Assembly Session: ಮುಡಾ ಹಗರಣ ಚರ್ಚೆಗೆ ಅವಕಾಶ ಸಿಗುತ್ತಿಲ್ಲವೆಂದು ಸದನದಲ್ಲಿ ಬಿಜೆಪಿ ನಾಯಕರ ಆಕ್ರೋಶ

|

Updated on: Jul 24, 2024 | 1:12 PM

ಸಚಿವ ಭೈರತಿ ಸುರೇಶ್ ಇವತ್ತು ಸದನದಲ್ಲಿ ಹಲವು ಕಾಗದ ಪತ್ರಗಳಿದ್ದ ಒಂದು ಕೆಂಪು ಫೈಲನ್ನು ಪದೇಪದೆ ತೋರಿಸಿ, ಇದರಲ್ಲಿ ಬಿಜೆಪಿ ಆಡಳಿತದಲ್ಲಿ ನಡೆದ ಹಗರಣಗಳ ದಾಖಲೆಗಳಿವೆ ಎನ್ನುತ್ತಿದ್ದರು. ಆದರೆ ಅವರ ಮುಖ್ಯಮಂತ್ರಿಯಮೇಲೆ ಆರೋಪ ಬಂದಾಗ ಹಿಂದಿನ ಸರ್ಕಾರದ ಹಗರಣಗಳ ಫೈಲ್ ತೋರಿಸುವುದು ಉತ್ತರವಾದೀತೆ?

ಬೆಂಗಳೂರು: ಸದನದಲ್ಲಿ ಇವತ್ತು ಮುಡಾ ಹಗರಣ ಚರ್ಚೆಗೆ ಬಂದಾಗ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ಜೋರು ಗಲಾಟೆ ನಡೆಯಿತು. ಬಿಜೆಪಿ ಶಾಸಕರಾದ ಅಶ್ವಥ್ ನಾರಾಯಣ, ಸುನೀಲ್ ಕುಮಾರ ಮತ್ತು ವಿರೋಧ ಪಕ್ಷದ ನಾಯಕ ಆರ್ ಅಶೋಕ ಅವರೆಲ್ಲ ಸ್ಪೀಕರ್ ಯುಟಿ ಖಾದರ್ ಮೇಲೆ ಮುಗಿಬಿದ್ದರು. ಇಷ್ಟು ದೊಡ್ಡ ಹಗರಣದ ಚರ್ಚೆಯಾಗದಿದ್ದರೆ ಕಲಾಪ ನಡೆಸುವುದರಲ್ಲಿ ಏನು ಅರ್ಥ? ನಾವು ಚರ್ಚೆಗೆ ಅವಕಾಶ ಕೇಳಿದರೂ ನೀವು ಕೊಡುತ್ತಿಲ್ಲ ಎಂದು ಸುನೀಲ ಕುಮಾರ್ ಕೋಪದಲ್ಲಿ ಹೇಳಿದರು. ಮುಡಾ ಹಗರಣವನ್ನು ವಿರೋಧ ಪಕ್ಷವಾಗಿ ನಾವು ಚರ್ಚಿಸದಿದ್ದರೆ ಜನ ನಮ್ಮನ್ನು ಏನಂದಾರು? ಅವರಿಗೆ ನಾವು ಉತ್ತರ ಕೊಡಲಾದೀತೆ? ಎಂದು ಅಶೋಕ ಪ್ರಶ್ನಿಸಿದರು. ಅವರು ಮಾತಾಡುವಾಗ ಗೃಹ ಸಚಿವ ಜಿ ಪರಮೇಶ್ವರ್ ಮತ್ತು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹಾಗೂ ಹಿರಿಯ ಶಾಸಕ ಕೆಎಂ ಶಿವಲಿಂಗೇಗೌಡ ಮತ್ತು ಸ್ಪೀಕರ್ ಯುಟಿ ಖಾದರ್ ಒಟ್ಟಿಗೆ ಮಾತಾಡುತ್ತಿದ್ದ ಕಾರಣ ಯಾರು ಏನು ಹೇಳುತ್ತಿದ್ದಾರೆ ಅಂತ ಗೊತ್ತಾಗಲ್ಲ. ಗಲಾಟೆ ಮುದುವರಿಯುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಹೆಲಿಕಾಪ್ಟರ್​ನಲ್ಲಿ ಅವಸರದಿಂದ ಬಂದ ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಹೊತ್ತೊಯ್ದರು? ಕುಮಾರಸ್ವಾಮಿ

Follow us on