Karnataka Assembly Elections: ಹೊನ್ನಾಳಿ ಬಳಿ ಸಿಕ್ಕಿಬಿದ್ದ ಬೈಕ್ ಸವಾರನೊಬ್ಬ ಅಕ್ರಮ ಹಣವನ್ನು ಸೊಂಟದ ಸುತ್ತ ಪ್ಯಾಂಟ್​ನಲ್ಲಿ ಸಿಕ್ಕಿಸಿಕೊಂಡಿದ್ದ!

ಅರುಣ್​ ಕುಮಾರ್​ ಬೆಳ್ಳಿ

Updated on: Apr 06, 2023 | 4:22 PM

ಅವನ ಸೊಂಟದಿಂದ ದಾಖಲೆರಹಿತ ರೂ. 7.5 ಲಕ್ಷ ಮೊತ್ತದ ಹಣವನ್ನು ವಶಪಡಿಸಿಕೊಳ್ಳಲಾಗಿದೆ! ಹಣದ ಮೂಲ ಬಗ್ಗೆ ಸೈಫುಲ್ಲಾ ಮತ್ತು ಕುಮಾರ ವಿಚಾರಣೆ ನಡೆಸಲಾಗುತ್ತಿದೆ.

ದಾವಣಗೆರೆ: ಚುನಾವಣಾ ಸಂದರ್ಭದಲ್ಲಿ ಅಕ್ರಮ ಹಣವನ್ನು ಹೇಗೆಲ್ಲ ಸಾಗಿಲಾಗುತ್ತದೆ ಅಂತ ಇಲ್ಲೊಂದು ಫ್ರೆಶ್ ಉದಾಹರಣೆ ಇದೆ. ಘಟನೆ ನಡೆದಿದ್ದು ಹೊನ್ನಾಳಿ (Honnali) ವಿಧಾನಸಭಾ ಕ್ಷೇತ್ರದ ಜೀವನಹಳ್ಳಿ ಚೆಕ್ ಪೋಸ್ಟ್ ಬಳಿ. ಬೈಕ್ ಮೇಲೆ ಕೂತಿರುವ ಆಸಾಮಿಯ ಹೆಸರು ಸೈಪುಲ್ಲಾ (Saifullah) ಅಂತೆ. ಅವನು ತನ್ನ ಸಂಗಡಿಗ ಕುಮಾರ್ (Kumar) ಎನ್ನುವವನ ಜೊತೆ ಹೀಗೆ ಸೊಂಟದ ಸುತ್ತ ಪ್ಯಾಂಟಿನಲ್ಲಿ ನೋಟಿನ ಕಂತೆಗಳನ್ನು ಸಿಕ್ಕಿಸಿಕೊಂಡು ಸಾಗಿಸುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಅವನ ಸೊಂಟದಿಂದ ದಾಖಲೆರಹಿತ ರೂ. 7.5 ಲಕ್ಷ ಮೊತ್ತದ ಹಣವನ್ನು ವಶಪಡಿಸಿಕೊಳ್ಳಲಾಗಿದೆ! ಹಣದ ಮೂಲ ಬಗ್ಗೆ ಸೈಫುಲ್ಲಾ ಮತ್ತು ಕುಮಾರ ವಿಚಾರಣೆ ನಡೆಸಲಾಗುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.