೇಷದಿಂದ ಮೀನದವರೆಗಿನ ರಾಶಿಗಳ ಫಲಾಫಲ, ಹಣಕಾಸು, ವೃತ್ತಿ, ಸಂಬಂಧಗಳು ಮತ್ತು ಆರೋಗ್ಯದ ಕುರಿತು ವಿವರವಾದ ಮಾಹಿತಿಯನ್ನು ಒದಗಿಸಿದ್ದಾರೆ.

Follow Us