ದೋಸ್ತರ ಜೊತೆ ಕೇಕ್ ಕಟ್ ಮಾಡಿದ ಹನುಮಂತ
‘ಬಿಗ್ ಬಾಸ್ ಕನ್ನಡ ಸೀಸನ್ 11’ ವಿನ್ನರ್ ಹನುಮಂತ ಅವರ ಖುಷಿ ಹೆಚ್ಚಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ವಿಜೇತ ಹನುಮಂತ ಅವರು 50 ಲಕ್ಷ ರೂಪಾಯಿ ಹಾಗೂ ಕಪ್ ಜೊತೆ ಊರು ತಲುಪಿದ್ದಾರೆ. 100 ದಿನಗಳ ಬಳಿಕ ಅವರು ಹುಟ್ಟೂರು ತಲುಪಿದ್ದಾರೆ.
ಹನುಮಂತ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಗೆದ್ದ ಬಳಿಕ ಊರು ತಲುಪಿದ್ದಾರೆ. ಅಲ್ಲಿ ಸಂಭ್ರಮ ಮನೆ ಮಾಡಿದೆ. ಹನುಮಂತ ಅವರಿಗೆ ಅದ್ದೂರಿ ಸ್ವಾಗತ ಸಿಕ್ಕಿದೆ. ರಾತ್ರಿ ಅವರು ದೋಸ್ತರ ಜೊತೆ ಸೇರಿ ಕೇಕ್ ಕಟ್ ಮಾಡಿದ್ದಾರೆ. ಈ ಸಂದರ್ಭದ ವಿಡಿಯೋ ಟಿವಿ9ಗೆ ಲಭ್ಯವಾಗಿದೆ. ‘ನನ್ನ ಗೆಳೆಯ ಗೆದ್ದ’ ಎನ್ನುವ ಖುಷಿ ಅವರಲ್ಲಿ ಕಾಣಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
