ಅಚಾನಕ್ಕಾಗಿ ವಿನಯ್ ಸೇವೆಗಿಳಿದ ತುಕಾಲಿ, ಹಿಂದಿರುವ ಲೆಕ್ಕಾಚಾರ ಏನು?

|

Updated on: Jan 09, 2024 | 10:45 PM

Bigg Boss: ಬಿಗ್​ಬಾಸ್ ಮನೆಯಲ್ಲಿ ಸ್ವಾಭಿಮಾನಿಯಂತಿದ್ದ ತುಕಾಲಿ ಸಂತು, ಹಠಾತ್ತನೆ ವಿನಯ್ ಗೌಡ ಅವರ ಸೇವೆ ಮಾಡಲು ಪ್ರಾರಂಭಿಸಿದ್ದಾರೆ. ಇದರ ಹಿಂದೆ ಬೇರೆ ಏನಾದರೂ ಯೋಜನೆ ಇದೆಯೇ?

ತುಕಾಲಿ ಸಂತೋಷ್ (Tukali Santhosh), ಬಿಗ್​ಬಾಸ್ (Bigg Boss) ಮನೆಯ ಹಾಸ್ಯಮಯ ವ್ಯಕ್ತಿ. ಆಟದಲ್ಲೂ ಸ್ಟ್ರಾಂಗ್. ಮನೆಯವರ ಬಗ್ಗೆ ತಮ್ಮದೇ ಆದ ಭಿನ್ನ ಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ, ಅದನ್ನು ಆಗಾಗ್ಗೆ ವರ್ತೂರು ಸಂತು ಬಳಿ ಚರ್ಚೆ ಮಾಡುತ್ತಿರುತ್ತಾರೆ. ವರ್ತೂರು ಸಂತು ಅವರೊಬ್ಬರನ್ನು ಬಿಟ್ಟು ಮನೆಯ ಸದಸ್ಯರನ್ನು ಯಾರನ್ನೂ ಪೂರ್ಣವಾಗಿ ನಂಬದ ತುಕಾಲಿ ಸಂತು, ಮಂಗಳವಾರದ ಎಪಿಸೋಡ್​ನಲ್ಲಿ ಅಚಾನಕ್ಕಾಗಿ ವಿನಯ್ ಗೌಡ ಅವರ ಸೇವೆ ಮಾಡಲು ಪ್ರಾರಂಭಿಸಿದ್ದಾರೆ. ತುಕಾಲಿಯ ಸೇವೆ ನೋಡಿ ವರ್ತೂರು ಸಂತು, ವಿನಯ್ ಹಾಗೂ ತನಿಷಾ ಶಾಕ್ ಆಗಿದ್ದಾರೆ. ಈ ಸೇವೆಯ ಹಿಂದೆ ತುಕಾಲಿ ಯಾವುದಾದರೂ ಗೇಮ್ ಪ್ಲ್ಯಾನ್ ಮಾಡಿದ್ದಾರೆಯೇ?

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on