ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..ಪ್ರಯಾಣಿಕರು ಪರದಾಟ

Edited By:

Updated on: May 14, 2025 | 4:47 PM

ವಿಜಯಪುರ ಜಿಲ್ಲೆ ಸಿಂದಗಿ ಬಸ್ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ ತಲೆದೂರಿದೆ. ಡಿಪೋದಿಂದ ಹೊರಡುವ ಬಸ್ ಗಳಿಗೆ ಡೀಸೆಲ್ ಇಲ್ಲದ ಕಾರಣ ಬಸ್ ಸಂಚಾರದಲ್ಲಿ ವಿಳಂಭವಾಗಿದೆ. ಇಂದು (ಮೇ 14) ಬೆಳಿಗ್ಗೆ 10 ಗಂಟೆವರೆಗೂ ಡೀಸೆಲ್ ಇಲ್ಲದ ಕಾರಣ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಬಸ್ ಹೊರಡದೇ ಡಿಪೋದಲ್ಲಿದ್ದ ನಿಲ್ಲುವಂತಾಗಿತ್ತು. ಬೆಳಗಾವಿಯ ಹಿಂದೂಸ್ತಾನ್ ಪೆಟ್ರೋಲಿಯಂನಿಂದ ಸಿಂದಗಿ ಬಸ್ ಡಿಪೋಗೆ ಡೀಸೆಲ್ ಪೂರೈಕೆಯಾಗುತ್ತದೆ. ಇತ್ತೀಚೆಗೆ ಡೀಸಲ್ ಪೂರೈಕೆಯಲ್ಲಿ ಸಮಸ್ಯೆಯಾಗುತ್ತಿದೆ ಎಂದು ಸಿಂದಗಿ ಡಿಪೋ ಮೂಲಗಳಿಂದ ತಿಳಿದುಬಂದಿದೆ.

ವಿಜಯಪುರ, (ಮೇ 14): ವಿಜಯಪುರ ಜಿಲ್ಲೆ ಸಿಂದಗಿ ಬಸ್ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ ತಲೆದೂರಿದೆ. ಡಿಪೋದಿಂದ ಹೊರಡುವ ಬಸ್ ಗಳಿಗೆ ಡೀಸೆಲ್ ಇಲ್ಲದ ಕಾರಣ ಬಸ್ ಸಂಚಾರದಲ್ಲಿ ವಿಳಂಭವಾಗಿದೆ. ಇಂದು (ಮೇ 14) ಬೆಳಿಗ್ಗೆ 10 ಗಂಟೆವರೆಗೂ ಡೀಸೆಲ್ ಇಲ್ಲದ ಕಾರಣ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಬಸ್ ಹೊರಡದೇ ಡಿಪೋದಲ್ಲಿದ್ದ ನಿಲ್ಲುವಂತಾಗಿತ್ತು. ಸಿಂದಗಿ ಬಸ್ ಡಿಪೋದಿಂದ ವಿವಿಧ ಜಿಲ್ಲೆ ತಾಲೂಕು ಹಾಗೂ ಗ್ರಾಮಗಳಿಗೆ 100 ಕ್ಕೂ ಆಧಿಕ ಬಸ್ ಗಳು ತೆರಳುತ್ತವೆ. ಡೀಸೆಲ್ ಇಲ್ಲದ ಕಾರಣ ಬೆಳಿಗ್ಗೆ ಬಸ್ ಗಳ ಸಂಚಾರದಲ್ಲಿ ವಿಳಂಭವಾಗಿದೆ. ಇದರಿಂದ ಸಿಂದಗಿಯಿಂದ ಇತರೆ ಭಾಗಗಳಿಗೆ ತೆರಳೋ ಪ್ರಯಾಣಿಕರಿಗೆ ಸಮಸ್ಯೆ ಉಂಟಾಗಿದೆ.

ಬೆಳಿಗ್ಗೆ 10 ಗಂಟೆ ಬಳಿಕ ಡಿಸೇಲ್​ ಪೂರೈಕೆಯಾದ ನಂತರ ಬಸ್​ಗಳು ತುಂಬಿಸಿಕಂಡು ಸಂಚಾರಕ್ಕೆ ಅಣಿಯಾದವು. ಬೆಳಗಾವಿಯ ಹಿಂದೂಸ್ತಾನ್ ಪೆಟ್ರೋಲಿಯಂನಿಂದ ಸಿಂದಗಿ ಬಸ್ ಡಿಪೋಗೆ ಡೀಸೆಲ್ ಪೂರೈಕೆಯಾಗುತ್ತದೆ. ಇತ್ತೀಚೆಗೆ ಡೀಸಲ್ ಪೂರೈಕೆಯಲ್ಲಿ ಸಮಸ್ಯೆಯಾಗುತ್ತಿದೆ ಎಂದು ಸಿಂದಗಿ ಡಿಪೋ ಮೂಲಗಳಿಂದ ತಿಳಿದುಬಂದಿದೆ. ಈ ಸಮಸ್ಯೆ ಹಲವಾರು ತಿಂಗಳುಗಳಿಂದ ನಡೆದಿದೆ. ಸಿಂದಗಿ ಡಿಪೋಕ್ಕೆ ಸರಬರಾಜಾಗುತ್ತಿರುವ ಡಿಸೈಲ್ ಪೂರೈಕೆ ವಿಳಂಭವಾಗುತ್ತಿದೆ.

Follow Us
Ashok Yadalli

ನನ್ನ ಹೆಸರು ಅಶೋಕ ಯಡಳ್ಳಿ, ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಕಳೆದ 2012 ರಿಂದ ವಿಜಯಪುರ ಜಿಲ್ಲಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೂ ಮುನ್ನ ಹೈದರಾಬಾದಿನ ರಾಮೋಜಿ ರಾವ್ ಪೀಲ್ಮ್ ಸಿಟಿಯಲ್ಲಿದ್ದ ಈಟಿವಿ ಕನ್ನಡ ಮನರಂಜನೆ ಹಾಗೂ ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಇದು ನನ್ನ ಕೆಲಸದ ಬಗ್ಗೆ ಹೇಳಿರೋ ಮಾಹಿತಿಯಾಗಿದ್ದು ವೈಯುಕ್ತಿಕ ಮಾಹಿತಿ ಬಗ್ಗೆ ಹೇಳದಾದರೆ. ನಾನು ಮೂಲತಃ ಧಾರವಾಡ ಜಿಲ್ಲೆಯವ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮ ನಮ್ಮೂರು. ತಂದೆ ತಾಯಿ ಸಹೋದರ ಸಹೋದರಿಯರ ತುಂಬು ಕುಟುಂಬ. ಮೂಲತಃ ಕೃಷಿ ಕುಟುಂಬವಾಗಿದ್ದು, ಹಿರಿಯರಿಂದ ಬಂದ ಜಮೀನುಗಳಿವೆ. ಪ್ರಾಥಮಿಕ ಶಿಕ್ಷಣ ನಮ್ಮೂರಲ್ಲೇ ಬಳಿಕ ಹೈಸ್ಕೂಲ್ ನಿಂದ ಹಿಡಿದು ಪಿಜಿವರೆಗೂ ಧಾರವಾಡ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಟಿವಿ9 ನಲ್ಲಿ ಹಲವಾರು ಉತ್ತಮ ವರದಿಗಳನ್ನು ನೀಡಿದ ಹೆಮ್ಮೆ ತೃಪ್ತಿ ನನಗಿದೆ. ಆಲಮೇಲದ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಬಹಿರಂಗ ಮಾಡಿದ್ದು, ವಿಜಯಪುರ ಬಾಗಲಕೋಟೆಯಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಕ್ಕಳ ಕುರಿತ ವರದಿ. ಹಾವಿನ ಸೇಡಿಗೆ ಒಳಗಾಗಿದ್ದ ಯುವಕನ ಸಮಸ್ಯೆ ಬಗೆ ಹರಿಸಿದ್ದು. ಉಷ್ಣ ವಿದ್ಯುತ್ ಸ್ಥಾವರದ ಗಲಾಟೆ ಹೀಗೆ ಹಲವಾರು ವಿಶೇಷ ಸುದ್ದಿಗಳು, ಚುನಾವಣೆ, ರಾಜಕೀಯ, ಕ್ರೀಡೆ, ಹೀಗೂ ಉಂಟೇ, ವಾರೆಂಟ್, ಮಾರುವೇಷ, ಸಾಧನೆ, ಕೃಷಿ ಹೀಗೆ ಅನೇಕ ವಿಚಾರಗಳ ಕುರಿತ ಸುದ್ದಿಗಳಿಗೆ ನ್ಯಾಯ ಒದಗಿಸಿದ್ದೇನೆಂದು ನಂಬಿದ್ದೇನೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉತ್ತಮ ವರದಿಗಳನ್ನು ಮಾಡುವ ಹಂಬಲ - ಆಸಕ್ತಿಯಿದೆ. ಕ್ರೀಡೆ, ಸಾಮಾಜಿಕ, ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿದೆ. ಧನ್ಯವಾದಗಳು.......

Read More