ಮುಗಿಲು ಮುಟ್ಟಿದ ಲಾವಣ್ಯ ತಾಯಿಯ ಆಕ್ರಂದನ: ನನ್ನ ಮಗಳು ನನಗೆ ಬೇಕು, ಕೊಲೆಗಡುಕನನ್ನು ನನ್ನ ಮುಂದೇ ನಿಲ್ಲಿಸಿ
ಬಂಟ್ವಾಳದ ಬಿ.ಸಿ.ರೋಡ್ನಲ್ಲಿ ಯುವತಿ ಲಾವಣ್ಯ ಬರ್ಬರ ಹತ್ಯೆಗೀಡಾಗಿದ್ದು, ಆರೋಪಿ ಚೇತನ್ನಿಂದ ಕೊಲೆಯಾಗಿದೆ. ಲಾವಣ್ಯ ತನ್ನ ಭಾವ ಗೌತಮ್ರೊಂದಿಗೆ ಫೋನ್ನಲ್ಲಿ ಮಾತನಾಡುತ್ತಿದ್ದಾಗಲೇ ಈ ದುರ್ಘಟನೆ ಸಂಭವಿಸಿದೆ. ದೂರವಾಣಿ ಸಂಭಾಷಣೆಯಲ್ಲಿಯೇ ಗೌತಮ್ ಹತ್ಯೆಯ ಘಟನೆಯನ್ನು ಕೇಳಿ ಆಘಾತಕ್ಕೊಳಗಾಗಿದ್ದಾರೆ. ಈ ಘಟನೆ ಲಾವಣ್ಯ ಕುಟುಂಬಸ್ಥರಲ್ಲಿ ತೀವ್ರ ನೋವು ಮತ್ತು ಆಕ್ರಂದನಕ್ಕೆ ಕಾರಣವಾಗಿದೆ.
ಮಂಗಳೂರು, ಜು.17: ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ. ರೋಡ್ನಲ್ಲಿ ನಡೆದ ಯುವತಿ ಲಾವಣ್ಯಳ ಕ್ರೂರ ಹತ್ಯೆ ಇಡೀ ಸಮಾಜವೇ ತಲೆತಗ್ಗಿಸುವಂತೆ ಮಾಡಿದೆ. ಈ ಅಮಾನವೀಯ ಕೃತ್ಯದಿಂದಾಗಿ ಲಾವಣ್ಯ ಅವರ ಇಡೀ ಕುಟುಂಬ ಇಂದು ತೀವ್ರ ಆಘಾತದಲ್ಲಿದ್ದು, ಸಂತ್ರಸ್ತೆಯ ತಾಯಿಯ ಆಕ್ರಂದನ ನೆರೆದಿದ್ದವರ ಕಣ್ಣುಗಳನ್ನು ಒದ್ದೆಯಾಗಿಸಿದೆ. ಈ ವೇಳೆ ಲಾವಣ್ಯ ಅವರ ತಾಯಿ, ಕೊಲೆಗಡುಕನ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. “ನನ್ನ ಮಗಳು ನನಗೆ ಬೇಕು… ಅವನನ್ನು ನನ್ನೆದುರಿಗೇ ಕರೆದುಕೊಂಡು ಬನ್ನಿ, ನಾನೇ ಅವನನ್ನು ಕೊಲೆ ಮಾಡುತ್ತೇನೆ. ಅವನು ಯಾವುದೇ ಕಾರಣಕ್ಕೂ ಜೀವಂತವಾಗಿ ಉಳಿಯಬಾರದು. ನನ್ನ ಮುಗ್ಧ ಮಗಳು ಆತನಿಗೆ ಅಂತಹದ್ದೇನು ಮಾಡಿದ್ದಳು? ನನ್ನ ಮಗಳಿಗೆ ಇಂತಹ ಕ್ರೂರ ಸ್ಥಿತಿ ತಂದಿಟ್ಟಿದ್ದಾನೆ, ಅವನಿಗೂ ಅದೇ ಸ್ಥಿತಿ ಬರಬೇಕು. ಅದೇ ಪರಿಸ್ಥಿತಿಯಲ್ಲಿ ನಾನು ಆತನನ್ನು ಕಣ್ಣಾರೆ ನೋಡಬೇಕು.” ಎಂದು ತೀವ್ರ ನೋವಿನಿಂದ ಲಾವಣ್ಯ ಅವರ ತಾಯಿ ಹೇಳಿಕೊಂಡಿದ್ದಾರೆ. ಕೇವಲ ಕುಟುಂಬಸ್ಥರು ಮಾತ್ರವಲ್ಲದೆ, ಇಡೀ ರಾಜ್ಯದ ಸಾರ್ವಜನಿಕ ವಲಯದಲ್ಲಿ ಈ ಘಟನೆಯ ವಿರುದ್ಧ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಅಮಾಯಕ ಯುವತಿಯನ್ನು ಬಸ್ ನಿಲ್ದಾಣದಂತಹ ಸಾರ್ವಜನಿಕ ಸ್ಥಳದಲ್ಲೇ ಬರ್ಬರವಾಗಿ ಕೊಚ್ಚಿ ಕೊಂದಿರುವುದಕ್ಕೆ ಎಲ್ಲೆಡೆ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
