ಆನೆಗಳ ದಾಳಿಯಿಂದ ಬೈಕ್ ಸವಾರ ಜಸ್ಟ್ ಮಿಸ್, ವಿಡಿಯೋ ನೋಡಿ

|

Updated on: Oct 19, 2024 | 11:36 AM

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ-ತಮಿಳುನಾಡು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಗೆ ಆನೆಗಳು ಧಿಡೀರನೆ ಎಂಟ್ರಿ ಕೊಟ್ಟಿವೆ. ಒಂದು ಆನೆಯಿಂದ ತಪ್ಪಿಸಿಕೊಳ್ಳಲು ಹೋಗಿ ಬೈಕ್​​ ಸವಾರ ಆನೆಗಳ ಹಿಂಡಿನ ಮುಂದೆ ನಿಂತಿದ್ದಾನೆ. ಮುಂದೇನಾಯ್ತು? ವಿಡಿಯೋ ನೋಡಿ.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ-ತಮಿಳುನಾಡು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಗೆ ಆನೆಗಳು ಧಿಡೀರನೆ ಎಂಟ್ರಿ ಕೊಟ್ಟಿವೆ. ಆನೆಗಳನ್ನು ಕಂಡು ಭಯಗೊಂಡ ಸವಾರರು ವಾಹನ ನಿಲ್ಲಿಸಿದ್ದಾರೆ. ಈ ವೇಳೆ ಕಾಡಾನೆಯೊಂದು ನಿಂತಿದ್ದ ಬೈಕ್​ ಸವಾರನ ಬಳಿಕ ಬಂದಿದೆ. ಗಾಬರಿಯಿಂದ ಬೈಕ್ ಬಿಟ್ಟು ಪರಾರಿಯಾಗಲು ಸವಾರ ಯತ್ನಿಸಿದ್ದಾನೆ. ಕಾಡಾನೆಯಿಂದ ತಪ್ಪಿಸಿಕೊಳ್ಳಲು ಕಾಡಿನೊಳಗೆ ಓಡಿ ಹೋಗಿದ್ದಾನೆ. ಗಾಬರಿಯಿಂದ ಓಡಿ ಹೋಗುವ ಬರದಲ್ಲಿ ಆನೆಗಳ ಗುಂಪಿನ ಎದುರು ಸವಾರ ನಿಂತಿದ್ದಾನೆ. ಆದರೆ ಆನೆಗಳು ಸವಾರನಿಗೆ ಏನು ಮಾಡದೆ ಆತನ ಪಕ್ಕದಲ್ಲಿ ಹಾದು ಹೋಗಿವೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow us on