ಒಡವೆ ಮಾಡಬೇಕು ಎಂಬುವುದು ಬಹಳ ಜನರ ಆಸೆ ಆಗಿರುತ್ತೆ. ಹೀಗಾಗಿ ಅಲ್ಪ-ಸ್ವಲ್ಪ ಹಣ ಕೂಡಿಟ್ಟು, ಚೀಟಿ ಹಾಕಿ ಒಡವೆ ತಗೋತಾರೆ. ನಾವು ಖರೀದಿಸುವ ಚಿನ್ನಾಭರಣಗಳು ನಮ್ಮ ಕಷ್ಟದ ಸಮಯಕ್ಕೆ ಅನುಕೂಲವಾಗುತ್ತವೆ. ಆದರೆ ಬಹುತೇಕ ಬಾರಿ ನಾವು ಇಷ್ಟಪಟ್ಟು ಖರೀದಿಸಿದ್ದ ಒಡವೆಗಳು ನಮ್ಮ ಬಳಿಯೇ ಇರುವುದಿಲ್ಲ. ಒಂದಲ್ಲಾ ಒಂದು ಕಾರಣದಿಂದ ಬ್ಯಾಂಕ್ಗೋ, ಗಿರವಿ ಅಂಗಡಿನೋ ಅಥವಾ ಸಾಲ ಕೊಟ್ಟವರ ಬಳಿ ಸೇರುತ್ತೆ. ಇಷ್ಟ ಪಟ್ಟು ಖರೀದಿಸಿದ್ದು ಖುಷಿಯಾಗಿ ಧರಿಸುವ ಭಾಗ್ಯ ಸಿಗುವುದಿಲ್ಲ. ಹೀಗಾಗಿ ಈ ರೀತಿಯ ಎಲ್ಲಾ ಸಮಸ್ಯೆಗಳಿಂದ ದೂರ ಇರಲು ಏನು ಮಾಡಬೇಕು? ನೀವು ಖರೀದಿಸಿದ ಚಿನ್ನ ನಿಮ್ಮ ಬಳಿಯೇ ಇರುವಂತೆ ಮಾಡಲು ಏನು ಮಾಡಬೇಕು? ಹಾಗೂ ಯಾವ ವಾರ ಚಿನ್ನ ಖರೀದಿಸಿದರೆ ಶುಭ ಎಂಬ ಎಲ್ಲಾ ಮಾಹಿತಿಯನ್ನೂ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಈ ವಿಡಿಯೋದಲ್ಲಿ ವಿವರಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ