ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?

Updated on: Jan 09, 2025 | 5:04 PM

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 11 ರ ಫಿನಾಲೆಗೆ ಕೆಲವೇ ದಿನಗಳು ಉಳಿದಿವೆ. ಎಲ್ಲ ಸ್ಪರ್ಧಿಗಳು ಶಕ್ತಿಮೀರಿ ಪ್ರದರ್ಶನ ತೋರುತ್ತಿದ್ದಾರೆ. ಎಲ್ಲರಿಗೂ ಫಿನಾಲೆ ಟಿಕೆಟ್ ಗಿಟ್ಟಿಸಿಕೊಳ್ಳುವ ಆಸೆ. ಆದರೆ ಟಾಸ್ಕ್​ಗಳು ಒಂದಕ್ಕಿಂತಲೂ ಒಂದು ಕಠಿಣ ಆಗುತ್ತಾ ಸಾಗುತ್ತಿವೆ. ಇದೀಗ ಉಗ್ರಂ ಮಂಜು ಹಾಗೂ ಗೌತಮಿ ಒಟ್ಟಾಗಿ ಟಾಸ್ಕ್ ಆಡಿದ್ದು ಯಾರು ಗೆದ್ದಿದ್ದಾರೆ ಎಂಬುದು ಗೊತ್ತಾಗಲಿದೆ.

ಫಿನಾಲೆಗೆ ಇನ್ನು ಕೆಲವೇ ದಿನ ಬಾಕಿ ಇದೆ. ಫಿನಾಲೆಗೆ ಹೋಗಲು ಸ್ಪರ್ಧಿಗಳು ಶಕ್ತಿಮೀರಿ ಯತ್ನಿಸುತ್ತಿದ್ದಾರೆ. ಟಾಸ್ಕ್​ಗಳು ಸಹ ಕಠಿಣ ಆಗುತ್ತಲೇ ಸಾಗುತ್ತಿವೆ. ಇದೀಗ ಕಠಿಣವಾದ ಟಾಸ್ಕ್ ಒಂದನ್ನು ಬಿಗ್​ಬಾಸ್ ಸ್ಪರ್ಧಿಗಳಿಗೆ ನೀಡಿದ್ದಾರೆ. ಸತತವಾಗಿ ನೀರು ತುಂಬುತ್ತಿರುವ ತೊಟ್ಟಿಯಲ್ಲಿ ಒಬ್ಬ ಸ್ಪರ್ಧಿ ಮಲಗಬೇಕು, ಮತ್ತೊಬ್ಬ ಸ್ಪರ್ಧಿ ಆ ತೊಟ್ಟಿಯಿಂದ ನೀರನ್ನು ತೆಗೆದುಕೊಂಡು ಹೋಗಿ ದೂರದಲ್ಲಿ ಇರಿಸಿರುವ ಟ್ಯಾಂಕ್​ಗೆ ಸುರಿಯಬೇಕು, ಯಾರು ಹೆಚ್ಚು ಸಮಯ ಇನ್ನೊಬ್ಬ ಸ್ಪರ್ಧಿಯನ್ನು ಮುಳುಗಿಸದೆ ನೋಡಿಕೊಳ್ಳುತ್ತಾರೋ ಅವರು ಗೆದ್ದಂತೆ. ಈ ಟಾಸ್ಕ್​ನಲ್ಲಿ ಗೌತಮಿ ಮತ್ತು ಉಗ್ರಂ ಮಂಜು ಆಡಿದ್ದಾರೆ. ‘ಇದೊಂದು ಬಾರಿ ಗೆಳೆಯನನ್ನು ನೀರಲ್ಲಿ ಮುಳುಗಿಸಬೇಡಿ’ ಎಂದು ಗೌತಮಿ ಬಳಿ ಮನವಿ ಮಾಡಿದ್ದಾರೆ. ಆದರೆ ಗೌತಮಿ ಮಾಡಿದ್ದೇನು? ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us