AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್ಲರೂ ಸೇರಿ ತುಕಾಲಿ ಸಂತೋಷ್​ನ ಕುರಿ ಮಾಡಿದ್ರು; ಹೇಗಿತ್ತು ಪ್ಲ್ಯಾನ್?

ಬೇಸರದಲ್ಲಿ ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಬಾಲ್ಕನಿಯಲ್ಲಿ ಕುಳಿತಿದ್ದರು. ಇತ್ತ, ವಿನಯ್ ಹಾಗೂ ಟೀಂ ಇಬ್ಬರನ್ನು ಕುರಿ ಮಾಡಲು ಪ್ಲ್ಯಾನ್ ರೂಪಿಸಿತ್ತು. ಇದು ಯಶಸ್ವಿ ಆಗಿದೆ.

ಎಲ್ಲರೂ ಸೇರಿ ತುಕಾಲಿ ಸಂತೋಷ್​ನ ಕುರಿ ಮಾಡಿದ್ರು; ಹೇಗಿತ್ತು ಪ್ಲ್ಯಾನ್?
ತುಕಾಲಿ ಸಂತೋಷ್
ರಾಜೇಶ್ ದುಗ್ಗುಮನೆ
|

Updated on:Jan 04, 2024 | 8:06 AM

Share

ಬಿಗ್ ಬಾಸ್ (Bigg Boss) ಮನೆಯಲ್ಲಿ ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಇಬ್ಬರೂ ಒಟ್ಟಾಗಿ ಇರುತ್ತಾರೆ. ಯಾವಾಗಲೂ ಹರಟೆ ಹೊಡೆಯುತ್ತಾ ಸಮಯ ಕಳೆಯುತ್ತಿರುತ್ತಾರೆ. ಇವರಿಬ್ಬರ ಫೇವರಿಟ್ ಪ್ಲೇಸ್ ಎಂದರೆ ಅದು ಬಾಲ್ಕನಿ. ಅಲ್ಲಿರುವ ಬೀನ್ ಬ್ಯಾಗ್ ಮೇಲೆ ಕುಳಿತು ಇವರು ಹರಟೆ ಹೊಡೆಯುತ್ತಾರೆ. ಈ ಸಂದರ್ಭವನ್ನು ಬಳಕೆ ಮಾಡಿಕೊಂಡು ಇಡೀ ಮನೆಯವರು ತುಕಾಲಿ ಸಂತೋಷ್ ಅವರನ್ನು ಬಕ್ರಾ ಮಾಡಿದ್ದಾರೆ.

ಆಗತಾನೇ ಟಾಸ್ಕ್ ಮುಗಿದಿತ್ತು. ಈ ಟಾಸ್ಕ್​ನಲ್ಲಿ ಸೋತು ಮನೆ ಮಂದಿ ಐದು ಲಕ್ಷ ರೂಪಾಯಿ ಕಳೆದುಕೊಂಡಿದ್ದರು. ಈ ಬೇಸರದಲ್ಲಿ ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಬಾಲ್ಕನಿಯಲ್ಲಿ ಕುಳಿತಿದ್ದರು. ಇತ್ತ, ವಿನಯ್ ಹಾಗೂ ಟೀಂ ಇಬ್ಬರನ್ನು ಕುರಿ ಮಾಡಲು ಪ್ಲ್ಯಾನ್ ರೂಪಿಸಿತ್ತು. ‘ಬಾಲ್ಕನಿಗೆ ಹೋಗಿ ಅವರನ್ನು ಕುರಿ ಮಾಡೋಣ. ಒಬ್ಬೊಬ್ಬರಾಗಿಯೇ ಹೋಗೋಣ. ಅಲ್ಲಿ ಏಕೋ ಬೇಸರ ಎಂದು ಹೇಳೋಣ’ ಎಂದರು ವಿನಯ್.

ಇದಕ್ಕೆ ಎಲ್ಲರೂ ಒಪ್ಪಿಗೆ ಸೂಚಿಸಿದರು. ಮೊದಲು ನಮ್ರತಾ ಹೋದರು. ‘ಅಲ್ಲಿ ಏಕೋ ಬೇಸರ. ಅದಕ್ಕೆ ಇಲ್ಲಿ ಬಂದೆ’ ಎಂದರು. ಆ ಬಳಿಕ ಬಂದ ತನಿಷಾ, ಸಂಗೀತಾ ಕೂಡ ಇದೇ ಮಾತನ್ನು ಹೇಳಿದರು. ಆಗಲೂ ತುಕಾಲಿ ಸಂತೋಷ್​ಗೆ ತಿಳಿಯಲಿಲ್ಲ. ಆ ಬಳಿಕ ಬಂದ ವಿನಯ್ ಕೂಡ ಹಾಗೆಯೇ ಹೇಳಿದರು. ಆಗ ಅವರಿಗೆ ಸ್ವಲ್ಪ ಅನುಮಾನ ಬರೋಕೆ ಆರಂಭ ಆಯಿತು. ನಂತರ ಕಾರ್ತಿಕ್, ಪ್ರತಾಪ್ ಕೂಡ ಹಿಗೆಯೇ ಹೇಳಿದರು.

ಇದನ್ನೂ ಓದಿ: Bigg Boss Kannada: ‘ಬಿಗ್ ಬಾಸ್’ ಕೊಡ್ತಿರೋ ಕಾಟಕ್ಕೆ ಸ್ಪರ್ಧಿಗಳು ಸುಸ್ತೋ ಸುಸ್ತು

ಕೊನೆಯಲ್ಲಿ ಬಂದ ಮೈಕಲ್ ಅವರು, ‘ಅಲ್ಲಿ ಏಕೋ..’ ಎಂದು ಹೇಳಲು ಆರಂಭಿಸದರು. ಆಗ ತುಕಾಲಿ ಸಂತೋಷ್​ಗೆ ಕುರಿ ಆದೆ ಎಂಬುದು ತಿಳಿಯಿತು. ‘ನನಗೆ ಇವರು ಹೇಳೋದು ನೋಡಿಯೇ ಗೊತ್ತಾಗಿತ್ತು. ನಾನು ಕುರಿ ಆಗಿಲ್ಲ’ ಎಂದರು ವರ್ತೂರು ಸಂತೋಷ್. ಏನೂ ತಿಳಿಯದೇ ಕುಳಿತ ತುಕಾಲಿ ಸಂತೋಷ್ ಅವರನ್ನು ಕುರಿ ಎಂದು ಮನೆ ಮಂದಿ ಘೋಷಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:05 am, Thu, 4 January 24

Follow Us
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ
SSLC ಬೋರ್ಡ್ ಎಡವಟ್ಟಿಗೆ ಪ್ರತಿಭಾವಂತ ಅಂಧ ವಿದ್ಯಾರ್ಥಿನಿ ಫೇಲ್
SSLC ಬೋರ್ಡ್ ಎಡವಟ್ಟಿಗೆ ಪ್ರತಿಭಾವಂತ ಅಂಧ ವಿದ್ಯಾರ್ಥಿನಿ ಫೇಲ್
SSLC Results 2026: 1 ಅಂಕದಿಂದ ಫಸ್ಟ್ ರ‍್ಯಾಂಕ್ ಮಿಸ್!
SSLC Results 2026: 1 ಅಂಕದಿಂದ ಫಸ್ಟ್ ರ‍್ಯಾಂಕ್ ಮಿಸ್!
ಡೆನ್​ಮಾರ್ಕ್ನಲ್ಲಿ ಎರಡು ರೈಲುಗಳು ಮುಖಾಮುಖಿ ಡಿಕ್ಕಿ, 12 ಮಂದಿಗೆ ಗಾಯ
ಡೆನ್​ಮಾರ್ಕ್ನಲ್ಲಿ ಎರಡು ರೈಲುಗಳು ಮುಖಾಮುಖಿ ಡಿಕ್ಕಿ, 12 ಮಂದಿಗೆ ಗಾಯ
ತೃತೀಯ ಭಾಷೆ ಹಿಂದಿಯಲ್ಲಿ ಅನುತ್ತೀರ್ಣರಾದವರ ಸಂಖ್ಯೆ ಬಾರಿ ಇಳಿಕೆ
ತೃತೀಯ ಭಾಷೆ ಹಿಂದಿಯಲ್ಲಿ ಅನುತ್ತೀರ್ಣರಾದವರ ಸಂಖ್ಯೆ ಬಾರಿ ಇಳಿಕೆ
ವಿದ್ಯಾರ್ಥಿಗಳೇ ಗಮನಿಸಿ: SSLC ಫೇಲ್​​ ಆದವರಿಗೆ 3ನೇ ಬಾರಿ ಪರೀಕ್ಷೆ ಇರಲ್ಲ
ವಿದ್ಯಾರ್ಥಿಗಳೇ ಗಮನಿಸಿ: SSLC ಫೇಲ್​​ ಆದವರಿಗೆ 3ನೇ ಬಾರಿ ಪರೀಕ್ಷೆ ಇರಲ್ಲ