ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ

|

Updated on: Oct 04, 2024 | 3:06 PM

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾದಾಗಿನಿಂದ ಮನೆಯಲ್ಲಿ ಬರೀ ಜಗಳಗಳೇ ನಡೆಯುತ್ತಿದ್ದವು. ಇದೀಗ ಆದರೆ ಈಗ ಸ್ಪರ್ಧಿ ಧನರಾಜ್ ತಮ್ಮ ಮಿಮಿಕ್ರಿ ಪ್ರತಿಭೆ ತೋರಿಸಿ ಮನೆಯ ಸದಸ್ಯರನ್ನು ರಂಜಿಸಿದ್ದಾರೆ.

ಬಿಗ್​ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾದಾಗಿನಿಂದಲೂ ಬರೀ ಜಗಳಗಳೇ ನಡೆಯುತ್ತಿವೆ. ಲಾಯರ್ ಜಗದೀಶ್ ಅಂತೂ ರೌದ್ರಾವತಾರ ತಾಳಿ ಬಿಟ್ಟಿದ್ದಾರೆ. ಕೆಲವರು ಕಣ್ಣೀರು ಹಾಕಿದ್ದಾರೆ. ಒಂದೆರಡು ದಿನದ ಹಿಂದೆ ಸಹ ಲಾಯರ್ ಜಗದೀಶ್ ವಿರುದ್ಧ ಭರ್ಜರಿಯಾಗಿ ಜಗಳ ಮಾಡಿದ್ದ ಧನರಾಜ್ ಆ ನಂತರ ಹೋಗಿ ಬಿಗ್​ಬಾಸ್ ಎದುರು ಕಣ್ಣೀರು ಹಾಕಿದ್ದರು. ಅದಾದ ಬಳಿಕ ಈಗ ಧನರಾಜ್ ತಮ್ಮ ಪ್ರತಿಭೆಯಿಂದ ಮನೆಯ ಸದಸ್ಯರನ್ನು ರಂಜಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕಾಮಿಡಿ ವಿಡಿಯೋಗಳನ್ನು ಹಾಕುತ್ತಿದ್ದ ಧನರಾಜ್, ಬಿಗ್​ಬಾಸ್ ಮನೆಯವರಿಗೆ ತನ್ನ ಮಿಮಿಕ್ರಿ ಪ್ರತಿಭೆ ತೋರಿಸಿದ್ದಾರೆ. ‘ಮುಂಗಾರು ಮಳೆ’ ಡೈಲಾಗ್ ಹೇಳಿ ರಂಜಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on