ಎಲ್ಲರೂ ಸೇರಿ ತುಕಾಲಿ ಸಂತೋಷ್​ನ ಕುರಿ ಮಾಡಿದ್ರು; ಹೇಗಿತ್ತು ಪ್ಲ್ಯಾನ್?

ಬೇಸರದಲ್ಲಿ ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಬಾಲ್ಕನಿಯಲ್ಲಿ ಕುಳಿತಿದ್ದರು. ಇತ್ತ, ವಿನಯ್ ಹಾಗೂ ಟೀಂ ಇಬ್ಬರನ್ನು ಕುರಿ ಮಾಡಲು ಪ್ಲ್ಯಾನ್ ರೂಪಿಸಿತ್ತು. ಇದು ಯಶಸ್ವಿ ಆಗಿದೆ.

ಎಲ್ಲರೂ ಸೇರಿ ತುಕಾಲಿ ಸಂತೋಷ್​ನ ಕುರಿ ಮಾಡಿದ್ರು; ಹೇಗಿತ್ತು ಪ್ಲ್ಯಾನ್?
ತುಕಾಲಿ ಸಂತೋಷ್
Follow us
|

Updated on:Jan 04, 2024 | 8:06 AM

ಬಿಗ್ ಬಾಸ್ (Bigg Boss) ಮನೆಯಲ್ಲಿ ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಇಬ್ಬರೂ ಒಟ್ಟಾಗಿ ಇರುತ್ತಾರೆ. ಯಾವಾಗಲೂ ಹರಟೆ ಹೊಡೆಯುತ್ತಾ ಸಮಯ ಕಳೆಯುತ್ತಿರುತ್ತಾರೆ. ಇವರಿಬ್ಬರ ಫೇವರಿಟ್ ಪ್ಲೇಸ್ ಎಂದರೆ ಅದು ಬಾಲ್ಕನಿ. ಅಲ್ಲಿರುವ ಬೀನ್ ಬ್ಯಾಗ್ ಮೇಲೆ ಕುಳಿತು ಇವರು ಹರಟೆ ಹೊಡೆಯುತ್ತಾರೆ. ಈ ಸಂದರ್ಭವನ್ನು ಬಳಕೆ ಮಾಡಿಕೊಂಡು ಇಡೀ ಮನೆಯವರು ತುಕಾಲಿ ಸಂತೋಷ್ ಅವರನ್ನು ಬಕ್ರಾ ಮಾಡಿದ್ದಾರೆ.

ಆಗತಾನೇ ಟಾಸ್ಕ್ ಮುಗಿದಿತ್ತು. ಈ ಟಾಸ್ಕ್​ನಲ್ಲಿ ಸೋತು ಮನೆ ಮಂದಿ ಐದು ಲಕ್ಷ ರೂಪಾಯಿ ಕಳೆದುಕೊಂಡಿದ್ದರು. ಈ ಬೇಸರದಲ್ಲಿ ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಬಾಲ್ಕನಿಯಲ್ಲಿ ಕುಳಿತಿದ್ದರು. ಇತ್ತ, ವಿನಯ್ ಹಾಗೂ ಟೀಂ ಇಬ್ಬರನ್ನು ಕುರಿ ಮಾಡಲು ಪ್ಲ್ಯಾನ್ ರೂಪಿಸಿತ್ತು. ‘ಬಾಲ್ಕನಿಗೆ ಹೋಗಿ ಅವರನ್ನು ಕುರಿ ಮಾಡೋಣ. ಒಬ್ಬೊಬ್ಬರಾಗಿಯೇ ಹೋಗೋಣ. ಅಲ್ಲಿ ಏಕೋ ಬೇಸರ ಎಂದು ಹೇಳೋಣ’ ಎಂದರು ವಿನಯ್.

ಇದಕ್ಕೆ ಎಲ್ಲರೂ ಒಪ್ಪಿಗೆ ಸೂಚಿಸಿದರು. ಮೊದಲು ನಮ್ರತಾ ಹೋದರು. ‘ಅಲ್ಲಿ ಏಕೋ ಬೇಸರ. ಅದಕ್ಕೆ ಇಲ್ಲಿ ಬಂದೆ’ ಎಂದರು. ಆ ಬಳಿಕ ಬಂದ ತನಿಷಾ, ಸಂಗೀತಾ ಕೂಡ ಇದೇ ಮಾತನ್ನು ಹೇಳಿದರು. ಆಗಲೂ ತುಕಾಲಿ ಸಂತೋಷ್​ಗೆ ತಿಳಿಯಲಿಲ್ಲ. ಆ ಬಳಿಕ ಬಂದ ವಿನಯ್ ಕೂಡ ಹಾಗೆಯೇ ಹೇಳಿದರು. ಆಗ ಅವರಿಗೆ ಸ್ವಲ್ಪ ಅನುಮಾನ ಬರೋಕೆ ಆರಂಭ ಆಯಿತು. ನಂತರ ಕಾರ್ತಿಕ್, ಪ್ರತಾಪ್ ಕೂಡ ಹಿಗೆಯೇ ಹೇಳಿದರು.

ಇದನ್ನೂ ಓದಿ: Bigg Boss Kannada: ‘ಬಿಗ್ ಬಾಸ್’ ಕೊಡ್ತಿರೋ ಕಾಟಕ್ಕೆ ಸ್ಪರ್ಧಿಗಳು ಸುಸ್ತೋ ಸುಸ್ತು

ಕೊನೆಯಲ್ಲಿ ಬಂದ ಮೈಕಲ್ ಅವರು, ‘ಅಲ್ಲಿ ಏಕೋ..’ ಎಂದು ಹೇಳಲು ಆರಂಭಿಸದರು. ಆಗ ತುಕಾಲಿ ಸಂತೋಷ್​ಗೆ ಕುರಿ ಆದೆ ಎಂಬುದು ತಿಳಿಯಿತು. ‘ನನಗೆ ಇವರು ಹೇಳೋದು ನೋಡಿಯೇ ಗೊತ್ತಾಗಿತ್ತು. ನಾನು ಕುರಿ ಆಗಿಲ್ಲ’ ಎಂದರು ವರ್ತೂರು ಸಂತೋಷ್. ಏನೂ ತಿಳಿಯದೇ ಕುಳಿತ ತುಕಾಲಿ ಸಂತೋಷ್ ಅವರನ್ನು ಕುರಿ ಎಂದು ಮನೆ ಮಂದಿ ಘೋಷಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:05 am, Thu, 4 January 24

ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ