ಜನೋತ್ಸವ: ಕಾರ್ಯಕರ್ತರಿಗಾಗಿ ತಯಾರಿಸಿದ ಉಪಹಾರ ಹಾಸ್ಟೆಲ್ ಮತ್ತು ಅನಾಥಾಶ್ರಮಗಳಿಗೆ ಕಳಿಸಲಾಗುತ್ತಿದೆ

Edited By: ಅರುಣ್​ ಕುಮಾರ್​ ಬೆಳ್ಳಿ

Updated on: Jul 28, 2022 | 11:47 AM

ಆಹಾರವನ್ನು ಹಾಸ್ಟೆಲ್ ಮತ್ತು ಅನಾಥಾಶ್ರಾಮಗಳಿಗೆ ಕಳಿಸುವ ನಿರ್ಧಾರವನ್ನು ಬಿಜೆಪಿ ನಾಯಕರು ಮಾಡಿದ್ದಾರೆ.

ದೊಡ್ಡಬಳ್ಳಾಪುರದಲ್ಲಿ ಇಂದು ನಡೆಯಬೇಕಿದ್ದ ಜನೋತ್ಸವ (Janotsava) ರದ್ದಾಗಿರುವ ಕಾರಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಬೇಕಿದ್ದ ಪಕ್ಷದ ಸಾವಿರಾರು ಕಾರ್ಯಕರ್ತರ ಬೆಳಗಿನ ಉಪಹಾರಕ್ಕಾಗಿ ಭಾರಿ ಪ್ರಮಾಣದಲ್ಲಿ ಸಿದ್ಧಪಡಿಸಲಾಗಿದ್ದ ಪುಲಾವ್ (pulav), ಕೋಸಂಬರಿ ಮತ್ತು ಬಾದೂಶಾ ಹಾಗೇಯೇ ಉಳಿದುಬಿಟ್ಟಿದೆ. ಆಹಾರವನ್ನು ಹಾಸ್ಟೆಲ್ (hostel) ಮತ್ತು ಅನಾಥಾಶ್ರಾಮಗಳಿಗೆ ಕಳಿಸುವ ಯೋಚನೆ ಬಿಜೆಪಿ ನಾಯಕರದ್ದು.

Follow Us
Web contact

TV9 Kannada

Read More