ಬಾದಾಮಿ ಗುಂಪು ಘರ್ಷಣೆ ಪ್ರಕರಣ: ಮಹಿಳೆ ಎಸೆದ ಹಣವನ್ನು ವಾಪಸ್ ನೀಡಲಾಗಿದೆ: ಸಿದ್ದರಾಮಯ್ಯ ಹೇಳಿಕೆ
ಮಹಿಳೆ ಎಸೆದ ಹಣವನ್ನು ವಾಪಸ್ ನೀಡಲಾಗಿದೆ, ಅದನ್ನು ಅವರು ಸ್ವೀಕರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬಾಗಲಕೋಟೆ: ಬಾದಾಮಿ ತಾಲೂಕಿನ ಕೆರೂರಿನಲ್ಲಿ ಗುಂಪುಘರ್ಷಣೆ ಪ್ರಕರಣ ಸಂಬಂಧ ಗಾಯಾಳುಗಳಾದ ಮೊಹ್ಮದ್ ಹನಿಫ್, ದಾವಲ್ಮಲಿಕ್ ಹಾಗೂ ರಾಜೆಸಾಬ್. ರಫೀಕ್ ಆರೋಗ್ಯ ವಿಚಾರಿಸಲು ತೆರಳಿದ್ದ ಸಿದ್ದರಾಮಯ್ಯ ಅವರು ಕುಟುಂಬಕ್ಕೆ ಸಾಂತ್ವನ ಪರಿಹಾರ ನೀಡಿದ್ದಾರೆ. ಈ ವೇಳೆ ಮಹಿಳೆಯೊಬ್ಬರು, ನಮಗೆ ಹಣ ಬೇಡ ನಮಗೆ ಶಾಂತಿ ಬೇಕು ಎಂದು ಹಣವನ್ನು ಎಸೆದಿದ್ದರು. ಈ ಸಂಬಂಧ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಹಣವನ್ನು ಬೇರೆಯವರ ಕೈಗೆ ಕೊಟ್ಟು ಅವರನ್ನು ಒಪ್ಪಿಸಿ ವಾಪಸ್ ಕೊಡುವಂತೆ ಹೇಳಿ ಬಂದಿದ್ದೇನೆ. ನನ್ನ ಪ್ರಕಾರ ಅವರು ಹಣ ತೆಗೆದುಕೊಳ್ಳಲು ಒಪ್ಪಿಕೊಳ್ಳುತ್ತಾರೆ ಎಂದು ಅಂದುಕೊಂಡಿದ್ದೇನೆ. ಕಷ್ಟದಲ್ಲಿರುವವರಿಗೆ ಅನುಕೂಲವಾಗಲಿ ಎಂದು ಮಾನವೀಯತೆ ದೃಷ್ಟಿಯಿಂದ ನೀಡಲಾಗಿದೆ ಎಂದರು.
Follow Us
Latest Videos
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಬಂಗಾಳದಲ್ಲಿ ಜಂಗಲ್ ರಾಜ್ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ

