ಅತಿಥಿ ಸತ್ಕಾರದಿಂದ ಏನು ಪ್ರಯೋಜನ?

Updated on: Jun 10, 2024 | 7:06 AM

ನಮ್ಮ ಹಿಂದೂ ಪುರಾಣಗಳಲ್ಲಿ ಉಲ್ಲೇಖಿಸಿದಂತೆ ಅತಿಥಿಗಳ್ಯಾರಾದರು ಮನೆಗೆ ಬಂದರೆ ಅವರನ್ನು ದೇವರೇ ಬಂದಂತೆ ನೋಡಬೇಕು. ಕಾಲು ತೊಳೆದು, ನೀರು ಕೊಟ್ಟು , ಊಟ ಬಡಿಸಿ, ವಿಶ್ರಾಂತಿ ನೀಡಿ ಸತ್ಕರಿಸಬೇಕು, ಸೇವೆ ಮಾಡಬೇಕು. ಇದರಿಂದ ದೇವರ ಸೇವೆಯಷ್ಟೇ ಫಲ ಸಿಗುತ್ತೆ ಎನ್ನಲಾಗುತ್ತೆ.

ಏಹ್ಯಾಗಚ್ಛ ಸಮಾಶ್ರಯಾಸನಮಿದಂ ಕಸ್ಮಾಚ್ಚಿರಾದ್ದೃಶ್ಯಸೇ
ಕಾ ವಾರ್ತಾ ಹ್ಯತಿದುರ್ಬಲೋಽಸಿ ಕುಶಲಂ ಪ್ರೀತೋಽಸ್ಮಿ ತೇ ದರ್ಶನಾತ್ ।
ಏವಂ ಯೇ ಸಮುಪಾಗತಾನ್ಪ್ರಣಯಿನಃ ಪ್ರಹ್ಲಾದಯಂತ್ಯಾದರಾತ್‌
ತೇಷಾಂ ಯುಕ್ತಮಶಂಕಿತೇನ ಮನಸಾ ಹರ್ಮ್ಯಾಣಿ ಗಂತುಂ ಸದಾ ॥

ನಮ್ಮ ಸನಾತನ ಹಿಂದೂ ಧರ್ಮದಲ್ಲಿ ಅತಿಥಿ ಸರ್ಕಾರಕ್ಕೆ ವಿಶೇಷ ಮಹತ್ವವಿದೆ. ಅತಿಥಿ ದೇವೋ ಭವ ಎಂಬಂತೆ ಅತಿಥಿಗಳನ್ನು ದೇವರ ರೂಪದಲ್ಲಿ ನೋಡಲಾಗುತ್ತೆ. ಅತಿಥಿ ಸತ್ಕಾರದಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಈ ವಿಡಿಯೋದಲ್ಲಿ ವಿವರಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow Us
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Read More