ಕಣ್ಣಿನ ಆಪರೇಷನ್​ಗೆ ವರದಾನವಾದ ಗೃಹಲಕ್ಷ್ಮಿ ಹಣ

| Updated By: ವಿವೇಕ ಬಿರಾದಾರ

Updated on: Sep 02, 2024 | 11:24 AM

ಬೆಳಗಾವಿಯ ಅನಗೋಳ ನಗರದಲ್ಲಿ ಅನಿತಾ ಎಂಬುವರು ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ಪಡೆಯುತ್ತಿದ್ದರು. ಇದೇ ಹಣದಲ್ಲಿ ಅನಿತಾ ಅವರು ಪತಿ ಚಂದ್ರಶೇಖರ್​ ಅವರ ಕಣ್ಣಿನ ಆಪರೇಷನ್​ ಮಾಡಿಸಿದ್ದಾರೆ. ದಂಪತಿ ಮುಖ್ಯಮಂತ್ರಿಗಳಿಗೆ ಧನ್ಯವಾದ ಸಮರ್ಪಿಸಿದ್ದಾರೆ.

ಬೆಳಗಾವಿ, ಸೆಪ್ಟೆಂಬರ್​​ 02: ಕರ್ನಾಟಕ ಕಾಂಗ್ರೆಸ್​ ಸರ್ಕಾರದ (Congress Government) ಗೃಹಲಕ್ಷ್ಮಿ (Gruha Lakshmi) ಹಣದಿಂದ ಮಹಿಳೆಯೊಬ್ಬರು ಪತಿಯ ಕಣ್ಣಿನ ಆಪರೇಷನ್ (Eye Operation)​ ಮಾಡಿಸಿದ್ದಾರೆ. ಬೆಳಗಾವಿಯ ಅನಗೋಳ ನಗರದಲ್ಲಿ ಅನಿತಾ ಮತ್ತು ಚಂದ್ರಶೇಖರ್ ಬಡಿಗೇರ ​ದಂಪತಿ ವಾಸವಾಗಿದ್ದಾರೆ. ಅನಿತಾ ಪತಿ ಚಂದ್ರಶೇಖರ್​ ಅವರಿಗೆ ದೃಷ್ಟಿ ದೋಷದ ಸಮಸ್ಯೆ ಕಾಡುತ್ತಿತ್ತು. ಆಪರೇಷನ್​ ಮಾಡಿಸಲು ನಿರ್ಧರಿಸಿದರು. ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣವನ್ನು ಅನಿತಾ ಕೂಡಿಟ್ಟಿದ್ದರು. ಗೃಹಲಕ್ಷ್ಮಿಯಿಂದ ಬಂದ 18 ಸಾವಿರ ರೂ. ಮತ್ತು ತನ್ನ ಬಳಿ ಇದ್ದ 10 ಸಾವಿರ ಹಣ ಸೇರಿಸಿ ಪತಿ ಚಂದ್ರಶೇಖರ್​ ಅವರ ಕಣ್ಣಿನ ಆಪರೇಷನ್​ ಮಾಡಿಸಿದ್ದಾರೆ. ಆಪರೇಷನ್​ ಸಕ್ಸಸ್​ ಆಗಿದೆ. ಪತಿಯ ಕಣ್ಣಿನ ಆಪರೇಷನ್​ಗೆ ಗೃಹಲಕ್ಷ್ಮಿ ಹಣ ನೆರವಾಗಿದ್ದಕ್ಕೆ ದಂಪತಿಗಳು ವಿಡಿಯೋ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow us on