ಬಿಗ್​​ಬಾಸ್ ಮನೆಯಲ್ಲಿ ಶಾಕಿಂಗ್ ಎಲಿಮಿನೇಷನ್: ಕಣ್ಣೀರು ಹಾಕಿದ ಅಶ್ವಿನಿ

Updated on: Nov 16, 2025 | 3:20 PM

Bigg Boss Kannada 12: ನಾಮಿನೇಟ್ ಆದವರಲ್ಲಿ ರಘು, ಸುಧಿ, ಜಾನ್ವಿ ಮತ್ತು ರಿಶಾ ಇಷ್ಟು ಜನ ಅಂತಿಮವಾಗಿ ಉಳಿದುಕೊಂಡಿದ್ದಾರೆ. ಭಾನುವಾರದ ಎಪಿಸೋಡ್​​ನಲ್ಲಿ ಈ ನಾಲ್ವರಲ್ಲಿ ಒಬ್ಬರು ಮನೆಯಿಂದ ಹೊರಗೆ ಹೋಗಲಿದ್ದಾರೆ. ಈ ಬಾರಿ ಎಲಿಮಿನೇಷನ್ ಅನ್ನು ಭಿನ್ನವಾಗಿ ಆಯೋಜಿಸಲಾಗಿದೆ. ನಾಲ್ಕು ಮಂದಿ ಕಣ್ಣಿಗೆ ಬಟ್ಟೆ ಕಟ್ಟಿ, ಸೂಟ್​​ಕೇಸ್​​ಗಳನ್ನು ಕೊಟ್ಟು, ಬಿಗ್​​ಬಾಸ್ ಗೇಟ್ ಬಳಿ ನಿಲ್ಲಿಸಿ ಬಾಗಿಲು ಹಾಕಲಾಗಿದೆ. ಮತ್ತೆ ಬಾಗಿಲು ತೆರೆದಾಗ ನಾಲ್ವರಲ್ಲಿ ಒಬ್ಬರು ಕಾಣೆ ಆಗಿದ್ದಾರೆ.

ಬಿಗ್​​ಬಾಸ್ (Bigg Boss) ಮನೆಯಲ್ಲಿ ಇಂದು ಎಲಿಮಿನೇಷನ್ ಡೇ. ಈ ವಾರ ಹಲವರು ನಾಮಿನೇಟ್ ಆಗಿದ್ದರು. ಅವರಲ್ಲಿ ಅಂತಿಮವಾಗಿ ರಘು, ಸುಧಿ, ಜಾನ್ವಿ ಮತ್ತು ರಿಶಾ ಇಷ್ಟು ಜನ ಅಂತಿಮವಾಗಿ ಉಳಿದುಕೊಂಡಿದ್ದಾರೆ. ಭಾನುವಾರದ ಎಪಿಸೋಡ್​​ನಲ್ಲಿ ಈ ನಾಲ್ವರಲ್ಲಿ ಒಬ್ಬರು ಮನೆಯಿಂದ ಹೊರಗೆ ಹೋಗಲಿದ್ದಾರೆ. ಈ ಬಾರಿ ಎಲಿಮಿನೇಷನ್ ಅನ್ನು ಭಿನ್ನವಾಗಿ ಆಯೋಜಿಸಲಾಗಿದೆ. ನಾಲ್ಕು ಮಂದಿ ಕಣ್ಣಿಗೆ ಬಟ್ಟೆ ಕಟ್ಟಿ, ಸೂಟ್​​ಕೇಸ್​​ಗಳನ್ನು ಕೊಟ್ಟು, ಬಿಗ್​​ಬಾಸ್ ಗೇಟ್ ಬಳಿ ನಿಲ್ಲಿಸಿ ಬಾಗಿಲು ಹಾಕಲಾಗಿದೆ. ಮತ್ತೆ ಬಾಗಿಲು ತೆರೆದಾಗ ನಾಲ್ವರಲ್ಲಿ ಒಬ್ಬರು ಕಾಣೆ ಆಗಿದ್ದಾರೆ. ಈ ಸಡನ್ ಎಲಿಮಿನೇಷನ್ ನೋಡಿ ಅಶ್ವಿನಿ ಗೌಡ ಕಣ್ಣೀರು ಹಾಕಿದ್ದಾರೆ. ಆದರೆ ಎಲಿಮಿನೇಟ್ ಆದವರು ಯಾರೆಂದು ತಿಳಿಯಲು ಇಂದಿನ ಎಪಿಸೋಡ್ ನೋಡಬೇಕಿದೆ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More