ಇದು ದಸರಾ ಹಬ್ಬದ ವೀಕೆಂಡ್, ಬಸ್ ನಿಲ್ದಾಣ ಮತ್ತು ಬಸ್ಸುಗಳು ಫುಲ್ ರಶ್!

|

Updated on: Oct 10, 2024 | 6:55 PM

ಬೆಂಗಳೂರಿಂದ ದೂರದ ಊರುಗಳಿಗೆ ತೆರಳುವವರಿಗೆ ಮಳೆರಾಯ ತೊಂದರೆ ಕೊಡಲಾರಂಭಿಸಿದ್ದಾನೆ. ಹವಾಮಾನ ಇಲಾಖೆಯ ನೀಡಿರುವ ಮುನ್ಸೂಚನೆ ಪ್ರಕಾರ ಲಕ್ಷದ್ವೀಪದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಇಂದಿನಿಂದ ಅಕ್ಟೋಬರ್ 14ರವರೆಗೆ ಬೆಂಗಳೂರು ಸೇರಿದಂತೆ ಎಲ್ಲ ಜಿಲ್ಲೆಗಳಲ್ಲಿ ಮಳೆಯಾಗಲಿದೆ.

ಬೆಂಗಳೂರು: ಇವತ್ತಿನ್ನೂ ಗುರುವಾರ ಹಾಗಾಗಿ ವೀಕೆಂಡ್ ಅಲ್ಲ, ಆದರೆ ಇದು ಹಬ್ಬವನ್ನೊಳಗೊಂಡ ವೀಕೆಂಡ್. ಇವತ್ತು ಆಯುಧ ಪೂಜೆ, 12 ರಂದು ವಿಜಯದಶಮಿ, 13 ಸಂಡೇ-ಹಾಗಾಗಿ ಜನ ದಸರಾ ಹಬ್ಬ ಆಚರಿಸಲು ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ನಗರದ ಕೆಂಪೇಗೌಡ ಬಸ್ ಟರ್ಮಿನಲ್​​ನಲ್ಲಿ ಇಂದು ಸಾಯಂಕಾಲ ಕಂಡುಬಂದ ದೃಶ್ಯವಿದು. ಹೆಚ್ಚುಕಡಿಮೆ ಎಲ್ಲ ಬಸ್ ಗಳು ಫುಲ್. ಮುಂಗಡ ಬುಕ್ಕಿಂಗ್ ಮಾಡಿಕೊಂಡವರಿಗೆ ಸುಖಕರ ಪ್ರಯಾಣ, ಮಾಡದವರಿಗೆ ಬಸ್ಸಲ್ಲಿ ತಳ್ಳಾಟ-ನೂಕಾಟ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಅರಮನೆಯ ಆಯುಧ ಮತ್ತು ವಾಹನಗಳಿಗೆ ಯದುವೀರ್ ಪೂಜೆ ಸಲ್ಲಿಸುವುದನ್ನು ಆಸ್ಥೆ ಮತ್ತು ಕುತೂಹಲದಿಂದ ವೀಕ್ಷಿಸಿದ ಪುಟಾಣಿ ಆದ್ಯವೀರ್

Follow us on