ಬಿಗ್ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾದಾಗಿನಿಂದಲೂ ಬರೀ ಜಗಳಗಳೇ ನಡೆಯುತ್ತಿವೆ. ಲಾಯರ್ ಜಗದೀಶ್ ಅಂತೂ ರೌದ್ರಾವತಾರ ತಾಳಿ ಬಿಟ್ಟಿದ್ದಾರೆ. ಕೆಲವರು ಕಣ್ಣೀರು ಹಾಕಿದ್ದಾರೆ. ಒಂದೆರಡು ದಿನದ ಹಿಂದೆ ಸಹ ಲಾಯರ್ ಜಗದೀಶ್ ವಿರುದ್ಧ ಭರ್ಜರಿಯಾಗಿ ಜಗಳ ಮಾಡಿದ್ದ ಧನರಾಜ್ ಆ ನಂತರ ಹೋಗಿ ಬಿಗ್ಬಾಸ್ ಎದುರು ಕಣ್ಣೀರು ಹಾಕಿದ್ದರು. ಅದಾದ ಬಳಿಕ ಈಗ ಧನರಾಜ್ ತಮ್ಮ ಪ್ರತಿಭೆಯಿಂದ ಮನೆಯ ಸದಸ್ಯರನ್ನು ರಂಜಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕಾಮಿಡಿ ವಿಡಿಯೋಗಳನ್ನು ಹಾಕುತ್ತಿದ್ದ ಧನರಾಜ್, ಬಿಗ್ಬಾಸ್ ಮನೆಯವರಿಗೆ ತನ್ನ ಮಿಮಿಕ್ರಿ ಪ್ರತಿಭೆ ತೋರಿಸಿದ್ದಾರೆ. ‘ಮುಂಗಾರು ಮಳೆ’ ಡೈಲಾಗ್ ಹೇಳಿ ರಂಜಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ