ಬಿಗ್​ಬಾಸ್ ಮನೆಯಲ್ಲಿ ರಾಜಿ ಸಂಧಾನ, ದೂರಾದವರು ಒಂದಾದರೇ?

Updated on: Jan 22, 2025 | 3:27 PM

Bigg Boss Kannada Season 11: ಬಿಗ್​ಬಾಸ್ ಕನ್ನಡ ಸೀಸನ್ 11ರ ಫಿನಾಲೆ ವಾರ ನಡೆಯುತ್ತಿದೆ. ಈ ವಾರ ಬಿಗ್​ಬಾಸ್ ಮನೆಗೆ ಒಬ್ಬರ ಹಿಂದೊಬ್ಬರು ಅತಿಥಿಗಳು ಬರುತ್ತಲೇ ಇದ್ದಾರೆ. ಇದೀಗ ಡಿವೋರ್ಸ್ ವಕೀಲೆಯೊಬ್ಬರು ಬಿಗ್​ಬಾಸ್ ಮನೆಗೆ ಬಂದಿದ್ದಾರೆ. ಈ ಡಿವೋರ್ಸ್ ವಕೀಲೆ ವ್ಯಕ್ತಿಗಳ ಬೇರ್ಪಡಿಸುವ ವಕೀಲೆ ಅಲ್ಲ ಬದಲಿಗೆ ಜನರನ್ನು ಸೇರಿಸುವ ವಕೀಲೆ.

ಬಿಗ್​ಬಾಸ್ ಕನ್ನಡ ಸೀಸನ್ 11ರ ಫಿನಾಲೆ ವಾರ ನಡೆಯುತ್ತಿದೆ. ಕಡೆಯ ವಾರ ಹೆಚ್ಚಿನ ಗಲಾಟೆ, ಟಾಸ್ಕ್​ಗಳ ಜಂಜಾಟ ಇಲ್ಲ. ಬದಲಿಗೆ ಒಬ್ಬರ ಹಿಂದೊಬ್ಬರು ಅತಿಥಿಗಳು ಮನೆಗೆ ಬರುತ್ತಲೇ ಇದ್ದಾರೆ. ಮನೆಯ ಸದಸ್ಯರು ಸಹ ಬಂದ ಅತಿಥಿಗಳೊಟ್ಟಿಗೆ ಹರಟೆ ಹೊಡೆಯುತ್ತಾ ತಮಾಷೆ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಬಿಗ್​ಬಾಸ್​ನ ಇಷ್ಟು ದಿನದ ಪಯಣದಲ್ಲಿ ಸ್ಪರ್ಧಿಗಳು ಒಬ್ಬರ ಬಗ್ಗೆ ಇನ್ನೊಬ್ಬರು ದ್ವೇಷ, ಸಿಟ್ಟುಗಳನ್ನು ಬೆಳೆಸಿಕೊಂಡಿದ್ದಾರೆ. ಇದೀಗ ಬಿಗ್​ಬಾಸ್ ಮನೆಗೆ ಡೈವರ್ಸ್ ಲಾಯರ್ ಒಬ್ಬರ ಆಗಮನ ಆಗಿದೆ. ಆದರೆ ಇವರು ವ್ಯಕ್ತಿಗಳನ್ನು ಬೇರ್ಪಡಿಸುವ ವಕೀಲರಲ್ಲ ಬದಲಿಗೆ ಮನಸ್ಸುಗಳನ್ನು ಜೋಡಿಸುವ ವಕೀಲರು. ಸಿಟ್ಟು ಮಾಡಿಕೊಂಡು ಜಗಳ ಆಡಿದ್ದ ರಜತ್-ಮಂಜು, ತ್ರಿವಿಕ್ರಮ್-ಮೋಕ್ಷಿತಾ ನಡುವೆ ಸಂಧಾನ ಮಾಡಿದ್ದಾರೆ. ಈ ಸಂಧಾನ ಕಾರ್ಯ ಯಶಸ್ವಿ ಆಯಿತೆ?

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More