ಬಳ್ಳಾರಿ ಜೈಲಲ್ಲಿ ವಾರ್ಡನ್​ಗಳೇ ಕ್ಯಾಂಟೀನ್ ನಡೆಸುತ್ತಾರೆ, ಗಾಂಜಾ ಯಥೇಚ್ಛವಾಗಿ ಸಿಗುತ್ತದೆ: ಮಾಜಿ ಕೈದಿ

ಅರುಣ್​ ಕುಮಾರ್​ ಬೆಳ್ಳಿ

Updated on: Aug 28, 2024 | 1:43 PM

ಬಳ್ಳಾರಿ ಜೈಲಿನಲ್ಲಿ ವಾರ್ಡನ್ ಗಳೇ ಕ್ಯಾಂಟೀನ್ ನಡೆಸುತ್ತಾರಂತೆ! ದರ್ಶನ್ ಅವರನ್ನು ಇಲ್ಲಿ ಸಾಗಹಾಕುತ್ತಿರುವುದು ಸರ್ಕಾರದ ಒಳ್ಳೆಯ ನಿರ್ಧಾರವೇನೂ ಅಲ್ಲ, ಗಾಂಜಾ ಮತ್ತು ಇತರ ಮಾದಕ ವಸ್ತುಗಳು ಯಥೇಚ್ಛವಾಗಿ ಸಿಗುವ ಇಲ್ಲಿನ ಜೈಲಿನಲ್ಲಿ ದರ್ಶನ್ ಮತ್ತಷ್ಟು ಕೆಟ್ಟು ಹೋಗಬಹುದೆಂಬ ಕಳಕಳಿಯನ್ನು ಜಯಸಿಂಹ ವ್ಯಕ್ತಡಿಸುತ್ತಾರೆ.

ಬಳ್ಳಾರಿ: ಸರ್ಕಾರವೇನೋ ಕೊಲೆ ಆರೋಪಿ ದರ್ಶನ್​ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುತ್ತಿದೆ. ಅದರೆ ಕೊಲೆ ಅಪರಾಧದಲ್ಲಿ 4 ವರ್ಷಗಳ ಕಾಲ ಬಳ್ಳಾರಿ ಜೈಲಲ್ಲಿದ್ದು 2021ರಲ್ಲಿ ಬಿಡುಗಡೆಯಾಗಿರುವ ಜಯಸಿಂಹ ಹೇಳುವ ಪ್ರಕಾರ ಇಲ್ಲಿನ ಜೈಲು ಬೆಂಗಳೂರು ಜೈಲಿಗಿಂತ ಕೆಟ್ಟ ಸ್ಥಿತಿಯಲ್ಲಿದೆಯಂತೆ. ಹಣ ನೀಡಿದರೆ ವಾರ್ಡನ್ ಗಳು ಯಾವುದೇ ವಸ್ತು ಬೇಕಾದರೂ ಒದಗಿಸುತ್ತಾರೆ ಎಂದು ಅವರು ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ದರ್ಶನ್​ ಬರಮಾಡಿಕೊಳ್ಳಲು ಬಳ್ಳಾರಿ ಸೆಂಟ್ರಲ್​ ಜೈಲಿನಲ್ಲಿ ಹೇಗೆಲ್ಲಾ ಸಿದ್ಧತೆಗಳು ನಡೆದಿವೆ ನೋಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.