AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು ಮುಖ್ಯಮಂತ್ರಿ ಆದ್ರೆ ಶಾಪ, ಬರಗಾಲ ಬಂದುಬಿಡುತ್ತೆ ಅಂತಾ ಬಿಜೆಪಿ ಹೇಳ್ತಿದೆ ಎಂಬ ನೇರ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಕೊಟ್ಟ ಉತ್ತರ ಇಲ್ಲಿದೆ

ನೀವು ಮುಖ್ಯಮಂತ್ರಿ ಆದ್ರೆ ಶಾಪ, ಬರಗಾಲ ಬಂದುಬಿಡುತ್ತೆ ಅಂತಾ ಬಿಜೆಪಿ ಹೇಳ್ತಿದೆ ಎಂಬ ನೇರ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಕೊಟ್ಟ ಉತ್ತರ ಇಲ್ಲಿದೆ

ಸಾಧು ಶ್ರೀನಾಥ್​
|

Updated on: Jul 25, 2023 | 2:28 PM

Share

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಇವಾಗೆಲ್ಲ ಮಳೆ ಆಗ್ತಿದೆ, ನಾನು ಮೂಡನಂಭಿಕೆ ಮೌಡ್ಯ ನಂಬಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಸಿಎಂ ಸಿದ್ದರಾಮಯ್ಯ ಅವರು ಇಂದು ಮಂಗಳವಾರ ಹಾವೇರಿ ಜಿಲ್ಲೆಗೆ ಆಗಮಿಸಿದ್ದಾರೆ. ಅದಕ್ಕೂ ಮುನ್ನ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸಿಎಂ ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ಮಾತನಾಡಿದರು. ಸರ್ಕಾರ ಬಂದು ಇನ್ನೂ ಒಂದು ತಿಂಗಳು ಕಳೆದಿದೆಯಷ್ಟೆ. ಸಚಿವರ ವಿರುದ್ಧ ಶಾಸಕರು ಯಾರೂ ದೂರು ಕೊಟ್ಟಿಲ್ಲ.. ಶಾಸಕಾಂಗ ಸಭೆ ಕರೀರಿ ಅಂದೀದಾರೆ… ಗುರುವಾರ ಶಾಸಕಾಂಗ ಸಭೆ ಕರೆದಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಕಳೆದ ವಾರವೇ ಶಾಸಕಾಂಗ ಸಭೆ ಆಗಬೇಕಿತ್ತು. ರಾಹುಲ್ ಗಾಂಧಿ ಸಭೆ ಮಾಡ್ತೀವಿ ಎಂದಿದ್ರು, ಹಾಗಾಗಿ ಶಾಸಕಾಂಗ ಸಭೆ ಕರೆದಿರಲಿಲ್ಲ ಎಂದು ಶಾಸಕರ ಅಸಮಾಧಾನ ವಿಚಾರಕ್ಕೆ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.

ಎಲ್ಲ ಕಡೆ ಮಳೆ ಆಗ್ತಿದೆ, ಜೂನ್ ನಲ್ಲಿ ನಮಗೆ ಮಳೆ ಕೈ ಕೊಡ್ತು. ಜುಲೈನಲ್ಲಿ ವಾಡಿಕೆಗಿಂತ ಮಳೆ ಜಾಸ್ತಿಯಾಗಿದೆ. ಹಾವೇರಿ ಜಿಲ್ಲೆಯಲ್ಲಿ ಆರೇಳು ಜನ ರೈತರು ಸಾವನ್ನಪ್ಪಿದಾರೆ. ಹೀಗಾಗಿ ಹಾವೇರಿ ಜಿಲ್ಲೆಗೆ ಹೋಗ್ತೀದಿನಿ. ಅಲ್ಲಿಂದ ಮಳೆ ಎಲ್ಲಿ ಅಗಿದೆ ಅಲ್ಲಿ ಭೇಟಿ ನೀಡಲಾಗವುದು. ನಾನು ಕೂಡಾ ಮುಂದಿನ ದಿನಗಳಲ್ಲಿ ಉಡುಪಿ ಮಂಗಳೂರು ಕಡೆ ಹೋಗ್ತೀನಿ. ಇವಾಗೆಲ್ಲ ಮಳೆ ಆಗ್ತಿದೆ, ನಾನು ಮೂಡನಂಭಿಕೆ ಮೌಡ್ಯ ನಂಬಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಸಿದ್ದರಾಮಯ್ಯ ಉತ್ತರಿಸಿದರು. ಕಾಂಗ್ರೆಸ್ ಅಧಿಕಾರಕ್ಕೆ ಬರಗಾಲ ವಿಚಾರಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯೆ ಪ್ರಕೃತಿಯಲ್ಲಿ ಪ್ರವಾಹ, ಮಳೆ ಕೊರತೆ ಸಹಜ ಎಂದ ಸಿದ್ದರಾಮಯ್ಯ ಜಗತ್ತಿನಲ್ಲಿ ಬಹುತೇಕ ಎಲ್ಲ ಕಡೆ ವಾತಾವರಣ ಬದಲಾಗಿದೆ ಎಂದರು.

ಜೆಡಿಎಸ್ ಬಿಜೆಪಿ ಒಂದಾಗೋದು ಗೊತ್ತಿಲ್ಲ. ಅವರಿಬ್ಬರೂ ಮಾತುಕಥೆ ನಡೆಸ್ತಿದಾರೆ ಎಂದ ಸಿದ್ದರಾಮಯ್ಯ ಲೋಕಸಭೆ ಚುನಾವಣೆಯಲ್ಲಿ ನಾವು 15 ರಿಂದ 20 ಸ್ಥಾನ ಗೆಲ್ತೀವಿ -ಅವರು ಒಂದಾದರೂ ಗೆಲ್ತೀವಿ, ಅವರು ಒಂದಾಗದೆ ಇದ್ರೂ ಗೆಲ್ತೀವಿ ಎಂದು ಮಾರ್ಮಿಕವಾಗಿ ಸಿದ್ದರಾಮಯ್ಯ ಹೇಳಿದರು.