ಸ್ಪಂದನಾ ಸೇವ್ ಆಗಿದ್ದು ಸರಿಯಲ್ಲ; ನೇರವಾಗಿ ಆರೋಪಿಸಿದ ಮಾಳು
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಮಾಳು ಅವರು ಎಲಿಮಿನೇಟ್ ಆಗಿದ್ದಾರೆ. ಅವರ ಎಲಿಮಿನೇಷನ್ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಈಗ ಸ್ಪಂದನಾ ಅವರು ಉಳಿದುಕೊಂಡು, ಮಾಳು ಎಲಿಮಿನೇಟ್ ಆಗಿದ್ದು ಚರ್ಚೆ ಹುಟ್ಟುಹಾಕಿದೆ. ಈ ಬಗ್ಗೆ ಮಾಳು ಅವರು ಗಂಭೀರ ಆರೋಪ ಮಾಡಿದ್ದಾರೆ. ಅವರು ಹೇಳಿದ್ದು ಏನು? ಆ ಬಗ್ಗೆ ಇಲ್ಲಿದೆ ವಿವರ.
ಉತ್ತರ ಕರ್ನಾಟಕ ಪ್ರತಿಭೆ ಮಾಳು ಅವರು ಬಿಗ್ ಬಾಸ್ನಿಂದ ಹೊರ ಬಂದಿದ್ದಾರೆ. ಅವರು ಎಲಿಮಿನೇಟ್ ಆದ ಬಗ್ಗೆ ಅವರಿಗೆ ಬೇಸರ ಇದೆ. ಸ್ಪಂದನಾ ಇನ್ನೂ ಬಿಗ್ ಬಾಸ್ನಲ್ಲಿ ಇರುವುದನ್ನು ಅವರು ಪ್ರಶ್ನೆ ಮಾಡಿದ್ದಾರೆ. ‘ನಾನು ಅಥವಾ ಸೂರಜ್ ಇಬ್ಬರಲ್ಲಿ ಒಬ್ಬರು ಉಳಿದುಕೊಳ್ಳಬೇಕಿತ್ತು. ನಮ್ಮಿಬ್ಬರ ಬದಲು ಸ್ಪಂದನಾನ ಉಳಿಸಿಕೊಂಡಿದ್ದನ್ನು ನಾನು ಒಪ್ಪಿಕೊಳ್ಳೋದಿಲ್ಲ. ಅವರಿಗೆ ನಮ್ಮ ರೀತಿಯಲ್ಲಿ ಫಿಸಿಕಲ್ ಟಾಸ್ಕ್ ಆಡೋಕೆ ಬರೋದಿಲ್ಲ’ ಎಂದು ಮಾಳು ಹೇಳಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
