ನಮ್‌ ರೋಡ್‌ ಹಿಂಗ್ಯಾಕಿದೆ; ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಬೇಸತ್ತು ಪಿಎಂ, ಸಿಎಂ ಗೆ ಪತ್ರ ಬರೆದ ಶಾಲಾ ಮಕ್ಕಳು

Updated on: Sep 16, 2025 | 7:06 PM

ಎಲ್ಲಿ ನೋಡಿದ್ರೂ ರಸ್ತೆ ಗುಂಡಿಗಳದ್ದೇ ಸಮಸ್ಯೆ. ಇದೀಗ ಈ ಸಮಸ್ಯೆಯಿಂದ ಬೇಸತ್ತು ಬೆಂಗಳೂರಿನ ಶಾಲಾ ಮಕ್ಕಳು ನಮ್‌ ರೋಡ್‌ ಹಿಂಗ್ಯಾಕಿದೆ ಎಂದು ಪ್ರಧಾನಿ ಮೋದಿ ಮತ್ತು ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ. ಕರೆಂಟ್‌ಗೂ ಟ್ಯಾಕ್ಸ್‌ ನೀರಿಗೂ ಟ್ಯಾಕ್ಸ್‌ ಕಟ್ತಾರೆ ಆದ್ರೆ ನಮ್‌ ರೋಡ್‌ ಯಾಕೆ ಹೀಗಿದೆ ಎಂದು ಪ್ರಶ್ನೆ ಮಾಡಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್‌ 16: ಈಗಂತೂ ಎಲ್ಲಿ ನೋಡಿದ್ರೂ ಹದಗೆಟ್ಟ ರಸ್ತೆಗಳ (Bad Roads) ಸಮಸ್ಯೆಗಳೇ ಹೆಚ್ಚಾಗಿದೆ. ಈ ಹದಗೆಟ್ಟ ರಸ್ತೆಯ ಕಾರಣದಿಂದಾಗಿ ವಾಹನಗಳ ಸಂಚಾರಕ್ಕೆ ಟಡ್ಡಿಯಾಗುವುದು ಮಾತ್ರವಲ್ಲದೆ, ವಾಹನಗಳು ಅಪಘಾತಕ್ಕೀಡಾಗುತ್ತಿವೆ. ಇದೀಗ ಈ ಸಮಸ್ಯೆಯಿಂದ ಬೇಸತ್ತು ಬೆಂಗಳೂರಿನ ಸ್ಕೂಲ್‌ ಮಕ್ಕಳು ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರವನ್ನು ಬರೆದಿದ್ದಾರೆ. ಕರೆಂಟ್‌ಗೂ ಟ್ಯಾಕ್ಸ್‌, ನೀರಿಗೂ ಟ್ಯಾಕ್ಸ್‌ ಕಟ್ಟುತ್ತೇವೆ, ಆದರೂ ನಮ್‌ ರೋಡ್‌ ಯಾಕ್‌ ಹೀಗಿದೆ, ಎಲ್ಲಿ ನೋಡಿದ್ರೂ ಗುಂಡಿಗಳೇ ತುಂಬಿವೆ. ಮೋದಿ ತಾತ… ಸಿದ್ದರಾಮಯ್ಯ ತಾತ… ನಮ್‌ ರೋಡ್‌ ಯಾವಾಗ ಸರಿ ಮಾಡ್ತೀರಾ ಎಂದು ಮನವಿ ಮಾಡಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

Follow Us
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More