ಎಮ್ ಪಿ ರೇಣುಕಾಚಾರ್ಯರ ಮನೆಗೆ ಬಿವೈ ವಿಜಯೇಂದ್ರ, ಭಾವುಕರಾದ ಶಾಸಕರು

Edited By:

Updated on: Nov 07, 2022 | 12:21 PM

ಚಂದ್ರಶೇಖರ್ ತಮ್ಮೊಂದಿಗೆ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ ಸಂಗತಿಯನ್ನು ವಿವರಿಸಿ, ಚಂದ್ರಶೇಖರನ ಫೋಟೊಗಳನ್ನು ವಿಜಯೇಂದ್ರಗೆ ತೋರಿಸಿ ಶಾಸಕರು ಭಾವುಕರಾದರು.

ದಾವಣಗೆರೆ: ಭಾರತೀಯ ಜನತಾ ಪಕ್ಷ ಕರ್ನಾಟಕ ಘಟಕದ ಅಧ್ಯಕ್ಷ ಬಿ ವೈ ವಿಜಯೇಂದ್ರ (BY Vijayendra) ಅವರು ಕಳೆದ ವಾರ ಸಹೋದರನ ಮಗ ಚಂದ್ರಶೇಖರ್ ನನ್ನು (Chandrashekar,) ಕಳೆದುಕೊಂಡು ದುಃಖಸಾಗರದಲ್ಲಿ ಮುಳುಗಿರುವ ಹೊನ್ನಾಳಿ ಶಾಸಕ ಎಮ್ ಪಿ ರೇಣುಕಾಚಾರ್ಯ (MP Renukacharya) ಅವರ ಮನೆಗೆ ಆಗಮಿಸಿ ಶಾಸಕ ಮತ್ತು ಕುಟುಂಬಸ್ಥರನ್ನು ಸಂತೈಸಿದರು. ಈ ವೇಳೆ ರೇಣುಕಾಚಾರ್ಯ ಅವರು ಚಂದ್ರಶೇಖರ್ ತಮ್ಮೊಂದಿಗೆ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ ಸಂಗತಿಯನ್ನು ವಿವರಿಸಿ ತಾವು ಪ್ರೀತಿಯಿಂದ ಚಂದ್ರು ಅಂತ ಕರೆಯುತ್ತಿದ್ದ ಚಂದ್ರಶೇಖರನ ಫೋಟೊಗಳನ್ನು ವಿಜಯೇಂದ್ರಗೆ ತೋರಿಸಿ ಭಾವುಕರಾದರು.

 

Follow Us
Web contact

TV9 Kannada

Read More