AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್ಲರೂ ಸೇರಿ ತುಕಾಲಿ ಸಂತೋಷ್​ನ ಕುರಿ ಮಾಡಿದ್ರು; ಹೇಗಿತ್ತು ಪ್ಲ್ಯಾನ್?

ಬೇಸರದಲ್ಲಿ ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಬಾಲ್ಕನಿಯಲ್ಲಿ ಕುಳಿತಿದ್ದರು. ಇತ್ತ, ವಿನಯ್ ಹಾಗೂ ಟೀಂ ಇಬ್ಬರನ್ನು ಕುರಿ ಮಾಡಲು ಪ್ಲ್ಯಾನ್ ರೂಪಿಸಿತ್ತು. ಇದು ಯಶಸ್ವಿ ಆಗಿದೆ.

ಎಲ್ಲರೂ ಸೇರಿ ತುಕಾಲಿ ಸಂತೋಷ್​ನ ಕುರಿ ಮಾಡಿದ್ರು; ಹೇಗಿತ್ತು ಪ್ಲ್ಯಾನ್?
ತುಕಾಲಿ ಸಂತೋಷ್
Follow us
ರಾಜೇಶ್ ದುಗ್ಗುಮನೆ
|

Updated on:Jan 04, 2024 | 8:06 AM

ಬಿಗ್ ಬಾಸ್ (Bigg Boss) ಮನೆಯಲ್ಲಿ ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಇಬ್ಬರೂ ಒಟ್ಟಾಗಿ ಇರುತ್ತಾರೆ. ಯಾವಾಗಲೂ ಹರಟೆ ಹೊಡೆಯುತ್ತಾ ಸಮಯ ಕಳೆಯುತ್ತಿರುತ್ತಾರೆ. ಇವರಿಬ್ಬರ ಫೇವರಿಟ್ ಪ್ಲೇಸ್ ಎಂದರೆ ಅದು ಬಾಲ್ಕನಿ. ಅಲ್ಲಿರುವ ಬೀನ್ ಬ್ಯಾಗ್ ಮೇಲೆ ಕುಳಿತು ಇವರು ಹರಟೆ ಹೊಡೆಯುತ್ತಾರೆ. ಈ ಸಂದರ್ಭವನ್ನು ಬಳಕೆ ಮಾಡಿಕೊಂಡು ಇಡೀ ಮನೆಯವರು ತುಕಾಲಿ ಸಂತೋಷ್ ಅವರನ್ನು ಬಕ್ರಾ ಮಾಡಿದ್ದಾರೆ.

ಆಗತಾನೇ ಟಾಸ್ಕ್ ಮುಗಿದಿತ್ತು. ಈ ಟಾಸ್ಕ್​ನಲ್ಲಿ ಸೋತು ಮನೆ ಮಂದಿ ಐದು ಲಕ್ಷ ರೂಪಾಯಿ ಕಳೆದುಕೊಂಡಿದ್ದರು. ಈ ಬೇಸರದಲ್ಲಿ ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಬಾಲ್ಕನಿಯಲ್ಲಿ ಕುಳಿತಿದ್ದರು. ಇತ್ತ, ವಿನಯ್ ಹಾಗೂ ಟೀಂ ಇಬ್ಬರನ್ನು ಕುರಿ ಮಾಡಲು ಪ್ಲ್ಯಾನ್ ರೂಪಿಸಿತ್ತು. ‘ಬಾಲ್ಕನಿಗೆ ಹೋಗಿ ಅವರನ್ನು ಕುರಿ ಮಾಡೋಣ. ಒಬ್ಬೊಬ್ಬರಾಗಿಯೇ ಹೋಗೋಣ. ಅಲ್ಲಿ ಏಕೋ ಬೇಸರ ಎಂದು ಹೇಳೋಣ’ ಎಂದರು ವಿನಯ್.

ಇದಕ್ಕೆ ಎಲ್ಲರೂ ಒಪ್ಪಿಗೆ ಸೂಚಿಸಿದರು. ಮೊದಲು ನಮ್ರತಾ ಹೋದರು. ‘ಅಲ್ಲಿ ಏಕೋ ಬೇಸರ. ಅದಕ್ಕೆ ಇಲ್ಲಿ ಬಂದೆ’ ಎಂದರು. ಆ ಬಳಿಕ ಬಂದ ತನಿಷಾ, ಸಂಗೀತಾ ಕೂಡ ಇದೇ ಮಾತನ್ನು ಹೇಳಿದರು. ಆಗಲೂ ತುಕಾಲಿ ಸಂತೋಷ್​ಗೆ ತಿಳಿಯಲಿಲ್ಲ. ಆ ಬಳಿಕ ಬಂದ ವಿನಯ್ ಕೂಡ ಹಾಗೆಯೇ ಹೇಳಿದರು. ಆಗ ಅವರಿಗೆ ಸ್ವಲ್ಪ ಅನುಮಾನ ಬರೋಕೆ ಆರಂಭ ಆಯಿತು. ನಂತರ ಕಾರ್ತಿಕ್, ಪ್ರತಾಪ್ ಕೂಡ ಹಿಗೆಯೇ ಹೇಳಿದರು.

ಇದನ್ನೂ ಓದಿ: Bigg Boss Kannada: ‘ಬಿಗ್ ಬಾಸ್’ ಕೊಡ್ತಿರೋ ಕಾಟಕ್ಕೆ ಸ್ಪರ್ಧಿಗಳು ಸುಸ್ತೋ ಸುಸ್ತು

ಕೊನೆಯಲ್ಲಿ ಬಂದ ಮೈಕಲ್ ಅವರು, ‘ಅಲ್ಲಿ ಏಕೋ..’ ಎಂದು ಹೇಳಲು ಆರಂಭಿಸದರು. ಆಗ ತುಕಾಲಿ ಸಂತೋಷ್​ಗೆ ಕುರಿ ಆದೆ ಎಂಬುದು ತಿಳಿಯಿತು. ‘ನನಗೆ ಇವರು ಹೇಳೋದು ನೋಡಿಯೇ ಗೊತ್ತಾಗಿತ್ತು. ನಾನು ಕುರಿ ಆಗಿಲ್ಲ’ ಎಂದರು ವರ್ತೂರು ಸಂತೋಷ್. ಏನೂ ತಿಳಿಯದೇ ಕುಳಿತ ತುಕಾಲಿ ಸಂತೋಷ್ ಅವರನ್ನು ಕುರಿ ಎಂದು ಮನೆ ಮಂದಿ ಘೋಷಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:05 am, Thu, 4 January 24

ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ಟಿವಿ9 ವರದಿಗಾರ ಪ್ರಶ್ನಿಸುತ್ತಿದ್ದಂತೆಯೇ ರೆಡ್ ಕಾರ್ಪೆಟ್ ಮಂಗಮಾಯ
ಟಿವಿ9 ವರದಿಗಾರ ಪ್ರಶ್ನಿಸುತ್ತಿದ್ದಂತೆಯೇ ರೆಡ್ ಕಾರ್ಪೆಟ್ ಮಂಗಮಾಯ
ವಕ್ಫ್​ ಆಸ್ತಿ ಕಬಳಿಕೆ ತೆರವು: ವಕ್ಫ್ ನಮ್ಮ ದುಷ್ಮನ್ ಎಂದ ಮುಸ್ಲಿಂ ಮಹಿಳೆ
ವಕ್ಫ್​ ಆಸ್ತಿ ಕಬಳಿಕೆ ತೆರವು: ವಕ್ಫ್ ನಮ್ಮ ದುಷ್ಮನ್ ಎಂದ ಮುಸ್ಲಿಂ ಮಹಿಳೆ
ಜನಸಾಮಾನ್ಯರಿಗೆ ಕಷ್ಟ ತಪ್ಪಿದ್ದಲ್ಲ ಅಂತ ಉಡಾಫೆ ಮಾತಾಡಿದ ಕಾರ್ಯಕರ್ತೆ
ಜನಸಾಮಾನ್ಯರಿಗೆ ಕಷ್ಟ ತಪ್ಪಿದ್ದಲ್ಲ ಅಂತ ಉಡಾಫೆ ಮಾತಾಡಿದ ಕಾರ್ಯಕರ್ತೆ