ಬೆಂಗಳೂರಿನಲ್ಲಿ ‘ತೆಂಗಿನಕಾಯಿ ಕಳ್ಳಿ’ಯ ಹಾವಳಿ! ಮಾಲೀಕ ಕಾದು ಕುಳಿತಿದ್ದರೂ ಬುಟ್ಟಿಗೆ 15 ಕಾಯಿ ಹಾಕ್ಕೊಂಡು ಹೋದ ಮಹಿಳೆ

Updated on: Apr 16, 2026 | 12:14 PM

ಬೆಂಗಳೂರಿನ ನಾಗಪುರದಲ್ಲಿ ವಿಚಿತ್ರ ತೆಂಗಿನಕಾಯಿ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. 'ಶ್ರೀ ಲಕ್ಷ್ಮೀದೇವಿ ರೈಸ್ ಕಾರ್ನರ್' ಅಂಗಡಿಯಲ್ಲಿ ಮಹಿಳೆಯೊಬ್ಬರು ಸತತವಾಗಿ ತೆಂಗಿನಕಾಯಿಗಳನ್ನು ಕದಿಯುತ್ತಿದ್ದು, ಸಿಸಿಟಿವಿಯಲ್ಲಿ ದೃಶ್ಯ ದಾಖಲಾಗಿದೆ. ಇದು ಮೊದಲ ಬಾರಿಯಲ್ಲ, ಆಕೆಯ ಹಳೆಯ ಅಭ್ಯಾಸ. ಮಹಾಲಕ್ಷ್ಮೀ ಲೇಔಟ್ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸಣ್ಣ ವ್ಯಾಪಾರಿಗಳ ಮೇಲೆ ಇಂತಹ ಕೃತ್ಯಗಳು ಪರಿಣಾಮ ಬೀರುತ್ತಿವೆ.

ಬೆಂಗಳೂರು, ಏ.16: ರಾಜಧಾನಿಯ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ನಾಗಪುರದಲ್ಲಿ ವಿಚಿತ್ರ ಕಳ್ಳತನ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿನ ‘ಶ್ರೀ ಲಕ್ಷ್ಮೀದೇವಿ ರೈಸ್ ಕಾರ್ನರ್’ ಎಂಬ ಅಂಗಡಿಯಲ್ಲಿ ಮಹಿಳೆಯೊಬ್ಬರು ಸತತವಾಗಿ ತೆಂಗಿನಕಾಯಿಗಳನ್ನು ಕದಿಯುತ್ತಿದ್ದು, ಅಂಗಡಿ ಮಾಲೀಕರಿಗೆ ತಲೆನೋವಾಗಿ ಪರಿಣಮಿಸಿದ್ದಾರೆ. ನಿನ್ನೆ (ಏಪ್ರಿಲ್ 15, 2026) ಬೆಳಗಿನ ಜಾವ ಸುಮಾರು 3 ಗಂಟೆಗೆ ಮಹಿಳೆಯೊಬ್ಬರು ಅಂಗಡಿಯ ಆವರಣಕ್ಕೆ ನುಗ್ಗಿ ಸುಮಾರು 15 ತೆಂಗಿನಕಾಯಿಗಳನ್ನು ಕದ್ದಿದ್ದಾರೆ. ಈ ದೃಶ್ಯವು ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಇದು ಮೊದಲ ಬಾರಿಯಲ್ಲ; ಇದೇ ಮಹಿಳೆ ಈ ಹಿಂದೆಯೂ ಇದೇ ಅಂಗಡಿಯಿಂದ ತೆಂಗಿನಕಾಯಿಗಳನ್ನು ಕದ್ದಿದ್ದರು ಎಂದು ತಿಳಿದುಬಂದಿದೆ. ಇದು ಒಂದು ಸಲದ ಆಕಸ್ಮಿಕವಲ್ಲ, ಬದಲಿಗೆ ಆಕೆಯ ಹಳೆಯ ಅಭ್ಯಾಸ ಎಂಬುದು ಮಾಲೀಕರ ವಾದ. ಕಳೆದ ಒಂದು ವಾರದಿಂದ ಅಂಗಡಿ ಮಾಲೀಕರು ಈ ಕಳ್ಳಿಯನ್ನು ಹಿಡಿಯಲು ಹದ್ದಿನ ಕಣ್ಣಿಟ್ಟು ಕಾದು ಕುಳಿತಿದ್ದರು. ಆದರೂ, ಮಾಲೀಕರ ಕಣ್ತಪ್ಪಿಸಿ ಮಹಿಳೆಯು ಪುನಃ ಕಳ್ಳತನ ಮಾಡುವಲ್ಲಿ ಯಶಸ್ವಿಯಾಗಿದ್ದಾಳೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಮಹಾಲಕ್ಷ್ಮೀ ಲೇಔಟ್ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಪದೇ ಪದೇ ಇಂತಹ ಸಣ್ಣಪುಟ್ಟ ಕಳ್ಳತನಗಳು ನಡೆಯುತ್ತಿರುವುದು ಸಣ್ಣ ವ್ಯಾಪಾರಿಗಳ ಜೀವನದ ಮೇಲೆ ಪರಿಣಾಮ ಬೀರುತ್ತಿದ್ದು, ಪೊಲೀಸರು ಆರೋಪಿಯನ್ನು ಪತ್ತೆಹಚ್ಚಲು ಕ್ರಮ ಕೈಗೊಂಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us